ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಕೊತ್ತನೂರು ಅರಣ್ಯ ವಲಯದಲ್ಲಿ ಒಂಟಿ ಸಲಗಕ್ಕೆ ನಾಡ ಬಂದೂಕಿನಿಂದ ಗುಂಡಿಕ್ಕಿ ದಂತ ಕದ್ದಿದ್ದ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ.
ಪ್ರಕರಣ ಸಂಬಂಧ ಈಟಿವಿ ಭಾರತದೊಂದಿಗೆ ಉನ್ನತ ಮೂಲಗಳು ಪ್ರತಿಕ್ರಿಯಿಸಿದ್ದು, ವೃತ್ತಿ ಬೇಟೆಗಾರರು ಚಿಕ್ಕಲ್ಲೂರು ಜಾತ್ರಾ ಸಮಯದಲ್ಲಿ ಹೊಂಚುಹಾಕಿ ಆನೆಯನ್ನು ಕೊಂದಿದ್ದಾರೆ. ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲ ಉತ್ಸವದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ 5 ಕಿ.ಮೀ. ದೂರದ ಕೊತ್ತನೂರು ವಲಯದಲ್ಲಿ ಗುಂಡಿಟ್ಟು ಆನೆ ಕೊಂದಿದ್ದಾರೆ. ಇಲಾಖೆಯ ಸಿಬ್ಬಂದಿ ಪಟಾಕಿ ಶಬ್ದ ಇರಬಹುದು ಎಂದು ನಿರ್ಲಕ್ಷ್ಯಿಸುವುದನ್ನೇ ಬೇಟೆಗಾರರು ಬಂಡವಾಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆನೆ ಕಳೇಬರ ಕಳ್ಳ ಬೇಟೆ ತಡೆ ಕ್ಯಾಂಪಿನಿಂದ 1.5 ಕಿ.ಮೀ. ದೂರದಲ್ಲಿ ಸಿಕ್ಕಿದ್ದು, ಅದು ಕೂಡ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇನ್ನು, ಆನೆ ಕಳೇಬರ ಸಿಕ್ಕ 5 ಕಿ.ಮೀ. ದೂರದ ಕಾಡಿನಲ್ಲಿ ನಾಡ ಬಂದೂಕೊಂದು ಪತ್ತೆಯಾಗಿದ್ದು, ಬೇಟೆಗಾರರು ಮತ್ತೆ ಬಾಲ ಬಿಚ್ಚಿರುವ ಶಂಕೆ ವ್ಯಕ್ತವಾಗಿದೆ.
ಆನೆಯನ್ನು ಕೊಂದು ಕೊಡಲಿಯಿಂದ ದಂತ ಕೀಳದೇ ಆ್ಯಸಿಡ್ ಬಳಸಿ ದಂತ ಕಿತ್ತಿರುವುದು ಬೇಟೆಗಾರರ ಮತ್ತೊಂದು ಜಾಣ ನಡೆಗೆ ಸಾಕ್ಷಿಯಾಗಿದೆ. ಕೂಡಲೇ, ದಂತ ಚೋರರನ್ನು ಹಿಡಿಯುವಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಒಂಟಿ ಸಲಗಕ್ಕೆ ಗುಂಡಿಟ್ಟು ಕೊಂದು ದಂತ ಕಳ್ಳತನ: ಇನ್ನೂ ಪತ್ತೆಯಾಗಿಲ್ಲ ಆರೋಪಿಗಳು
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Share your comments