1. ಅಗ್ರಿಪಿಡಿಯಾ

ಬಿತ್ತನೆ ಮೊದಲು ಬೀಜೋಪಚಾರ ಬೀಜಾಮೃತ ವಿಧಾನ ಅನುಸರಿಸಿ

ಬೀಜೋಪಚಾರ ಮಾಡಲು ನಿಮಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಆಗುತ್ತಿಲ್ಲವೇ? ಹಾಗಾದರೆ ನೀವೇ ಮನೆಯಲ್ಲಿ ಬೀಜಾಮೃತವನ್ನು ತಯಾರಿಸಿಕೊಳ್ಳಿ ಹಾಗೂ ಬೀಜಗಳಿಗೆ ಶಕ್ತಿ ನೀಡಿ ಹೆಚ್ಚಿನ ಇಳುವರಿ ಪಡೆಯಿರಿ.

 ಬೀಜಾಮೃತದಿಂದ ಬೀಜಗಳಿಗೆ ಅಥವಾ ಯಾವುದೇ ಸಸಿಗಳಿಗೆ ಬಳಸುವ ಚಿಕಿತ್ಸೆಯಾಗಿದೆ. ಮಳೆಗಾಲದ ನಂತರ ಸಸ್ಯಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ಶಿಲೀಂಧ್ರದಿಂದ ಹಾಗೂ ಮಣ್ಣಿನಿಂದ ಹರಡುವ ಮತ್ತು ಬೀಜದಿಂದ ಹರಡುವ ರೋಗಗಳಿಂದ ಯುವ ಬೇರುಗಳನ್ನು ರಕ್ಷಿಸುವಲ್ಲಿ ಬಿಜಾಮೃತ ಪರಿಣಾಮಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು:

1.ನೀರು -20 ಲೀಟರ್

2.ದೇಸಿ ಹಸುವಿನ ಸಗಣಿ-5 ಕೆಜಿ

3.ದೇಸಿ ಹಸುವಿನ ಗಂಜಲ-5 ಲೀಟರ್

4.ಸುಣ್ಣ -50ಗ್ರಾಂ

5.ಒಂದು ಹಿಡಿ ಫಲವತ್ತಾದ ಮಣ್ಣು

 ತಯಾರಿಸುವ ಪ್ರಕ್ರಿಯೆ:

 ನಾವು ಬೀಜಾಮೃತವನ್ನು ಉಪಯೋಗಿಸುವ ಹಿಂದಿನ ದಿನದಿಂದ ನಮ್ಮ ತಯಾರಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಮೊದಲಿಗೆ ಐದು ಕೆಜಿ ಸಗಣಿಯನ್ನು ಒಂದು ಕಾಟನ್ ಬಟ್ಟೆಯಲ್ಲಿ ಅಥವಾ ಚೀಲದಲ್ಲಿ ಗಂಟುಕಟ್ಟಿ ಅದನ್ನು 20 ಲೀಟರ್ ನೀರಿನಲ್ಲಿ ನೆನೆಸಿಡಬೇಕು. ಇದು ಈ ಕೆಲಸವನ್ನು ನಾವು ಹಿಂದಿನ ದಿನ ರಾತ್ರಿ ಮಾಡಬೇಕು. ಹಾಗೂ ಇನ್ನೊಂದು ಒಂದು ಲೀಟರ್ ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಬೆರೆಸಿ ಅದನ್ನು ಒಂದು ದಿನ ರಾತ್ರಿ ನೆನೆಸಿಡಬೇಕು.

ಎರಡು ವಸ್ತುಗಳನ್ನು ಒಂದು ದಿನ ನೆನೆಸಿಟ್ಟ ಮೇಲೆ ಅಂದರೆ ಹನ್ನೆರಡು ಗಂಟೆಗಳ ಕಾಲ ಅವನ್ನು ನೆನೆಸಿಟ್ಟು ಮಾರನೆ ದಿನ ನೀರಿನಲ್ಲಿ ನೆನೆಸಿಟ್ಟ ಸಗಣಿಯನ್ನು ನೀರಿನಲ್ಲಿ ಒಂದೆರಡು ಬಾರಿ ಕಿವುಚಿ ಹೊರತೆಗೆಯಬೇಕು, ಇದರಿಂದ ನಮಗೆ ಸಗಣಿಯ ಒಂದು ಅಂಶ ಸಿಗುತ್ತದೆ, ಇದಾದ ನಂತರ ನಾವು ಒಂದು ದೊಡ್ಡ ಬಕೆಟ್ ಅನ್ನು ತೆಗೆದುಕೊಂಡು ಅದರಲ್ಲಿ 20 ಲೀಟರ್ ಸಗಣಿಯನ್ನು ನೆನೆಸಿ ಇಟ್ಟಂತಹ ನೀರು, 50 ಗ್ರಾಂ ಸುಣ್ಣವನ್ನು ನೆನೆಸಿಟ್ಟ ಅಂತಹ ಒಂದು ಲೀಟರ್ ನೀರು, ಹಾಗೂ 5 ಲೀಟರ್ ಗಂಜಲವನ್ನು ಮೂರು ಸೇರಿ ಚೆನ್ನಾಗಿ ಸೇರಿಸಿ ಮಿಶ್ರಣವನ್ನು ಮಾಡಬೇಕು, ಇದಾದ ನಂತರ ಇದಕ್ಕೆ ಒಂದು ಹಿಡಿ ಶುದ್ಧ ಹಾಗೂ ಫಲವತ್ತಾದ ಮಣ್ಣನ್ನು ಹಾಕಿ ಚೆನ್ನಾಗಿ ಕಲಿಸಬೇಕು. ಹೀಗೆ ನಾವು ಬೀಜೋಪಚಾರ ವನ್ನು ಸರಳವಾಗಿ ತಯಾರಿಸಬಹುದು.

ಬೀಜೋಪಚಾರದ ಉಪಯೋಗಗಳೇನು?

ಬೀಜಾಮೃಥದಲ್ಲಿ ಇರುವ ಪ್ರಯೋಜನಕಾರಿ ಸೂಕ್ಷ್ಮ ಜೀವಿಗಳು ಮಣ್ಣಿನಿಂದ ಹರಡುವ ಮತ್ತು ಬೀಜದಿಂದ ಹರಡುವ ರೋಗಕಾರಕಗಳಿಂದ ಬೆಳೆಯನ್ನು ರಕ್ಷಿಸುತ್ತವೆ.

ಬೀಜಾಮೃತ ಇನಾಕ್ಯುಲಂಟ್ನೊಂದಿಗೆ ಸಂಸ್ಕರಿಸಿದ ಬೀಜಗಳು ಗಮನಾರ್ಹವಾಗಿ ಮೊಳಕೆಯೊಡೆಯುವಿಕೆ, ಹೆಚ್ಚಿನ ಮೊಳಕೆ ಉದ್ದ ಮತ್ತು ಅನಿಯಂತ್ರಿತ ಬೀಜಗಳಿಗಿಂತ ಬಲವಾದ ಮೊಳಕೆ ಚೈತನ್ಯವನ್ನು ತೋರಿಸುತ್ತದೆ.

ಬೀಜೋಪಚಾರ ಹೇಗೆ ಬಳಸೋದು?

 100 ಕೆಜಿ ಬೀಜಕ್ಕೆ, 20 ಲೀಟರ್ ನೀರನ್ನು ಬಳಸಿ ಬೀಜೋತ್ಪಾದನೆಯನ್ನು ತಯಾರಿಸಿ.

ಪ್ಲಾಸ್ಟಿಕ್ ಮೇಲೆ ಬೀಜಗಳನ್ನು ನೆಲದ ಮೇಲೆ ಹರಡಿ. ಆ ಬೀಜಗಳ ಮೇಲೆ ಬೀಜಾಮ್ರೂತ ಸಿಂಪಡಿಸಿ. ಬೀಜಗಳನ್ನು ಸರಿಯಾಗಿ ಬೆರೆಸಿ ಮತ್ತು ಎಲ್ಲಾ ಬೀಜಗಳನ್ನು ಬೀಜಮ್ರತ್ನಿಂದ ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ

ಮುಖ್ಯ ಸೂಚನೆ:

ದ್ವಿದಳ ಧಾನ್ಯಗಳಂತಹ ಬೀಜಗಳನ್ನು ಎಚ್ಚರಿಕೆಯಿಂದ ಬೆರೆಸಬೇಕು ಮತ್ತು  ಅವುಗಳನ್ನು ಗಟ್ಟಿಯಾಗಿ ಉಜ್ಜಬಾರದು. ಬೀಜಗಳನ್ನು ಬೆರೆಸಲು ನಿಮ್ಮ ಕೈಗಳನ್ನು ಸರಿಯಾಗಿ ಬಳಸಿ ಹಾಗೂ ಬೀಜಗಳಿಗೆ ಯಾವುದೇ ಹಾನಿಯಾಗದ ಹಾಗೆ ನೋಡಿಕೊಳ್ಳಿ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Published On: 20 November 2020, 10:12 PM English Summary: eejamrutha, Beejamrutha Increasing immunity and germination in seeds

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.