1. ಆರೋಗ್ಯ ಜೀವನ

ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳ ಮಹತ್ವದ ಪಾತ್ರ

Hitesh
Hitesh
Important role of cereals in health care

ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಡಾ. ಲತಾ ಆರ್ ಕುಲಕರ್ಣಿ, ಡಾ. ದಿನೇಶ ಎಮ್ ಎಸ್ ಮತ್ತು ಡಾ. ಸೌಜನ್ಯ ಎಸ್ ( ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಕಲ್ಯಾ ಪೋಸ್ಟ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.) ಅವರು ಈ ಕುರಿತು ವಿವರಿಸಿದ್ದಾರೆ.  

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

ಸಿರಿಧಾನ್ಯಗಳಲ್ಲಿ ಶೇ. 10-15 ರಷ್ಟಿರುವ  ನಾರಿನಾಂಶ ಸಣ್ಣ ಕರುಳಿನ ಕ್ರಿಯೆಗೆ ಸಹಕರಿಸುತ್ತದೆ. ಮಲ ವಿಸರ್ಜನೆಗೆ ಸಿರಿಧಾನ್ಯಗಳ ಆಹಾರ ಪೂರಕ, ಅಲ್ಲದೆ ಮೂಲವ್ಯಾಧಿ ಬರದಂತೆ ತಡೆಯುತ್ತದೆ. ಐಸೋಪ್ಲೇವೋನ್, ಲಿಗ್ನಿನ್‍ಗಳಂತಹ  ಸಸ್ಯಜನ್ಯ ಚೋಧಕಗಳೂ ದೈಹಿಕ ಮತ್ತು ಮಾನಸಿಕ ತೊಂದರೆ ವಿರುದ್ಧ ರಕ್ಷಣೆ ನೀಡುತ್ತದೆ. ಸಿರಿಧಾನ್ಯಗಳಲ್ಲಿರುವ ಸಂರಕ್ಷಕ ಪೆÇೀಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಸೋಂಕು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ನಿಧಾನವಾಗಿ ಜೀರ್ಣವಾಗುವ, ಹೀರಲ್ಪಡುವ  ಮತ್ತು ಹಂತ ಹಂತವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುವ ವಿಶಿಷ್ಟಗುಣವುಳ್ಳ ಶರ್ಕರಪಿಷ್ಟ ಸಿರಿಧಾನ್ಯದ್ದು, ಆದ್ದರಿಂದಲೇ ಇದು ಮಧುಮೇಹಿಗಳಿಗೆ ಹೆಚ್ಚು ಉಪಯುಕ್ತ ಆಹಾರ ಅಲ್ಲದೇ ಕ್ಯಾನ್ಸರ ಸಂಭವವನ್ನು ಕಡಿಮೆಗೊಳಿಸುತ್ತದೆ.

ಸಿರಿಧಾನ್ಯಗಳ ಇನ್ನೊಂದು ವೈಶಿಷ್ಠತೆಯೆಂದರೆ, ಇವುಗಳ ಹಸಿವನ್ನು ಹಿಂಗಿಸುವ ಸಾಮಥ್ರ್ಯ.

          ‘ಸಿರಿಧಾನ್ಯ’ಗಳಿಗೆ  ಉತ್ತಮ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಇಲ್ಲದಿರುವುದು ಮತ್ತು ಬಡವರ ಆಹಾರ ಎಂಬ ಭಾವನೆ ಇರುವುದರಿಂದ ಇವುಗಳ ಬಳಕೆ ಕ್ರಮೇಣವಾಗಿ ಮಾಯವಾಗಿದ್ದವು. ಆದರೆ ಹಲವಾರು ಸತ್ವಗಳು ಹೇರಳವಾಗಿರುವ ಈ ಸಿರಿಧಾನ್ಯಗಳನ್ನು ಎಲ್ಲಾ ವಯಸ್ಸಿನವರು ಸೇವಿಸಿ ಇದರ ಉಪಯೋಗವನ್ನು ಪಡೆಯಬಹುದು ಎಂಬ ಅರಿವು ಮೂಡಿದ್ದರಿಂದ  ಇತ್ತೀಚಿನ ದಿನಗಳಲ್ಲಿ ಮತ್ತೆ ನಮ್ಮ ಆಹಾರದಲ್ಲಿ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ.

ಸಿರಿಧಾನ್ಯಗಳಲ್ಲಿರುವ ಪೌಷ್ಟಿಕಾಂಶಗಳ ವಿವರ (100 ಗ್ರಾಂ. ಗಳಲ್ಲಿ)

ಪೌಷ್ಟಿಕಾಂಶಗಳು   ರಾಗಿ  ಸಾಮೆ ನವಣೆ ಹಾರಕ       ಊದಲು     ಬರಗು

ಸಸಾರಜನಕ (ಗ್ರಾಂ.)      7.3    7.7    12.3  8.3    6.2    12.5

ಶರ್ಕರಪಿಷ್ಠ (ಗ್ರಾಂ.) 72.0  67     60.9  65.0  65.5  70.4

ಕೊಬ್ಬು (ಗ್ರಾಂ.)     1.3    4.7    4.3    1.4    2.2    1.1

ನಾರು (ಗ್ರಾಂ.)      3.6    7.6    8.0    9.0    9.8    2.2

ಖನಿಜಾಂಶ (ಗ್ರಾಂ.) 2.7    1.5    3.3    2.6    4.4    1.9

ಸುಣ್ಣ (ಮಿ.ಗ್ರಾಂ.)   344   17     31     27     14.0  14

ರಂಜಕ(ಮಿ.ಗ್ರಾಂ.) 283   220   290   188   280   121

ಕಬ್ಬಿಣಾಂಶ(ಮಿ.ಗ್ರಾಂ.)     3.9    6.0    5.0    12.0  15.0  15.0

ಶಕ್ತಿ (ಕಿ.ಕ್ಯಾಲೋರಿ) 328   341   331   309   309   341

Siddaramaiah| ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಹಿಂಪಯಲು ಸಿದ್ದರಾಮಯ್ಯ ಆಗ್ರಹ | Apmc 

Important role of cereals in health care

ಸಿರಿಧಾನ್ಯಗಳಲ್ಲಿರುವ ಸಸ್ಯಜನ್ಯ ರಾಸಾಯನಿಕಗಳು ಹಾಗೂ ಔಷಧೀಯ ಪೆÇೀಷಕಾಂಶಗಳು ಹಾಗೂ ಅವುಗಳ ಮಹತ್ವ

ಪಾಲಿಫಿನಾಲ್ಸ್

  •     ಕ್ಯಾನ್ಸರ್‍ಕಾರಕಗಳ ಉತ್ಪಾದನೆಯನ್ನು ತಡೆಯುತ್ತದೆ.
  •    ಜೀವಕೋಶಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  •  ಸೂಕ್ಷ್ಮಾಣುಜೀವಿಗಳ ವಿರುದ್ದ ಹೋರಾಡುತ್ತವೆ.
  • ಉತ್ಕರ್ಷಣೆಯ ವಿರುದ್ದ ರಕ್ಷಣೆಯನ್ನು ನೀಡುವುದರ ಮೂಲಕ ಹೃದಯ ರೋಗಗಳು,
  • ಫೈಟೋಸ್ಟೀರಾಲ್ಸ್‍ಗಳು
  •       ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ತಡೆಯುತ್ತವೆ.
  •  ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತವೆ.
  • ಪೈಟೋಈಸ್ಟ್ರೋಜನ್‍ಗಳು
  •     ಸ್ತನ ಕ್ಯಾನ್ಸರ್ ಉಂಟಾಗದಂತೆ ತಡೆಯುತ್ತದೆ.
  •    ಚೋದಕಗಳ ಸ್ರವಿಸುವಿಕೆ ವ್ಯತ್ಯಯದಿಂದ ತಲೆದೋರುವ ದೈಹಿಕ, ಮಾನಸಿಕ ತೊಂದರೆಗಳ ವಿರುದ್ದ ರಕ್ಷಣೆಯನ್ನು ನೀಡುತ್ತದೆ.

ಫೈಟಿಕ್ ಆಮ್ಲ

  • ಉತ್ಕರ್ಷಣೆಯ ವಿರುದ್ದ ರಕ್ಷಣೆಯನ್ನು ನೀಡುವುದರ ಮೂಲಕ ಜೀವಕೋಶಗಳನ್ನು ರಕ್ಷಿಸುತ್ತದೆ.
  • ನಾರಿನಾಂಶ
  •   ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
  •  ಜೀರ್ಣರಸಗಳೊಂದಿಗೆ ಆಹಾರದ ಸಂಪರ್ಕವನ್ನು ನಿಧಾನಗೊಳಿಸುತ್ತದೆ.
  •   ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಹತೋಟಿಯಲ್ಲಿಡುತ್ತದೆ.
  •   ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮ ಮಾಡುತ್ತವೆ. ಸಂತೃಪ್ತ ಭಾವನೆಯನ್ನು ನೀಡುತ್ತದೆ.
  • ಮಲಬದ್ಧತೆ ಹಾಗೂ ಮೂಲವ್ಯಾಧಿ ವಿರುದ್ಧ ರಕ್ಷಣೆ ನೀಡುತ್ತದೆ.

ವಿವಿಧ ರೀತಿಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ತಂತ್ರಜ್ಞಾನ

          ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಪ್ರಮುಖವಾಗಿ ಹೊಟ್ಟು ಮತ್ತು ಸ್ವಲ್ಪ ಪ್ರಮಾಣದ ತವಡು ತಗೆಯುವುದು ಅವಶ್ಯವಾಗಿದೆ. ಪಾರಂಪರಿಕವಾಗಿ ಹೊಟ್ಟು ಹಾಗೂ ತವಡು ತೆಗೆಯುವುದು ಅವಶ್ಯವಾಗಿದೆ. ಪಾರಂಪರಿಕವಾಗಿ ಹೊಟ್ಟು ಹಾಗೂ ತವಡು ತೆಗೆಯುವ ಕಾರ್ಯಗಳನ್ನು ಮಾಡಲಾಗುತ್ತಿದ್ದು,  ಈ ರೀತಿಯ ಕೆಲಸವು ಅತೀ ಶ್ರಮವುಳ್ಳ ಹಾಗೂ ಮಂದಗತಿಯ ಪದ್ಧತಿಯಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಅಕ್ಕಿಯ ರೀತಿ ಸಿರಿಧಾನ್ಯಗಳನ್ನು ಸಹ ಹೊಟ್ಟು ತೆಗೆಯುವ ಹೊಸ ತಂತ್ರಜ್ಞಾನಗಳಿಂದ ಸುಲಭವಾಗಿ ಎಲ್ಲರೂ ಉಪಯೋಗಿಸಲು ಸಾಧ್ಯವಾಗಿದೆ.

ಸಿರಿಧಾನ್ಯಗಳಿಂದ ಬಳಕೆ ವಿಧಾನ:

          ಸಿರಿಧಾನ್ಯಗಳನ್ನು ವಿವಿಧ ಸಂಸ್ಕರಣೆ ವಿಧಾನಗಳನ್ನು ಪಾಲಿಷ್ ಮಾಡುವುದು, ಹಿಟ್ಟು ಮಾಡುವುದು, ಮೊಳಕೆಯೊಡಿಸುವುದು, ಅರಳು ಮಾಡುವುದು, ಹುದುಗುಗೊಳಿಸುವುದು, ಹುರಿಯುವುದು. ಹಾಗೂ ಬಳಸುವ ಸಿದ್ಧ ಆಹಾರ ತಯಾರಿಸಬಹುದು. ಅವಲಕ್ಕಿ, ಅರಳು, ಇಡ್ಲಿರವೆ, ಪಾಲಿಷ್ ಕಾಳುಗಳು ಮತ್ತು ಹಿಟ್ಟಿನ್ನು ಶ್ಯಾವಿಗೆ, ದೋಸೆ, ಬ್ರೆಡ್, ಬಿಸ್ಕತ್, ಹಪ್ಪಳ, ಸಂಡಿಗೆ, ಹಲ್ವಾ ಮತ್ತು ಇತರ ಕರಿದ ತಿಂಡಿಗಳ ತಯಾರಿಕೆಗೆ ಬಳಸಬಹುದು.

ಸಾಮಾನ್ಯವಾಗಿ ದಿನನಿತ್ಯ ಮನೆಗಳಲ್ಲಿ ಮಾಡುವ ತಿಂಡಿ ತಿನಿಸುಗಳಾದ ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು, ಪೆÇಂಗಲ್, ತಾಲಿಪಟ್ಟು, ಬಿಸ್ಕೇಟ್, ಮುದ್ದೆ ಇತ್ಯಾದಿಗಳನ್ನೆಲ್ಲಾ ಸಿರಿಧಾನ್ಯಗಳಿಂದ ಮಾಡಬಹುದಲ್ಲದೆ, ಅನ್ನ, ಪಾಯಸ, ವಡೆ, ಹಪ್ಪಳ, ಸಂಡಿಗೆ, ಪಡ್ಡು ಮೊದಲಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದು.

ಸಿರಿಧಾನ್ಯಗಳಿಂದ ವೈವಿದ್ಯಮಯ ಆಹಾರಗಳನ್ನು ತಯಾರಿಸಿ ಗೃಹ ಬಳಕೆಗೆ ಮತ್ತು ಆದಾಯ ಗಳಿಕೆಗೆ ಉಪಯೋಗಿಸಬಹುದು.

  • ಶಿಶು ಮತ್ತು ಮಕ್ಕಳ ಆಹಾರಗಳು
  • ಆರೋಗ್ಯ ಮತ್ತು ಪತ್ಯಯ ಆಹಾರಗಳು
  • ಶಕ್ತಿವರ್ಧಕ ಆಹಾರಗಳು
  • ದಿಢೀರ್ ಮಿಶ್ರಣಗಳು
  • ಪಾಸ್ತ ಪದಾರ್ಥಗಳು
  • ವಿಶೇಷ ಆಹಾರಗಳು
  • ಬೇಕರಿ ತಿನಿಸುಗಳು
  • ಸೇವಿಸಲು ಸಿದ್ಧವಿರುವ ಆಹಾರಗಳು.
  • ಬೇಕರಿಯಲ್ಲಿ ಬಿಸ್ಕ್‍ತ್, ಕೇಕ್, ವಿಶೇಷ್ ಬನ್, ರಸ್ಕ್ , ಇತ್ಯಾದಿ

ಬೇಕರಿಯಲ್ಲಿ ಸಿರಿಧಾನ್ಯಗಳ ಬಳಕೆ

ಸಿರಿಧಾನ್ಯಗಳನ್ನು ಬೇಕರಿಯಲ್ಲಿ ಬಿಸ್ಕತ್ತು, ಕೇಕ್, ವಿಶೇಷ ಬನ್, ರಸ್ಕ್‍ಗಳಲ್ಲಿ ಶೇ.40ರವರೆಗೂ ಯಾವುದೇ ರಚನೆ ಬದಲಾವಣೆ ಇಲ್ಲದೆ ಬಳಸಬಹುದು. ಹೀಗೆ ಬಳಸಿದಾಗ ಸೇವಿಸಿದ ಬೇಕರಿ ಪದಾರ್ಥ ಸುಲಭವಾಗಿ ಪಚನವಾಗುವುದಲ್ಲದೆ, ಎರಡರಷ್ಟು ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ರಂಜಕವನ್ನು ಸೂಕ್ತ ಸರಾಸರಿಯಲ್ಲಿ ಒದಗಿಸುತ್ತದೆ. ಅಲ್ಲದೆ, ಪದಾರ್ಥದ ಶೇಖರಣೆ ಕಾಲ ಹೆಚ್ಚಿ, ತಯಾರಿ ಬೆಲೆ ಕಡಿಮೆಯಾಗಿರುತ್ತದೆ.  ಸಿರಿಧಾನ್ಯಗಳ ಬಳಕೆಯಿಂದ ವೈವಿಧ್ಯತೆಗೆ ದಾರಿ ಮಾಡಬಹುದಾಗಿದೆ. ವೈದ್ಯಕೀಯವಾಗಿ ಆದೇಶಿಸಿರುವ ಮೂರನೇ ಒಂದು ಭಾಗ ನಾರಿನ ಪ್ರಮಾಣವನ್ನು ಸುಲಭವಾಗಿ ಐದು ಬಿಸ್ಕತ್ತು,  ಎರಡು ತುಣುಕು ಬ್ರೆಡ್ ಅಥವಾ ಒಂದು ಕಪ್ ಕೇಕ್ನಿಂದ ಒದಗಿಸಬಹುದು. ಸಿರಿಧಾನ್ಯಗಳಲ್ಲಿರುವ ನಾರಿನಂಶ ಹೆಚ್ಚುವರಿ ನೀರು ಹಿಡಿದುಕೊಳ್ಳುವುದರಿಂದ ಕ್ಯಾಲೋರಿ ಪ್ರಮಾಣ ಶೇಕಡವಾರು ಒದಗಿಸುವಿಕೆ ಅನುಸಾರವಾಗಿ ಕಡಿಮೆಯಾಗುತ್ತದೆ. ಬೇಕರಿ ಪದಾರ್ಥಗಳಿಂದ ಒದಗುವ ಗ್ಲೂಕೋಸ್ ಕಡಿಮೆ ಮಾಡುತ್ತದೆ. ಬೇಕರಿ ತಿನಿಸುಗಳ ತಯಾರಿಕೆಯಲ್ಲಿ ಬಳಸುವ ಘನಕೊಬ್ಬಿನಿಂಧ ಒದಗುವ ತೊಡಕನ್ನು(ಕೊಲೆಸ್ಟಿರಾಲ್ ಪ್ರಮಾಣ) ನಿವಾರಿಸುತ್ತದೆ.

ಆದ್ದರಿಂದ ಈ ಸಿರಿಧಾನ್ಯಗಳನ್ನು ಸಾಂಪ್ರದಾಯಿಕ ಆಹಾರಗಳಲ್ಲಿ ಸೇರಿಸಿ ಪೌಷ್ಠಿಕ ಮೌಲ್ಯ ಹೆಚ್ಚಿಸುವುದರ ಜೊತೆಗೆ ಅದರ ರುಚಿ ಕೆಡದಂತೆ ವಿವಿಧ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಿ ಉಪಯೋಗಿಸಬಹುದು ಹಾಗೂ ರೈತರು ತಮ್ಮ ಮಟ್ಟದಲ್ಲಿಯೇ ಸಂಸ್ಕರಿಸಿ ಮಾರಾಟ ಮಾಡಬಹುದು. ಈ ಸಿರಿಧಾನ್ಯಗಳನ್ನು ಅಕ್ಕಿ ಅಥವಾ ಗೋಧಿಯಿಂದ ತಯಾರಿಸಬಹುದಾದ ಎಲ್ಲಾ ಖಾಧ್ಯಗಳ ರೀತಿಯಲ್ಲಿ ದಿನನಿತ್ಯ ಉಪಯೋಗಿಸಬಹುದು. ಇವುಗಳ ಬಳಕೆ ಹೆಚ್ಚಾಗುವಂತೆ ಮಾಡಲು ಆಧುನಿಕ ಆಹಾರ ತಂತ್ರಜ್ಞಾನಗಳನ್ನು ಬಳಸಿ ಅವುಗಳು ಸುಲಭವಾಗಿ ಎಲ್ಲರಿಗೂ ದೊರೆಯುವಂತೆ ಮಾಡುವ ದಿಸೆಯಲ್ಲಿ ಕಾರ್ಯೊನ್ಮುಖರಾಗಬೇಕಾಗಿದೆ. ಹಾಗೂ ಸ್ವಸಹಾಯ ಸಂಘಗಳಲ್ಲಿ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಿ ಆದಾಯೋತ್ಪನ್ನ ಚಟುªಟಿಕೆಯಾಗಿ ಕೈಗೊಳ್ಳಬಹುದು. ಗ್ರಾಮೀಣ ಮತ್ತು ನಗರದ ಜನರ ದಿನನಿತ್ಯ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಸಹ ಅವಶ್ಯಕವಾಗಿದೆ.

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!

Published On: 08 January 2023, 12:16 PM English Summary: Important role of cereals in health care

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.