1. ಸುದ್ದಿಗಳು

ಕೃಷಿ ಯಂತ್ರಧಾರೆ FPOಗಳಿಗೆ ವಹಿಸಲು ಚಿಂತನೆ- B. C. ಪಾಟೀಲ್‌

Maltesh
Maltesh
Krishi Yantradhare Agricultural Machinery to FPOs- B. C. Patil

1-ಸಾವಿರಾರು ರೈತರಿಗೆ ಉಪಯುಕ್ತವಾದ ಕೃಷಿ ಯಂತ್ರಧಾರೆ ಯೋಜನೆಯನ್ನು FPOಗಳಿಗೆ ವಹಿಸಲು ಚಿಂತನೆ ಮಾಡಲಾಗುತ್ತಿದೆ  ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.-

ವಿಧಾನ ಪರಿಷತ್ನಲ್ಲಿ ಸದಸ್ಯ ಪಿ.ಎಂ. ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ’ರಾಜ್ಯದಲ್ಲಿ ಪ್ರಸ್ತುತ 689 ಕೃಷಿ ಯಂತ್ರಧಾರೆ ಕೇಂದ್ರಗಳಿವೆ. ಜೊತೆಗೆ ಹೋಬಳಿಗೊಂದು ಯಂತ್ರಧಾರೆ ಕೇಂದ್ರ ತೆರೆಯಬೇಕಾದ ಅವಶ್ಯಕತೆಯಿದೆ. ಸದ್ಯ ಇಲ್ಲಿಯವರೆಗೆ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಸಂಸ್ಥೆಗಳ ಅವಧಿ ಮುಗಿದಿದೆ.

ಇದನ್ನು ಮುಂದುವರಿಸಲು ಸಂಸ್ಥೆಗಳು ಅಸಕ್ತಿ ತೋರುತ್ತಿಲ್ಲ. ಆದ್ದರಿಂದ ಇನ್ನು ಮುಂದೆ ಈ ಕೇಂದ್ರಗಳನ್ನು ರೈತ ಉತ್ಪಾದಕ ಸಂಸ್ಥೆಗಳಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆಎಂದು ಸಚಿವರು ತಿಳಿಸಿದರು.

2-ಕೃಷಿ ಜಾಗರಣ ಪ್ರಸ್ತುತಿ “ ಸುವರ್ಣ ಕೃಷಿ ಮೇಳದ ಒಂದನೇ  ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದು, ಕೃಷಿ ಮೇಳವನ್ನು ರಂಗೇರಿಸಿದೆ.

ಕೃಷಿ ಜಾಗರಣ ಸಂಸ್ಥೆಯು ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎಜೆಎಐ) ಸಹಯೋಗದಲ್ಲಿ ಆಯೋಜಿಸಿರುವ ಸುವರ್ಣ ಕೃಷಿ ಮೇಳವು,  ಮಯೂರಭಂಜ್ನ ಸುಲಿಯಾಪದ ಬಘಡಾ ಹೈಸ್ಕೂಲ್ ಮೈದಾನದಲ್ಲಿ ನಿನ್ನೆ ಪ್ರಾರಂಭವಾಯಿತು. ಎರಡು ದಿನಗಳವರೆಗೆ ನಡೆಯಲಿರುವ ಈ ಮೇಳವು ಇಂದು ಕೊನೆಗೊಳ್ಳಲಿದೆ.

ನಿನ್ನೆ ರಾತ್ರಿವರೆಗೂ ಜನರು ಆಗಮಿಸಿದ್ದು ಸಾಕಷ್ಟು ಕೃಷಿ ತಂತ್ರಜ್ಞಾನ ಹಾಗೂ ವಿವಿಧ ಯಂತ್ರೋಪಕರಣಗಳ ಕುರಿತು ಹಲವಾರು ಸಂಸ್ಥೆಗಳಿಂದ ಮಾಹಿತಿ ಪಡೆದುಕೊಂಡರು. ಇನ್ನು ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳವನ್ನು ಇನ್ನಷ್ಟು ವರ್ಣರಂಜಿತಗೊಳಿಸಿದವು.

3-ಕಿಸಾನ್ ದಿವಸ್ ನಿಮಿತ್ತ ರಾಜ್ಯದ ರೈತರನ್ನು ಬೆಂಬಲಿಸಲು ಉತ್ತರ ಪ್ರದೇಶದ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಅಗ್ರಿಗೇಷನ್ FPO ನಾಯಕತ್ವ ಶೃಂಗಸಭೆ ಮತ್ತು ಪ್ರದರ್ಶನವನ್ನು ನಡೆಸಲಾಯಿತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

#Pmkisan ಪಿಎಂ ಕಿಸಾನ್‌: ಅನರ್ಹ ರೈತರಿಂದ ಹಣ ವಸೂಲಿಗೆ ಸಜ್ಜಾದ ಕೃಷಿ ಇಲಾಖೆ

ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಸನ್ಮಾನ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಅವರು ರೈತರು/ಕೃಷಿ ಉದ್ಯಮಿಗಳು ಮತ್ತು ಕೃಷಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

4- ರಾಜ್ಯದ ರೈತರ ಆದಾಯವನ್ನು ಡಬಲ್‌ ಮಾಡಲು  ನಮ್ಮ ಸರಕಾರವು ಪ್ರಯತ್ನಿಸುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್ ತಿಳಿಸಿದರು.

ರೈತರು ತಮ್ಮ ಇಂದಿನ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹಾಗೂ ಆಧುನಿಕತೆಯನ್ನು ರೂಢಿಸಿಕೊಂಡಲ್ಲಿ ಹೆಚ್ಚಿನ ಆದಾಯ  ಪಡೆಯಲು ಸಾಧ್ಯ.

ಭತ್ತ ಖರೀದಿ ಕೇಂದ್ರಗಳ ಪ್ರಾರಂಭವನ್ನು ರೈತರಿಗೆ ಅನುಕೂಲ ವಾಗುವಂತೆ ಬೆಳೆ ಕಟಾವಿಗೆ ಬಂದಾಗ ಪ್ರಾರಂಭಿಸಿದ್ದಲ್ಲಿ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಬರುವ ಭತ್ತದ ಕಟಾವು ಸಂದರ್ಭದಲ್ಲಿಯೇ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಅಧಿಕಾರಿಗಳು ಕಾರ್ಯಪ್ರವೃತ್ತ ರಾಗಬೇಕು ಎಂದು ಸೂಚನೆ ನೀಡಿದರು.

LPG : ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ..ಹೊಸ ವರ್ಷಕ್ಕೆ ಸರ್ಕಾರದಿಂದ ಗಿಫ್ಟ್‌..?

5- ಕೇಂದ್ರಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ. ಗಿರಣಿ ಕೊಬ್ಬರಿ ಪ್ರತಿ ಕ್ವಿಂಟಲ್ಗೆ 10,860 ನಿಗದಿ ಮಾಡಿದ್ರೆ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 11,750 ರೂ ನಿಗದಿಮಾಡಲಾಗಿದೆ.

ಗಿರಣಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 270 ರೂ. ಹೆಚ್ಚಳ ಮಾಡಲಾಗಿದ್ದು, ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 750 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ 2023ರ ಋತುವಿಗೆ ಅನ್ವಯವಾಗುವಂತೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದೆ.

Published On: 24 December 2022, 03:39 PM English Summary: Krishi Yantradhare Agricultural Machinery to FPOs- B. C. Patil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.