1. ಸುದ್ದಿಗಳು

GOODNEWS: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ.. ಅರ್ಜಿ ಸಲ್ಲಿಕೆ ಹೇಗೆ..?

KJ Staff
KJ Staff

ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ವಿಶೇಷ ಕೊಡುಗೆ ನೀಡಿದ್ದು, ಸಿರಿಧಾನ್ಯ ಬೆಳೆಯುವ ರೈತರ ಸಲುವಾಗಿ, ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಜೊತೆಗೆ ಇದನ್ನು ನೇರ ವರ್ಗಾವಣೆ ಮೂಲಕ ರೈತರ ಅಕೌಂಟ್‌ಗೆ ಪಾವತಿಸಲಾಗುತ್ತದೆ. ಸಿರಿಧಾನ್ಯ ಬೆಳೆಗಳ ವ್ಯಾಪ್ತಿ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು 'ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಯೋಜನೆಗಳೊಂದಿಗೆ ಸಂಯೋಜಿಸಲಾಗಿದೆ.

ಇದನ್ನೂ ಓದಿ:ಹೋಳಿ ಹಬ್ಬದಲ್ಲಿ ಮುಖ ಹಾಗೂ ಕೂದಲಿನ ರಕ್ಷಣೆ ಹೇಗೆ..?ಇಲ್ಲಿವೆ 5 ಬೆಸ್ಟ್‌ ಟಿಪ್ಸ್‌

ಮುಖ್ಯಾಂಶಗಳು

• ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ
• 2 ಕಂತುಗಳಲ್ಲಿ ನಗದು ವರ್ಗಾವಣೆ
• ಸೀದಾ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು.
• ಹಾರಕ, ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಆದ್ಯತೆ
• ಮೊದಲ ಕಂತಿನ 6000 ರೂಪಾಯಿಯನ್ನು ಬಿತ್ತನೆ ಮಾಡಿದ 30 ದಿನಗಳ ನಂತರ ಜಿಪಿಎಸ್‌ ಆಧಾರಿತ ಫೋಟೋ ಪರಿಶೀಲನೆ ಬಳಿಕ ನೀಡಲಾಗುತ್ತದೆ.
• ₹4,000ವನ್ನು ನಂತರದಲ್ಲಿ ಜಮೆ ಮಾಡಲಾಗುವುದು.
• ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ.

ಇದನ್ನೂ ಓದಿ:Job updates: ONGC ಯಲ್ಲಿ ನೇಮಕಾತಿ ಆರಂಭ..ಈ ಪದವಿ ಪಡೆದವರಿಗೆ ಆದ್ಯತೆ

ಈ ಯೋಜನೆಯ ಉದ್ದೇಶಗಳು ಏನು..?
• ಸಿರಿಧಾನ್ಯ ಬಿತ್ತನೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದನೆಯ ಹೆಚ್ಚಳ
• ಸಿರಿಧಾನ್ಯಗಳು ಸುಸ್ಥಿರ ಕೃಷಿ ಹಾಗೂ ಪರಿಸರಕ್ಕೆ ಪೂರಕವಾಗಿರುವುದರಿಂದ ಈ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ
• ಕಡಿಮೆ ಫಲಪ್ರದವಾದ ಭೂಮಿಯ ಸದ್ಬಳಕೆಗಾಗಿ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತವಾಗಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಇದನ್ನೂ ಓದಿ:15 ಸಾವಿರ ಶಿಕ್ಷಕರ ನೇಮಕಾತಿ: ಎಂಜಿನಿಯರಿಂಗ್‌ ಪದವಿಧರರಿಗೆ ಭರ್ಜರಿ ನ್ಯೂಸ್‌ ನೀಡಿದ ಸರ್ಕಾರ

ಫಲಾನುಭವಿಗಳ ಅರ್ಹತೆ:
• ಫಲಾನುಭವಿಯು ಮೊದಲಿಗೆ ರೈತರಾಗಿರಬೇಕು. ಅವರ ಹೆಸರರಿನಲ್ಲಿಯೇ ಜಮೀನನ್ನು ಹೊಂದಿರಬೇಕು. ಜಂಟಿ ಖಾತೆ ಇದ್ದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆಯ ಪ್ರಮಾಣ ಪತ್ರ ಪಡೆದಿರಬೇಕು.

• ಮಹಿಳೆಯ ಹೆಸರಲ್ಲಿ ಖಾತೆ ಹೊಂದಿ, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯ ಮಾಡಬಾರದು, ಅಂತವುಗಳನ್ನು ತಿರಸ್ಕರಿಸಬೇಕು.

• ಫಲಾನುಭವಿ ರೈತರು ಮೇಲ್ಕಾಣಿಸಿದ ಸಿರಿಧಾನ್ಯಗಳನ್ನೆ ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.

ಇದನ್ನೂ ಓದಿ:IMPORTANT: PPF ಖಾತೆದಾರರೆ ಗಮನವಿರಲಿ..ಈ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಬಡ್ಡಿ ಹಣ ಹೋಗೋದು ಫಿಕ್ಸ್‌..!

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ
• ವಸತಿ ಪ್ರಮಾಣಪತ್ರ
• ಆಧಾರ್ ಕಾರ್ಡ್
• ಆದಾಯ ಪ್ರಮಾಣಪತ್ರ
• ಬ್ಯಾಂಕ್ ಖಾತೆ ಪಾಸ್ ಬುಕ್
• ವಿಳಾಸದ ಕುರಿತಂತೆ ಪುರಾವೆ
• ಭೂ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ..?
ಈ ಯೋಜನೆಯು ನೀಡಿರುವ ಮಾಹಿತಿ ಪ್ರಕಾರ ಸರ್ಕಾರ ಇದುವರೆಗೆ ಈ ಸ್ಕೀಂಗೆ ಯಾವುದೇ ಅಧಿಕೃತ ಅಧಿಕಾರಿಯನ್ನು ನೇಮಿಸಿಲ್ಲ. ಸದ್ಯದ ಮಾಹಿತಿಯಂತೆ ಅರ್ಹ ಪಲಾನುಭವಿಗಳು ರಾಜ್ಯ ಪೋರ್ಟಲ್‌ನಲ್ಲಿ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಲಲಿಂಕ್ ಮೂಲಕ ನೋಡಬಹುದಾಗಿದೆ..

ಇದನ್ನೂ ಓದಿ:ಅಚ್ಚರಿ ಆದ್ರೂ ಸತ್ಯ: ಪೇಪರ್‌ Shortage ಅಂತಾ ಪರೀಕ್ಷೆ ಕ್ಯಾನ್ಸಲ್‌..! ಆತಂಕದಲ್ಲಿ 35 ಲಕ್ಷ ವಿದ್ಯಾರ್ಥಿಗಳು

Published On: 21 March 2022, 10:03 AM English Summary: rithasiri millet growers get 10000

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.