1. ಸುದ್ದಿಗಳು

ಕೇಳಿ ಕೇಳಿ ಕೇಳಿ! ಫ್ರೀ ನಲ್ಲಿ ಸಿಗಲಿದೆ ಬೆಳಕು? 2021 ರಲ್ಲಿ ಶುರುವಾಗಿದೆ ಸರ್ಕಾರದ ವತಿಯಿಂದ ಫ್ರೀ ಯಾಗಿ ಬಲ್ಬ್ ಕೊಡುವ ಪ್ರಕ್ರಿಯೆ.

Ashok Jotawar
Ashok Jotawar
LED Bulb

ಯಾರಿಗೆ ಸಿಗಲಿದೆ? ಎಷ್ಟು ಸಿಗಲಿದೆ? ಇದರಿಂದ ಏನು ಲಾಭ?

ಸರಕಾರದಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂತಹ ಒಂದು ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಇಂದು ನಿಮಗೆ ನೀಡಲಿದ್ದೇವೆ. ಈ ಒಂದು ಯೋಜನೆಯ  ಹೆಸರು ಪ್ರಧಾನ ಮಂತ್ರಿ ಗ್ರಾಮೀಣ ಉಜಾಲಾ ಯೋಜನೆ. ನಿಮಗೆ ಲೇಖವನ್ನು  ಓದುವ ಮೂಲಕ ನೀವು ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಪ್ರಧಾನ ಮಂತ್ರಿ ಗ್ರಾಮೀಣ ಉಜಾಲಾ ಯೋಜನೆ ಎಂದರೇನು?,

ಇದರ ಪ್ರಯೋಜನಗಳು, ಉದ್ದೇಶ, ವೈಶಿಷ್ಟ್ಯಗಳು, ಅರ್ಹತೆ, ಪ್ರಮುಖ ದಾಖಲೆಗಳು, ಅಪ್ಲಿಕೇಶನ್ ಪ್ರಕ್ರಿಯೆ ಇತ್ಯಾದಿ. ಆದ್ದರಿಂದ ಸ್ನೇಹಿತರೇ, ನೀವು ಪ್ರಧಾನಮಂತ್ರಿ ಗ್ರಾಮೀಣ ಉಜಾಲಾ ಯೋಜನೆ 2021 ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಪಡೆಯಲು ಬಯಸಿದರೆ, ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಲು ವಿನಂತಿಸಲಾಗಿದೆ.

ಪ್ರಧಾನ ಮಂತ್ರಿ ಗ್ರಾಮೀಣ ಉಜಾಲ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ತಲಾ 10 ರೂ.ಗೆ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗುವುದು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸುಮಾರು ಮೂರರಿಂದ ನಾಲ್ಕು ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗುವುದು.

ಪ್ರಧಾನಮಂತ್ರಿ ಗ್ರಾಮೀಣ ಉಜಾಲಾ ಯೋಜನೆ 2021 ಅನ್ನು ಪಬ್ಲಿಕ್ ಸೆಕ್ಟರ್ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ ಮುಂದಿನ ತಿಂಗಳು ವಾರಣಾಸಿ ಸೇರಿದಂತೆ ದೇಶದ ಐದು ನಗರಗಳ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಲಿದೆ. ಏಪ್ರಿಲ್ ವೇಳೆಗೆ ಈ ಯೋಜನೆ ಭಾರತದಾದ್ಯಂತ ಜಾರಿಗೆ ಬರಲಿದೆ.

ಇದನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವೆಂದರೆ ಹಳ್ಳಿಗೆ ಇಂಧನ ದಕ್ಷತೆಯನ್ನು ಕೊಂಡೊಯ್ಯುವುದು. ಪ್ರಧಾನಮಂತ್ರಿ ಗ್ರಾಮೀಣ ಉಜಾಲಾ ಯೋಜನೆ 2021 ಮೂಲಕ ವಿದ್ಯುತ್ ಬಿಲ್‌ಗಳಲ್ಲಿ ಕಡಿತವಾಗಲಿದೆ. ಇದರಿಂದ ಜನರ ಉಳಿತಾಯ ಹೆಚ್ಚಾಗುತ್ತದೆ. ಈ ಯೋಜನೆಯಡಿ ಸುಮಾರು 15 ರಿಂದ 20 ಕೋಟಿ ಫಲಾನುಭವಿಗಳಿಗೆ 60 ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗುವುದು.

ಪ್ರಧಾನ ಮಂತ್ರಿ ಗ್ರಾಮೀಣ ಉಜಾಲಾ ಯೋಜನೆ ಮೂಲಕ ಜನರು ಹಣವನ್ನು ಉಳಿಸುವುದಲ್ಲದೆ ಉತ್ತಮ ಜೀವನವನ್ನು ಸಹ ಪಡೆಯುತ್ತಾರೆ. ಈ ಯೋಜನೆ ಮೂಲಕ ಎಲ್ ಇಡಿ ಬಲ್ಬ್ ಗಳ ಬೇಡಿಕೆಯೂ ಹೆಚ್ಚಲಿದ್ದು, ಹೂಡಿಕೆ ಹೆಚ್ಚಲಿದೆ.

ಪ್ರಧಾನಮಂತ್ರಿ ಗ್ರಾಮೀಣ ಉಜಾಲಾ ಯೋಜನೆ 2021 ಅನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು, ಇದರಲ್ಲಿ ಬಿಹಾರದ ಅರಾ,  ಉತ್ತರ ಪ್ರದೇಶದ ವಾರಣಾಸಿ,ಮಹಾರಾಷ್ಟ್ರದ ನಾಗ್ಪುರ, ಗುಜರಾತ್‌ನ ವಡ್ನಗರ ಮತ್ತು ಆಂಧ್ರಪ್ರದೇಶದ ವಿಜಯವಾಡ ಸೇರಿವೆ.

ಪ್ರಧಾನಮಂತ್ರಿ ಗ್ರಾಮೀಣ ಉಜಾಲಾ ಯೋಜನೆ 2021 ರಿಂದ ವಾರ್ಷಿಕವಾಗಿ ಸುಮಾರು 9324 ಕೋಟಿ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. 76.5 ಮಿಲಿಯನ್ ಟನ್‌ಗಳಷ್ಟು ವಾರ್ಷಿಕ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ. ಈ ಯೋಜನೆಯ ಮೂಲಕ ವಾರ್ಷಿಕ 50000 ಕೋಟಿ ಉಳಿತಾಯವಾಗಲಿದೆ. ಈ ಯೋಜನೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸಬ್ಸಿಡಿ ತೆಗೆದುಕೊಳ್ಳುವುದಿಲ್ಲ. ಪ್ರಧಾನ ಮಂತ್ರಿ ಗ್ರಾಮೀಣ ಉಜಾಲಾ ಯೋಜನೆಯಲ್ಲಿ ಯಾವುದೇ ವೆಚ್ಚವನ್ನು ಮಾಡಲಾಗುವುದು, EESL ಅದನ್ನು ಮಾಡುತ್ತದೆ. ಈ ಯೋಜನೆಯ ವೆಚ್ಚವನ್ನು ಕಾರ್ಬನ್ ಟ್ರೇಡಿಂಗ್ ಮೂಲಕ ಮರುಪಡೆಯಲಾಗುತ್ತದೆ.

ಹೀಗೆ ಭಾರತ ಸರ್ಕಾರ ಒಂದು ಒಳ್ಳೆಯ ಯೋಜನೆಯನ್ನು ನಿಮ್ ಮುಂದೆ ತರುತ್ತಿದೆ.ಆದರೆ ಇದರಿಂದ ಗ್ರಾಮೀಣ ಜನರಲ್ಲಿ ಇರುವ ಅಂಧಕಾರ ಹೋಗುವುದೇ? ಮತ್ತು ಅವರ ಬಾಳಿನಲ್ಲಿ ನಿಜವಾದ ಬೆಳಕು ಮುಡುವುದೇ? ಏಕೆಂದರೆ ದೇಶದಲ್ಲಿ ಭ್ರಷ್ಟಾಚಾರ ಎಂಬ ಭೂತ ಈ ಸಮಯದಲ್ಲಿ ತಲೆಯೆತ್ತಿ ತಾಂಡವ ಮಾಡುತ್ತಿದೆ. ಮತ್ತು ಎಷ್ಟು ಜನರಿಗೆ ಈ ಒಂದು ಉನ್ನತ ಯೋಜನೆಯ ಲಾಭ ಸಿಗುತ್ತದೆ ಎಂಬೋದೇ ಒಂದು ಯಕ್ಷಪ್ರಶ್ನೆ. ಹಿಂದಿನ ಸರ್ಕಾರಗಳು ತುಂಬಾ ಒಳ್ಳೆ ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದ್ದವು ಆದರೆ ಈ ಭ್ರಷ್ಟತೆ ಯಾ ಕಾರಣ ಆ ಎಲ್ಲ ಯೋಜನೆಗಳು ನಾಶ ವಾಗಿ ಹೋದವು ಇದಕ್ಕೆಲ್ಲ ನೋಡೋಣ ಈ ಒಂದು ಯೋಜನೆಗೆ ಸರ್ಕಾರಕ್ಕೆ ನಮ್ಮ್ ಕಡೆಯಿಂದ ಹಾರ್ದಿಕ ಶುಭಾಶಯ ಹಾಗು ಇದನ್ನ ಅಂದುಕೊಂಡಹಾಗೆ ಜಾರಿಗೆ ಬಂದರೆ ಇನ್ನು ಖುಷಿ ಯಾಗುತ್ತೆ.

ಇನ್ನಷ್ಟು ಓದಿರಿ:

ಎಚ್ಚರ ಜನರೇ ಎಚ್ಚರ! ಓಮೈಕ್ರೋನ್ ನಿಂದ ಉಳಿಯಲು ದಾರಿ ಏನು?

ಯುವಕರಿಗೆ ಸಿಹಿಸುದ್ದಿ! ಭಾರತ ಸೇನೆಯನ್ನು ಸೇರಲು ಆಸೆ ಇಟ್ಟವರಿಗೆ ಸಿಹಿ ಸುದ್ಧಿ!

Published On: 14 December 2021, 02:55 PM English Summary: Free Free! Get the LED Bulb now Just For Free! Pradhan Mantri Ujala Yojana!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.