1. ಅಗ್ರಿಪಿಡಿಯಾ

ಶ್ರೀಗಂಧ ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹಧನ..ಅರ್ಜಿ ಸಲ್ಲಿಕೆ ಹೇಗೆ..?

Maltesh
Maltesh
Government also announced subsidy on sandalwood cultivation

ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮರ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಹಾಗೂ ಅವರ ಸಹಕಾರವನ್ನು ಪಡೆಯುವ ದೃಷ್ಟಿಯಿಂದ ಸಾರ್ವಜನಿಕ ಸಹಬಾಗಿತ್ವದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ಹೊಸ ಯೋಜನೆಯನ್ನು 2011-12ನೇ ಸಾಲಿನಿಂದ ಪ್ರಾರಂಭಿಸಲಾಗಿದೆ.

ಈ ಕಾರ್ಯಕ್ರಮದ ಅನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 35/- ಗಳನ್ನು ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 40/- ಹಾಗೂ ರೂ. 50/- ಹೀಗೆ ಒಟ್ಟು ರೂ. 125/- ಗಳನ್ನು ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ.

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಅಚ್ಚರಿ ಆದರು ಸತ್ಯ..ಅಣಬೆಗಳು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ..!-ಅಧ್ಯಯನ

ಈ ರೀತಿ ಪಾವತಿಸುತ್ತಿರುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ನೆಡಲು ಖರ್ಚು ಮಾಡುವ ಹಣವನ್ನು ತುಂಬಿಕೊಳ್ಳಬಹುದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಸಸಿಸಗಳನ್ನು ನೆಟ್ಟು ಬೆಳಸಿದ್ದಲ್ಲಿ ಗಣನೀಯವಾಗಿ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಪ್ರೋತ್ಸಾಹ ಧನ ಪಡಿಯುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಹೆಸರನ್ನು ನೋಂದಾಯಿಸುಕೊಳ್ಳುವದು ಹೇಗೆ..?

ಕೃಅಪ್ರೋಯೋ ಅಡಿಯಲ್ಲಿ ಸಸಿಗಳನ್ನು ನೆಡುವ ಇಚ್ಛೆಯುಳ್ಳ ರೈತರು ಸಮೀಪದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕು: ಅರ್ಜಿದಾರರ ಹೆಸರು, ವಿಳಾಸ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಸಸಿ ನೆಡಲು ಉದ್ದೇಶಿಸಿರುವ ಭೂಮಿಯ ಪಹಣಿ, ಭೂಮಿಯ ಕೈ ನಕ್ಷೆ, ಅಗತ್ಯವಿರುವ ಸಸಿಗಳ ವಿವರ (ಪ್ರಭೇದ, ಸಸಿಗಳ ಸಂಖ್ಯೆ, ಪಾಲಿ ಬ್ಯಾಗ್‌ಗಳ ಗಾತ್ರ ಇತ್ಯಾದಿ) ಮತ್ತು ಅರ್ಜಿದಾರರ ಬ್ಯಾಂಕ್‌ ಖಾತೆಯ ವಿವರ. ಅರ್ಜಿಯ ಜೊತೆ ನೋಂದಣಿ ಶುಲ್ಕ ರೂ. 10/- ನೀಡಬೇಕು.

ನೋಂದಣಿಯನ್ನು ಯಾವಾಗ ಮಾಡಬೇಕು

ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ನೋಂದಣಿಯನ್ನು ಮಾಡಬೇಕು 

ಒಂದೇ ಗಿಡ ನೆಟ್ಟರೆ ಸಾಕು 25 ವರ್ಷಗಳವರೆಗೆ ಲಾಭ!

NEW Techniques IN AGRICULTURE! ಹೊಸ ಕೃಷಿ?

ಸಸಿಗಳನ್ನು ಪಡೆಯುವುದು ಹೇಗೆ

ರ್ಜಿದಾರರು ಸಮೀಪದ ನರ್ಸರಿಗೆ ಭೇಟಿ ನೀಡಬೇಕು ಮತ್ತು ಈ ಕೆಳಗಿನ ಸಬ್ಸಿಡಿ ದರಗಳನ್ನು ಪಾವತಿಸಿ ಅರ್ಜಿ ಸಲ್ಲಿಸಿದ ಸಸಿಗಳನ್ನು ಪಡೆದುಕೊಳ್ಳಬೇಕು. • 5”x8” ಮತ್ತು 6”x9” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 1/- • 8”x12” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 3/- • 10”x16” ಮತ್ತು 14”20” ಪಾಲಿಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 5/-

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ, ನರ್ಸರಿಯ ಸಂಬಂಧಿತ ಉಸ್ತುವಾರಿ ಸಿಬ್ಬಂದಿಯಿಂದ ಅದನ್ನು ಸೂಚಿಸುವ ಲಿಖಿತ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಲಿಖಿತ ಅನುಮೋದನೆಯಲ್ಲಿ ಸಲ್ಲಿಸುವ ಮೂಲಕ, ಸಸಿಗಳು ಲಭ್ಯವಿರುವ ವಲಯ ಅಥವಾ ವಿಭಾಗದ ಇನ್ನೊಂದು ನರ್ಸರಿಯಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಅರ್ಜಿದಾರ ಸಸಿಗಳನ್ನು ಪಡೆದುಕೊಳ್ಳಲು ವಿಫಲನಾದರೆ, ಅರಣ್ಯ ಇಲಾಖೆ ಆ ವರ್ಷ ಸಸಿಗಳನ್ನು ಬೆಳೆಸುತ್ತದೆ ಮತ್ತು ಮುಂದಿನ ಮಳೆಗಾಲಕ್ಕೆ ಸಸಿಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತದೆ.ವಣೆ ಮಾಡಲಾಗುತ್ತದೆ.

ರಸಗೊಬ್ಬರದ ಕೊರತೆ..ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟವಾಗ್ತಿದೆ DAP

ಪ್ರೋತ್ಸಾಹಧನವನ್ನು ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ ಏನು

ಪ್ರತಿ ಫಲಾನುಭವಿ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹಧನ ಪಡೆಯಲು ಅರ್ಹನಾಗಿರುತ್ತಾನೆ. ಸಸಿ ನೆಡುವ ಒಟ್ಟು ಪ್ರದೇಶಕ್ಕೆ ಸಂಬಂಧಿಸಿ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. 2017-18ರ ಬಳಿಕ ನೆಡಲಾದ ಸಸಿಗಳಿಗೆ ಸಂಬಂಧಿಸಿ, ಈ ಕೆಳಗಿನ ಅನುಸೂಚಿಯ ಪ್ರಕಾರ ಮೂರು ವರ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಸಸಿ ನೆಟ್ಟ ಒಂದು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 30/-  ಸಸಿ ನೆಟ್ಟ ಎರಡು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 30/-  

ಸಸಿ ನೆಟ್ಟ ಬಳಿಕ ಮೂರು ವರ್ಷ ಪೂರೈಸುವ ಪ್ರತಿ ಸಸಿಗೆ ರೂ. 40/- 2017-18ಕ್ಕಿಂತ ಮುಂಚೆ ನೆಡಲಾದ ಸಸಿಗಳಿಗೆ ಸಂಬಂಧಿಸಿ, ಈ ಕೆಳಗಿನ ಅನುಸೂಚಿಯ ಪ್ರಕಾರ ಮೂರು ವರ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ: ಸಸಿ ನೆಟ್ಟ ಒಂದು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 10/-. ಸಸಿ ನೆಟ್ಟ ಎರಡು ವರ್ಷಗಳವರೆಗೆ ಬದುಕಿ ಉಳಿಯುವ ಪ್ರತಿ ಸಸಿಗೆ ರೂ. 15/- .ಸಸಿ ನೆಟ್ಟ ಬಳಿಕ ಮೂರು ವರ್ಷ ಪೂರೈಸುವ ಪ್ರತಿ ಸಸಿಗೆ ರೂ. 20/-

Pashu Dhan Bima Yojana! 70% Subsidyಯೊಂದಿಗೆ ನಿಮ್ಮ ಜಾನುವಾರುಗಳಿಗೆ ವಿಮೆ ಪಡೆಯಿರಿ

Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!

ಪ್ರೋತ್ಸಾಹಧನದ ವಿತರಣೆಗೆ ಇರುವ ಪ್ರಕ್ರಿಯೆ ಏನು

ಪ್ರತಿ ವರ್ಷ, ಕೃಅಪ್ರೋಯೋ ಅಡಿಯಲ್ಲಿ ರೈತರು ಸಸಿಗಳನ್ನು ನೆಟ್ಟಿರುವ ಪ್ರದೇಶಗಳನ್ನು ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು/ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ನೆಟ್ಟ ಸಸಿಗಳ ಬದುಕುಳಿದಿರುವಿಕೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ವಿವರಗಳನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಸಂಬಂಧಿಸಿದ ವಲಯ/ ಅರಣ್ಯ ವಿಭಾಗದ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ, ಅಲ್ಲಿಂದ ಪ್ರೋತ್ಸಾಹಧನ ಪಾವತಿ ಮಾಡುವಂತೆ ಕೋರಿ ಸಮಗ್ರ ವರದಿಯನ್ನು ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ.

ಪ್ರಧಾನ ಕಚೇರಿಯಲ್ಲಿ ವರದಿಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಪ್ರೋತ್ಸಾಹಧನ ಮೊತ್ತವನ್ನು ಘಟಕ ಕಚೇರಿಗಳಿಗೆ ವಿತರಣೆ ಮಾಡಲಾಗುತ್ತದೆ, ಅವರು ಫಲಾನುಭವಿಯ ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್‌ನ ಹೆಸರು, ಐಎಫ್‌ಎಸ್‌ಸಿ ಕೋಡ್, ಮುಂತಾದ ವಿವರಗಳ ಆಧಾರದಲ್ಲಿ ಬಿಲ್‌ಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಸರ್ಕಾರದ ಖಜಾನೆಗೆ ಸಲ್ಲಿಸುತ್ತಾರೆ. ಆನಂತರ, ಇಸಿಎಸ್‌ ಮೂಲಕ ಖಜಾನೆಯಿಂದ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಚೆಕ್‌ಗಳನ್ನು ವರ್ಗಾವಣೆ ಮಾಡಲಾಗುವುದು..

ಚಹಾ ಪ್ರಿಯರೇ ಗಮನಿಸಿ: ಬರೋಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟವಾಯ್ತು ಟೀ..! ಏನಿದರ ವಿಶೇಷತೆ..?

Published On: 21 June 2022, 02:01 PM English Summary: Government also announced subsidy on sandalwood cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.