1. ಸುದ್ದಿಗಳು

ಕೃಷಿ ಕ್ಷೇತ್ರದ ಯೋಜನೆಗಳ ಪ್ರಚಾರ ಅವಶ್ಯ: ಸುಪ್ರೀಂ ಕೋರ್ಟ್‌ ನಿ. ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ

Hitesh
Hitesh
Promotion of agriculture sector schemes is necessary: Retired Chief Justice of the Supreme Court P. Sadashivam

ಕೇಂದ್ರ ಸರ್ಕಾರವು ರೈತರಿಗೆ ಹಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಆದರೆ, ಅದನ್ನು ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಷ್ಟೇ ಅಲ್ಲದೇ ಸ್ಥಳೀಯ ಭಾಷೆಗಳಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಇದೆ. ಆಗಷ್ಟೇ ಅದು ರೈತರನ್ನು ತಲುಪಲಿದೆ ಎಂದು ಪಿ. ಸದಾಶಿವಂ ಅವರು ಅಭಿಪ್ರಾಯಪಟ್ಟರು.

ಪಿ. ಸದಾಶಿವಂ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಕೇರಳದ ರಾಜ್ಯಪಾಲರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಶುಕ್ರವಾರ ಕೃಷಿ ಜಾಗರಣದ ಚೌಪಾಲ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ನಾನು ನಿವೃತ್ತಿಯ ನಂತರ 2019ರ ಸೆಪ್ಟೆಂಬರ್‌ನಿಂದ ಪೂರ್ಣಾವಧಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಸ್ವಗ್ರಾಮದಲ್ಲಿ ಸುಮಾರು 30 ಎಕರೆ ಜಮೀನಿನಲ್ಲಿ

ಕಬ್ಬು, ಅಡಕೆ, ಬಾಳೆ, ತೆಂಗಿನ ಮರಗಳನ್ನು ಬೆಳೆಯಲಾಗಿದ್ದು, ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ಧತಿ ಬಳಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.  

ಇನ್ನು ಹಸುವಿನ ಸಗಣಿ ಮತ್ತು ಮೇಕೆ ಸಗಣಿಯನ್ನೂ ಸಹ ನೈಸರ್ಗಿಕ ಗೊಬ್ಬರವಾಗಿ ಬಳಸಲಾಗುತ್ತಿದೆ. 27*27 ಅಂತರದಲ್ಲಿ ತೆಂಗಿನ ಮರಗಳನ್ನು ನಾಟಿ ಮಾಡಲಾಗಿದ್ದು,

ಅಂತರ ಬೆಳೆಯಾಗಿ ಕೋಕೋಯಂ ಬೆಳೆಯಲಾಗಿದೆ.

ಆಧುನಿಕ ತಂತ್ರಜ್ಞಾನ ಬಳಕೆ ಮಾಡಿದರೂ ಆದಾಯ ಬರುತ್ತಿಲ್ಲ ಎನ್ನುವುದು ಸತ್ಯ.  ನನ್ನ ತೆಂಗಿನ ತೋಟದಲ್ಲಿ ಬೆಳೆದ ತೆಂಗಿನಕಾಯಿಗೆ ಹೆಚ್ಚೆಂದರೆ 5 ರಿಂದ 7 ರೂ.

ಆದರೆ,  ಒಂದು ತೆಂಗಿನಕಾಯಿ ಮಾತ್ರ ಮಾರುಕಟ್ಟೆಯಲ್ಲಿ ಸುಮಾರು 30 ರೂಪಾಯಿಗೆ ಮಾರಾಟವಾಗುತ್ತದೆ. ರೈತ ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳೇ

ಹೆಚ್ಚು ಆದಾಯ ಗಳಿಸುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಯೋಜನೆಯಲ್ಲಿ ಕಾರ್ಮಿಕರನ್ನು

ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈ ಯೋಜನೆಯಲ್ಲಿ ಭಾಗವಹಿಸುವ ಉದ್ಯೋಗಿಗಳನ್ನು ಖಾತ್ರಿ ಆಧಾರದ ಮೇಲೆ ಖಾಸಗಿಯಲ್ಲಿಯೂ ಕೆಲಸ ಮಾಡುವುದಕ್ಕೆ

(ಖಾಸಗಿ ಕೃಷಿ ಭೂಮಿಯಲ್ಲಿ) ಅವಕಾಶ ಕಲ್ಪಿಸಬೇಕು. ಕೃಷಿ ಕೆಲಸಗಳಿಗೂ ಸಿಬ್ಬಂದಿ ಕೊರತೆ ಇರುವುದರಿಂದ ಈ ರೀತಿ ಪರಿಹಾರ ಕಂಡುಕೊಳ್ಳಬಹುದು.

ಇದರಿಂದ ಕೃಷಿ ಮಾಡುವವರು ಹಾಗೂ ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಲಾಭವಾಗಲಿದೆ ಎಂದರು.

ಪ್ರಧಾನಿಗೆ ಮನವಿ:

ಪ್ರಧಾನಿಯವರೊಂದಿಗಿನ ಭೇಟಿಯನ್ನು ಹಂಚಿಕೊಂಡ ಸದಾಶಿವಂ ಅವರು,  ಇತ್ತೀಚೆಗೆ ನನಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.

ನಂತರ ಅವರು ನನಗೆ ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಕುರಿತು ಕೈಪಿಡಿಯನ್ನು ನೀಡಿದರು.

ಬೀಜಗಳೊಂದಿಗೆ ಮೋದಿ, ರೈತರೊಂದಿಗೆ ಮೋದಿ ಎನ್ನುವುದು ಆ ಪುಸ್ತಕವಾಗಿತ್ತು.

ನಾನು ಅದನ್ನು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸಬೇಕೆಂದು ವಿನಂತಿಸಿದೆ.

ಕಾರಣ ಮಾರುಕಟ್ಟೆಯ ಕೊನೆ ಭಾಗದ ರೈತರಿಗೆ ಸರಕಾರದ ಎಲ್ಲ ಯೋಜನೆಗಳು ತಲುಪಿಲ್ಲ.

ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದ ಬೆಳೆ ಹಾನಿಯಾಗುತ್ತದೆ. ತಾಲೂಕು ಮಟ್ಟದ ಅಧಿಕಾರಿಗಳು ನೀಡುವ ವರದಿ ಆಧರಿಸಿ ವಿಮೆ ಸ್ವೀಕರಿಸಲಾಗುತ್ತದೆ.

ಕೆಲವೊಮ್ಮೆ, ಕೆಲವು ಗ್ರಾಮಗಳಲ್ಲಿ ತೀವ್ರ ಬೆಳೆ ಹಾನಿ ಸಂಭವಿಸಿ ವಿಮೆ ಲಭ್ಯವಿಲ್ಲ.

ಆದ್ದರಿಂದ ಗ್ರಾಮ ಮಟ್ಟದಲ್ಲಿ ಗ್ರಾ.ಪಂ.ಆಡಳಿತಾಧಿಕಾರಿಗಳು ಬೆಳೆಹಾನಿ ಕುರಿತು ವರದಿ ನೀಡಿ ವಿಮಾ

ಕಂಪನಿಗಳು ಸ್ವೀಕರಿಸುವಂತೆ ಕ್ರಮಕೈಗೊಳ್ಳುವುದು ಅವಶ್ಯ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

Promotion of agriculture sector schemes is necessary: Retired Chief Justice of the Supreme Court P. Sadashivam

ಸದಾಶಿವಂ ಮಾತನಾಡಿ, ಉತ್ಪನ್ನಗಳ ಮೌಲ್ಯ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಉತ್ಪನ್ನಕ್ಕೆ ಸೂಕ್ತ ಎಂಎಸ್‌ಪಿಯನ್ನು

ಸರ್ಕಾರ ನಿರ್ಧರಿಸಿ ಖರೀದಿಸಬೇಕು ಎಂದು ಒತ್ತಾಯಿಸಿದರು.

ಮಳೆಗಾಲದಲ್ಲಿ ನಾನಾ ಭತ್ತದ ಚೀಲಗಳು ಮಳೆಗೆ ಒದ್ದೆಯಾಗಿ ನಿರುಪಯುಕ್ತವಾಗುವ ಸ್ಥಿತಿ ಮುಂದುವರಿದಿದ್ದು, ಹತ್ತಿ ಸೌಲಭ್ಯವನ್ನು ಸರಕಾರ ಸುಧಾರಿಸಬೇಕು ಎಂದರು.

ಕೃಷಿ ಉತ್ಪನ್ನಗಳಾದ ಬೀಜ, ಗೊಬ್ಬರ, ಟ್ರ್ಯಾಕ್ಟರ್, ಕ್ರಷರ್ ಖರೀದಿಗೆ ಶೇ.50 ರಷ್ಟು ಸಬ್ಸಿಡಿ

ಬೆಲೆ ನೀಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.   

Promotion of agriculture sector schemes is necessary: Retired Chief Justice of the Supreme Court P. Sadashivam

ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ಪ್ರಧಾನ ಸಂಸ್ಥಾಪಕರು ಹಾಗೂ ಸಂಸ್ಥಾಪಕರಾದ ಎಂ.ಸಿ ಡೊಮಿನಿಕ್‌  ಹಾಗೂ ಕೃಷಿ ಜಾಗರಣದ ನಿರ್ದೇಶಕಿ ಶೈನಿ ಡೊಮಿನಿಕ್,

ಡಾ .ಕೆಎಂಎಲ್ ಪಾಠಕ್ ಮಾಜಿ DDG, ಪ್ರಾಣಿ ವಿಜ್ಞಾನ, ICAR ಮಾಜಿ ಉಪಕುಲಪತಿ, DUVASU ಮಥುರಾ, ಬಿಮಲ್ ಕುಮಾರ್ ಹೆಡ್ ಸ್ಟ್ರಾಟೆಜಿಕ್ ಅಫೇರ್ಸ್,

ಸೋನಾಲಿಕಾ ಗ್ರೂಪ್, ಸಂಜಯ್ ಸೇಥಿ ಕಾರ್ಯನಿರ್ವಾಹಕ ನಿರ್ದೇಶಕರು, ಸಸ್ಯ ಆಧಾರಿತ ಆಹಾರ ಉದ್ಯಮ ಸಂಘ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Published On: 16 June 2023, 04:25 PM English Summary: Promotion of agriculture sector schemes is necessary: Retired Chief Justice of the Supreme Court P. Sadashivam

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.