
ವಿವಿಧ ಹವಾಮಾನ ಪರಿಸ್ಥಿತಿಗಳಿಗೆ ಸಲಹೆಗಳು
ಮುಂಗಾರಿ ಬೆಳೆಗಳಿಗೆ ಅನುಕೂಲವಾದ ಹಾಗೂ ಸಕಾಲದಲ್ಲಿ ಮಳೆ ಆರಂಭವಾದಾಗ
ಅ. ಹಗುರವಾದ ಜಮೀನುಗಳಲ್ಲಿ ಕಬ್ಬು ಮತ್ತು ಶಜ್ಜೆ ಶೇಂಗಾ, ಸಜ್ಜೆ, ತೊಗರಿ, ಮುಂಗಾರಿ ಜೋಳ, ಶಕ್ತಿಮಾನ್ ಜೋಳ, ನವಣೆ ದ್ವಿದಳ ಧಾನ್ಯದ ಬೆಳೆಗಳು. ಮಿಶ್ರ ಬೇಸಾಯ ಪದ್ಧತಿಗಳಾದ ಮುಂಗಾರಿ ಜೋಳ ಮತ್ತು ತೊಗರಿ (2:1), ಶೇಂಗಾ ಮತ್ತು ತೊಗರಿ(3:1) ನವಣೆ ಮತ್ತು ತೊಗರಿ (2:1) ಮತ್ತುಸಜ್ಜೆ ಮತ್ತು ತೊಗರಿ (2:1) ಬೆಳೆಗಳನ್ನು ಜೂನ್ ತಿಂಗಳಲ್ಲಿ ಬಿತ್ತಿರಿ.
ಆ. ಮಧ್ಯಮ ಆಳದ ಕಪ್ಪು ಭೂಮಿಯಲ್ಲಿ ಹೆಸರು, ಉದ್ದು ಬೆಳೆಗಳನ್ನು ಬಿತ್ತಿ ಹಿಂಗಾರಿಯಲ್ಲಿ ಕುಸುಬೆ, ಹಿಂಗಾರಿ ಜೋಳ, ಕಡಲೆ,ಗೋದಿ ಬೆಳೆಯಿರಿ.
ಇ. ಹೆಚ್ಚು ಆಳದ ಕಪ್ಪು ಮಣ್ಣಿರುವ ಹಿಂಗಾರಿ ಬೆಳೆಗಳ ಸಲುವಾಗಿ ಮುಂಗಾರಿಯಲ್ಲಿ ಪಡ ಬಿಟ್ಟ ಭೂಮಿಯಲ್ಲಿ ಚೌಕಮಡಿ, ತಟ್ಟೆ ಆಕಾರದ ಕುಣಿಗಳು ದಿಂಡುಸಾಲು ಅಥವಾ ಅಡೆತಡೆಗಳುಳ್ಳ ದಿಂಡುಸಾಲುಗಳನ್ನು ನಿರ್ಮಿಸಬೇಕು.
ಸಕಾಲದಲ್ಲಿ ಮಳೆ ಆರಂಭವಾಗಿ ಬೀಜ ಮೊಳಕೆ ಬಂದ ನಂತರ ಬಹಳ ದಿನಗಳವರೆಗೆ ಮಳೆ ಬಾರದಿರುವಾಗ.
ಅ. ಸಾಧ್ಯವಾದ ಕಡೆ ಸಂರಕ್ಷಿತ ನೀರಾವರಿ ಮಾಡಿರಿ.
ಆ. ಸಜ್ಜೆ ಜೋಳದ ಕುಳೆ ಬೆಳೆ ತೆಗೆದುಕೊಳ್ಳಿರಿ.
ಇ. ಶೇಂಗಾದಂತಹ ಬೆಳೆಗಳಿಗೆ ಮಳೆ ಬಂದ ನಂತರ ಬೇಗ ಪುನಃಶ್ಚತನಕ್ಕಾಗಿ ಯೂರಿಯಾ ಸಿಂಪರಣೆ ಮಾಡಿರಿ.
ಈ ಬಿತ್ತಿದ ಬೆಳೆಗಳು ಒಣಗಿಹೋದಲ್ಲಿ ಪುನಃ ಮಳೆಯಾದನಂತರ ನವಣೆ, ಅವರೆ, ಹುರುಳಿ, ಮಡಕಿ, ಅಲಸಂದಿ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬಿತ್ತಿರಿ.
ಜೂನ್ ತಿಂಗಳಲ್ಲಿ ಮಳೆ ಆಗದೇ ಜುಲೈ ತಿಂಗಳಲ್ಲಿ ಮಳೆ ಪ್ರಾರಂಭವಾದಾಗ
ಅ. ಮುಂಗಾರಿ ಪ್ರದೇಶಗಳಲ್ಲಿ ಕಬ್ಬು ಶೇಂಗಾ, ಸೂರ್ಯಕಾಂತಿ ಮತ್ತು ನವಣೆ ಬೆಳೆಗಳನ್ನು ಬಿತ್ತಿರಿ.
ಆ. ಹಗುರ ಮಣ್ಣಿನಲ್ಲಿ ತೊಗರಿ, ಎಳ್ಳು, ಅಲಸಂದಿ ಮತ್ತು ಹುರುಳಿ ಬೆಳೆಗಳನ್ನು
ಇ. ಹಿಂಗಾರಿ ಪ್ರದೇಶಗಳಲ್ಲಿ ಯಾವುದೇ ಬೆಳೆಯನ್ನು ಬಿತ್ತದೆ ಪ್ರತಿಸಲ ಮಳೆಯಾದ ನಂತರ ಭೂಮಿಯಲ್ಲಿ ಹರಗಿ ಕಳೆಗಳಿಲ್ಲದಂತೆ ನೋಡಿಕೊಳ್ಳಿರಿ.
ಈ. ಜುಲೈ ಕೊನೆಗೆ ಮಳೆಯಾಶ್ರಿತ ಹತ್ತಿ ಬೆಳೆ ಬಿತ್ತಿರಿ.
ಆಗಸ್ಟ್ ತಿಂಗಳಲ್ಲಿ ಸಕಾಲದಲ್ಲಿ ಮಳೆಯಾದಾಗ
ಅ. ಆಗಸ್ಟ್ ಮಧ್ಯದೊಳಗೆ ಮಳೆಯಾಶ್ರಿತ ಹತ್ತಿಯ ಬಿತ್ತನೆ ಮುಗಿಸಿ ಹಿರ್ಸುಟಮ್ ಹತ್ತಿಯ ಬದಲಾಗಿ ಹರ್ಬಿಸಿಯಂ ಹತ್ತಿಯ ತಳಿಗಳನ್ನು ಬೆಳೆಯಿರಿ.
ಆ. ಹಗುರ ಮಣ್ಣಿನಲ್ಲಿ ಸೂರ್ಯಕಾಂತಿ, ಎಳ್ಳು, ತೊಗರಿ, ನವಣೆ ಮತ್ತು ಹುರುಳಿ ಬೆಳೆಗಳನ್ನುಬಿತ್ತಿರಿ.
ಇ. ಸಮಪಾತಳಿ ಬದುಗಳ ಮೇಲೆ ಔಡಲ ಬಿತ್ತಿರಿ.
ಈ. ಮಧ್ಯಮ ಆಳದ ಕಪ್ಪು ಭೂಮಿಯಲ್ಲಿ ಶೇಂಗಾ ಬೆಳೆಯಲ್ಲಿ ಹತ್ತಿ ಬೆಳೆಯನ್ನು ಸರದಿ ಬೆಳೆಯಾಗಿ ಬಿತ್ತಿರಿ.
ಸೆಪ್ಟೆಂಬರ್ ತಿಂಗಳಲ್ಲಿ ಸಕಾಲದಲ್ಲಿ ಮಳೆಯಾದಾಗ
ಅ. ಬಿಜಾಪೂರ ಜಿಲ್ಲೆಯ ಉತ್ತರ ತಾಲೂಕಗಳಲ್ಲಿ ಮಧ್ಯಮ ಆಳದ ಕಪ್ಪು ಭೂಮಿಯಲ್ಲಿ ಹಿಂಗಾರಿ ಜೋಳದ ಬಿತ್ತನೆಯನ್ನು ಸೆಪ್ಟೆಂಬರ್ ಮಧ್ಯದೊಳಗೆ ಮುಗಿಸಿ. ಬಾಗಲಕೋಟೆ, ಹುನಗುಂದ, ಬೀಳಗಿ, ಮುಧೋಳ ಮತ್ತು ಮುದೇಬಿಹಾಳ ತಾಲ್ಲೂಕುಗಳಲ್ಲಿ ಹಿಂಗಾರಿ ಜೋಳದ ಬಿತ್ತನೆಯನ್ನು ಆಕ್ಟೋಬರ್ ಮೊದಲನೇ ವಾರದಲ್ಲಿ ಮಾಡಿರಿ. ಇತರ ಜಿಲ್ಲೆಗಳಲ್ಲಿ ರೂಡಿಯಲ್ಲಿರುವ ಬಿತ್ತನೆ ಸಮಯಕ್ಕಿರುವ ಎರಡು ವಾರ ಮೊದಲು ಬಿತ್ತನೆ ಮಾಡಿರಿ.
ಆ. ಕುಸುಬೆಯನ್ನು ಪೂರ್ತಿ ಬೆಳೆಯಾಗಿ ಸೆಪ್ಟೆಂಬರ್ ಕೊನೆಯೊಳಗಾಗಿ ಬಿತ್ತಿರಿ.
ಇ. ಸೆಪ್ಟೆಂಬರ್ ಮೂರನೇ ವಾರದವರೆಗೆ ಸೂರ್ಯಕಾಂತಿಯನ್ನು ಬಿತ್ತಿರಿ.
ಅಕ್ಟೋಬರ್ ತಿಂಗಳಲ್ಲಿ ಮಳೆ ಆರಂಭವಾದಾಗ
ಅ. ಶಿಫಾರಸು ಮಾಡಿದ ಅರ್ಧದಷ್ಟು ರಸಗೊಬ್ಬರವನ್ನು ಮಾತ್ರ ಹಾಕಿ, ಹಿಂಗಾರಿ ಜೋಳದ ಬಿತ್ತನೆಯನ್ನು ಅಕ್ಟೋಬರ್ ಮಧ್ಯದವರೆಗೆ ಮುಂದುವರೆಸಿ.
ಆ. ಜೋಳ ಮತ್ತು ಕಡಲೆಯ ಸಾಲುಗಳ ಪ್ರಮಾಣದಲ್ಲಿ ಅಂತರ 2:1 ಭಾಗ ಮಿಶ್ರ ಬೆಳೆ ಪದ್ದತಿ ಬಿಜಾಪುರ ಜಿಲ್ಲೆಯಲ್ಲಿ ಉತ್ತಮ.
ಇ. ಕುಸುಬೆ ಮತ್ತು ಕಡಲೆ ಬೆಳೆಗಳನ್ನು 1:3 ಅಥವಾ ಸಾಲುಗಳ ಮಿಶ್ರ ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಬಿತ್ತಿರಿ.
ಈ. ಕುಸುಬೆ ಬೆಳೆ ಕ್ಷೇತ್ರವನ್ನು ಹೆಚ್ಚಿಸಿರಿ.
ಉ. ತೇವಾಂಶವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳುವ ಭೂಮಿಯಲ್ಲಿ ಗೋದಿಯನ್ನು ಅಕ್ಟೋಬರ್ ಕೊನೆಯವರೆಗೆ ಬಿತ್ತಬಹುದು.
ಊ. ಬಿತ್ತಿದ 30 ದಿವಸಗಳ ನಂತರ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದರೆ, ಹಿಂಗಾರು ಜೋಳದಲ್ಲಿ ಪ್ರತಿ ಹೆಕ್ಟೇರಿಗೆ 10-15 ಕಿ.ಗ್ರಾಂ ಸಾರಜನಕವನ್ನು ಮೇಲುಗೊಬ್ಬರವಾಗಿ .
ಹಂಗಾಮಿನ ಕೊನೆಯಲ್ಲಿ ಬೇಗನೇ ಮಳೆಯ ನಿಲುಗಡೆಯಾದಾಗ
ಆ. ಹಿಂಗಾರಿ ಜೋಳ ಬಿತ್ತನೆಯಾದ 40 ರಿಂದ 45 ದಿವಸಗಳ ನಂತರ ಪ್ರತಿ ಎರಡನೇ ಅಥವಾ ಮೂರನೇ ಸಾಲನ್ನು ಕಿತ್ತು ಸಸ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಿರಿ.
ಆ. ಪದೇ ಪದೇ ಅಂತರ ಬೇಸಾಯ ಮಾಡಿ ಭೂಮಿಯಲ್ಲಿನ ಬಿರುಕುಗಳನ್ನು ಮುಚ್ಚಿರಿ.
ಇ. ಕ್ಷೇತ್ರ ಹೊಂಡ ಅಥವಾ ಇತರ ಮೂಲಗಳಿಂದ ಪೂರಕ ನೀರಾವರಿ ಮಾಡಬೇಕು.
ಒಂದು ಅಥವಾ ಎರಡು ಪೂರಕ ನೀರಾವರಿಗಳಿಂದ ಹಿಂಗಾರಿ ಜೋಳ, ಕುಸುಬೆ ಮತ್ತು ಕಡಲಿಯ ಇಳುವರಿಯನ್ನು ಶೇ 50 ರಿಂದ 60ರಷ್ಟು ಹೆಚ್ಚಿಸಬಹುದೆಂದು ಕಂಡು ಬಂದಿದೆ.
ಈ. ಸಾಧ್ಯವಾದಲ್ಲಿ ಕುಳೆ, ಕಸಕಡ್ಡಿ, ಒಣಹುಲ್ಲು ಮುಂತಾದವುಗಳನ್ನು ಮಣ್ಣಿನ ಮೇಲೆ ಹರಡಬೇಕು.
ಇಲ್ಲವಾದಲ್ಲಿ ಎಡೆಕುಂಟೆಯನ್ನು ಉಪಯೋಗಿಸಿ ಮಣ್ಣಿನ ತೆಳುವಾದ ಪದರಿನ ಹೊದಿಕೆ ಮಾಡಿ ಬಿರುಕುಗಳನ್ನು ತಡೆಗಟ್ಟಬಹುದು.
ವಲಯ
ಉತ್ತರದ ಅರೆಮಲೆನಾಡು ಪ್ರದೇಶ
ಮಣ್ಣು: ಈ ಪ್ರದೇಶದಲ್ಲಿ ಮಧ್ಯಮ ಕಪ್ಪು ಮಣ್ಣು ಮತ್ತು ಕೆಂಪು ಮರಳು ಮಿಶ್ರಿತ ಗೋಡು ಸಮ ಪ್ರಮಾಣದಲ್ಲಿ ಹಂಚಿದಂತಿದೆ.
ಮಳೆ : ವರ್ಷದಲ್ಲಿ ಆಗುವ 619 ರಿಂದ 1303 ಮಿ. ಮೀ. ಬರುವ ಮಳೆಯೆಲ್ಲಾ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಹಂಚಿದೆ.
ಮುಖ್ಯ ಬೆಳೆಗಳು
ಮುಂಗಾರು ಜೋಳ, ಸಜ್ಜೆ, ಶೇಂಗಾ ಹತ್ತಿ ಮತ್ತು ದ್ವಿದಳ ಬೆಳೆಗಳು ಮುಖ್ಯ ಮುಂಗಾರು ಬೆಳೆಗಳು. ತಡವಾದ ಬಿತ್ತನೆಗೆ ನವಣೆ ಮುಂತಾದ ತೃಣ ಧಾನ್ಯಗಳನ್ನು ಬೆಳೆಯಬಹುದು. ಹಿಂಗಾರಿ ಜೋಳವು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿಯಿರುವ ಮಣ್ಣುಗಳಿಗೆ ಮೀಸಲಾಗಿದೆ. ಮೆಣಸಿನಕಾಯಿ ಮತ್ತು ತಂಬಾಕು ಈ ಪ್ರದೇಶದ ವಾಣಿಜ್ಯ ಬೆಳೆಗಳು. ಹಿಂಗಾರಿನಲ್ಲಿ ಗೋದಿ ಬೆಳೆಯುತ್ತಾರೆ.
ಕೃಷಿ ಸಲಹೆಗಳು
ಏಪ್ರಿಲ್-ಮೇ ತಿಂಗಳುಗಳಲ್ಲಿ ಸಾಕಷ್ಟು ಮಳೆಯಾದಲ್ಲಿ ಹೈಬ್ರಿಡ್ ಮುಸುಕಿನ ಜೋಳ, ಅಲಸಂದಿ, ಹೆಸರು ಅಥವಾ ಉದ್ದು ಬಿತ್ತನೆ ಮಾಡಿ.
ಮೆಣಸಿನಕಾಯಿ ಸಸಿ ಮಡಿ ಸಿದ್ಧಪಡಿಸಿರಿ.
ಜೂನ್ ತಿಂಗಳಿನಲ್ಲಿ ಸಾಕಷ್ಟು ಮಳೆಯಾದಲ್ಲಿ
ಮುಂಗಾರು ಜೋಳ ಗೋವಿನ ಜೋಳ ಬಿತ್ತಿರಿ.
ಶೇಂಗಾ ಜೊತೆಯಲ್ಲಿ ಜೋಳ ಅಥವಾ ತೊಗರಿ ಬಿತ್ತನೆ ಮಾಡಿ ಜೋಳದ ಬೆಳೆಯಲ್ಲಿ ತೊಗರಿಯನ್ನು ಅಕ್ಕಡಿ ಕಾಳು ಬೆಳೆಯಾಗಿ ಬಿತ್ತಿ. ಮಿಶ್ರ ಬೆಳೆಯಾಗಿ ಈರುಳ್ಳಿ ಕೊತ್ತಂಬರಿ ಬಿತ್ತನೆ ಮಾಡಿರಿ.
ಮೆಣಸಿನಕಾಯಿ ಸಸಿ ಮಡಿ ಸಿದ್ಧಪಡಿಸಿರಿ.
ಜೂನ್ ಮಧ್ಯದೊಳಗಾಗಿ ಆಲೂಗಡ್ಡೆ ಬಿತ್ತನೆ ಮಾಡಿರಿ.
ಗೋವಿನ ಜೋಳ ಅಥವಾ ಹಸಿರುಗೊಬ್ಬರದ ಬೆಳೆಗಳನ್ನು ಬಿತ್ತಿರಿ.
ತಂಬಾಕು ಸಸಿಮಡಿ ಸಿದ್ದಪಡಿಸಿ ಅಥವಾ ಹಸಿರುಗೊಬ್ಬರದ ಬೆಳೆಗಳನ್ನು ಬಿತ್ತಿರಿ.
ಜುಲೈ ತಿಂಗಳಿನಲ್ಲಿ ಸಾಕಷ್ಟು ಮಾಳೆಯಾದಲ್ಲಿ
ಮೆಣಸಿನಕಾಯಿ ಸಸಿ ನಾಟಿ ಮಾಡಿರಿ.
ಜುಲೈ ಮಧ್ಯದವರೆಗೂ ಗೋವಿನ ಜೋಳ ಬಿತ್ತಿರಿ.
ಆಗಸ್ಟ್ ತಿಂಗಳಿನಲ್ಲಿ ಸಾಕಷ್ಟು ಮಳೆಯಾದಲ್ಲಿ
ಮೆಣಸಿನಕಾಯಿ ಬೆಳೆಯ ಮಧ್ಯ ಹತ್ತಿ ಬೀಜ ಬಿತ್ತಿರಿ.
ಹತ್ತಿ ಬಿತ್ತನೆಯನ್ನು ಆಗಸ್ಟ್ ಮಧ್ಯದೊಳಗಾಗಿ ಮುಗಿಸಿರಿ.
ಶೇಂಗಾ ಬೆಳೆ ಜೊತೆಯಲ್ಲಿ ಹತ್ತಿ ಬಿತ್ತನೆ ಮಾಡಿರಿ.
ತಂಬಾಕು ಸಸಿಗಳನ್ನು ನಾಟಿ ಮಾಡಿರಿ.
ಸೆಪ್ಟೆಂಬರ್ ತಿಂಗಳಿನಲ್ಲಿ ಸಾಕಷ್ಟು ಮಳೆಯಾದ
ಹೈಬ್ರಿಡ್ ಜೋಳದ ಕುಳೆ ಬಿಡಿರಿ.
ಮುಂಗಾರಿ ಜೋಳ ಅಥವಾ ಮೇವಿನ ಗೋವಿನ ಜೋಳದ ನಂತರ ಕುಸುಬೆ ಬೆಳೆ ಬಿತ್ತಿರಿ.
ಅಕ್ಟೋಬರ್ ನಲ್ಲಿ ಸಾಕಷ್ಟು ಮಳೆಯಾದಲ್ಲಿ
ಶೇಂಗಾ ಬೆಳೆಯ ನಂತರ ಹಿಂಗಾರಿ ಜೋಳ ಬಿತ್ತಿರಿ.
ಗೋವಿನ ಜೋಳ, ಜೋಳ ಮತ್ತು ಶೇಂಗಾ ನಂತರ ಕುಸುಬೆ ಬೆಳೆ ಬಿತ್ತಿರಿ.
ಮುಂಗಾರು ಜೋಳ ಆಥವಾ ಗೋವಿನ ಜೋಳದ ನಂತರ ಕಡಲೆ ಬಿತ್ತಿರಿ.
ಮುಂಗಾರು ದ್ವಿದಳ ಬೆಳೆಗಳು, ಶೇಂಗಾ ಮತ್ತು ಆಲೂಗಡ್ಡೆ ನಂತರ ಗೋದಿ ಬಿತ್ತಿರಿ.
ಕೃಷಿಯಲ್ಲಿ ಯಶಸ್ಸು ಸಾಧಿಸಲು ಆಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಂಪೋಸ್ಟ್ ಮತ್ತು ಕೊಟ್ಟಿಗೆ ಗೊಬ್ಬರವನ್ನು ಬಳಸಿ. ನೀರಿನ ಸಂರಕ್ಷಣೆಗೆ ಹನಿ ನೀರಾವರಿ ಅಥವಾ ಸಿಂಪರಣೆ ನೀರಾವರಿಯಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಿ. ಕೀಟನಾಶಕ ಮತ್ತು ರಸಗೊಬ್ಬರಗಳ ಅತಿಯಾದ ಬಳಕೆಯನ್ನು ತಪ್ಪಿಸಿ. ಬೆಳೆ ವಿಮೆ ಮಾಡಿಸುವುದರ ಮೂಲಕ ನೈಸರ್ಗಿಕ ವಿಕೋಪಗಳಿಂದಾಗುವ ನಷ್ಟವನ್ನು ತಡೆಯಿರಿ. ಮಾರುಕಟ್ಟೆ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಬೆಳೆಗಳಿಗೆ ಸರಿಯಾದ ಬೆಲೆ ಪಡೆಯಲು ಪ್ರಯತ್ನಿಸಿ. ಕೃಷಿ ಇಲಾಖೆಯ ತಜ್ಞರ ಸಲಹೆಗಳನ್ನು ಪಡೆದು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ. ಇದರಿಂದ ಹೆಚ್ಚಿನ ಇಳುವರಿ ಮತ್ತು ಲಾಭ ಗಳಿಸಲು ಸಾಧ್ಯವಾಗುತ್ತದೆ.
-ಶಿವಾನಂದ ಇಟ್ನಾಳ್ ಬಿ ಎಸ್ ಸಿ (ಕೃಷಿ)
Share your comments