1. ಸುದ್ದಿಗಳು

Schemes For Farmers ದೇಶದಲ್ಲಿ ರೈತರಿಗಿರುವ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ!

Hitesh
Hitesh
Here are the details of important schemes for farmers in the country!

ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರಿಗಾಗಿ ಕೇಂದ್ರ ಸರ್ಕಾರ ಪರಿಚಯು ಪ್ರಮುಖ 10 ಯೋಜನೆಗಳು ಇಲ್ಲಿವೆ.

E-NAM

ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಒಂದು ಪ್ಯಾನ್-ಇಂಡಿಯಾ ಎಲೆಕ್ಟ್ರಾನಿಕ್ ಟ್ರೇಡಿಂಗ್ ಪೋರ್ಟಲ್ ಆಗಿದ್ದು,

ಇದು ಕೃಷಿ ಸರಕುಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ರಚಿಸಲು APMC ಮಂಡಿಗಳ ನೆಟ್‌ವರ್ಕ್‌ ಕಲ್ಪಿಸುತ್ತದೆ.  

 ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟವು  eNAM ಅನ್ನು ಅನುಷ್ಠಾನಗೊಳಿಸುವ ಪ್ರಮುಖ ಪಾತ್ರ ವಹಿಸುತ್ತದೆ.

ಇದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೃಷಿ ಮಾರಾಟದಲ್ಲಿ ಏಕರೂಪತೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಕೃಷಿ ಸರಕುಗಳ ವ್ಯಾಪಾರವನ್ನು ಸುಗಮಗೊಳಿಸಲು ಆನ್‌ಲೈನ್ ಮಾರುಕಟ್ಟೆ ವೇದಿಕೆಯ ಮೂಲಕ ದೇಶಾದ್ಯಂತ APMCಗಳ ಏಕೀಕರಣ,

ಆನ್‌ಲೈನ್ ಪಾವತಿ ಹಾಗೂ ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆ ಪಾರದರ್ಶಕ ಹರಾಜು ಪ್ರಕ್ರಿಯೆ ಕಾಯ್ದುಕೊಳ್ಳುವುದು ಇದರ ಗುರಿಯಾಗಿದೆ. 

ಸುಸ್ಥಿರ ಕೃಷಿಗಾಗಿ ಸ್ಥಾಪಿಸಿರುವ ರಾಷ್ಟ್ರೀಯ ಮಿಷನ್ನಡಿಯ ಯೋಜನೆಗಳು, ಪ್ರಾಧಿಕಾರ ಹಾಗೂ ಸಂಸ್ಥೆಗಳ ವಿವರ ಈ ರೀತಿ ಇದೆ.

ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ

ಮಣ್ಣಿನ ಆರೋಗ್ಯ ನಿರ್ವಹಣೆ

ಕೃಷಿ ಅರಣ್ಯದ ಉಪಮಿಷನ್‌

ಪರಂಪರಾಗತ್ ಕೃಷಿ ವಿಕಾಸ ಯೋಜನೆ

ಭಾರತದ ಮಣ್ಣು ಮತ್ತು ಭೂ ಬಳಕೆ ಸಮೀಕ್ಷೆ

ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ

ಈಶಾನ್ಯ ಪ್ರದೇಶದಲ್ಲಿ ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ

ಸಾವಯವ ಕೃಷಿ ರಾಷ್ಟ್ರೀಯ ಕೇಂದ್ರ

ಕೇಂದ್ರ ರಸಗೊಬ್ಬರ ಗುಣಮಟ್ಟ ನಿಯಂತ್ರಣ ಮತ್ತು ತರಬೇತಿ ಸಂಸ್ಥೆ 

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)

ಭಾರತದ ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು

ಉದ್ದೇಶದಿಂದ  ಭಾರತ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ.

ಇದರ ಘೋಷಾವಾಕ್ಯವು ಪ್ರತಿ   ಜಮೀನಿಗೂ ನೀರು.

ಈ ಯೋಜನೆಯ ಉದ್ದೇಶವು ಜಲ ಸಂರಕ್ಷಣೆ ಮತ್ತು ಅದರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿದೆ.

ಒಂದು ಹನಿ ನೀರಿಗೆ ಹೆಚ್ಚು ಬೆಳೆ ಎನ್ನುವ ಪರಿಕಲ್ಪನೆಯನ್ನು ಈ ಯೋಜನೆ ಹೊಂದಿದೆ. 
--------------------

ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY)

ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಪರಂಪರಾಗತ್ ಕೃಷಿ ವಿಕಾಸ ಯೋಜನೆನ್ನು ಕೇಂದ್ರ ಸರ್ಕಾರವು 2015ರಲ್ಲಿ  ಪ್ರಾರಂಭಿಸಿತು.

ಯೋಜನೆಯು ರೈತರು ದೊಡ್ಡ ಪ್ರದೇಶಗಳಲ್ಲಿ ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.

ಇದರ ಲಾಭವನ್ನು ಪಡೆಯಲು ಪ್ರತಿ ಕ್ಲಸ್ಟರ್ ಅಥವಾ ಗುಂಪು ಪರಂಪರಾಗತ್ ಕೃಷಿ ವಿಕಾಸ ಯೋಜನೆ

ಅಡಿಯಲ್ಲಿ ಸಾವಯವ ಕೃಷಿಯನ್ನು ತೆಗೆದುಕೊಳ್ಳಲು ಸಿದ್ಧರಿರುವ 50 ರೈತ ಸದಸ್ಯರನ್ನು ಒಳಗೊಂಡಿರಬೇಕು.

ಅಲ್ಲದೇ ಕನಿಷ್ಠ 50 ಎಕರೆಗಳ ಒಟ್ಟು ಪ್ರದೇಶವನ್ನು ಹೊಂದಿರಬೇಕು.

ಯೋಜನೆಗೆ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ರೈತನಿಗೆ ಮೂರು ವರ್ಷಗಳ ಅವಧಿಯಲ್ಲಿ

ಸರ್ಕಾರವು ಪ್ರತಿ ಎಕರೆಗೆ 2 ಲಕ್ಷ ರೂಪಾಯಿ ನೀಡುತ್ತದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)

ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯು ಸರ್ಕಾರ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಾಗಿದ್ದು,

ಒಂದೇ ವೇದಿಕೆಯಲ್ಲಿ ಹಲವು ಉಪಯೋಗಗಳನ್ನು ಒದಗಿಸುತ್ತದೆ.

 ಈ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಬೆಳೆಗಳನ್ನು ನೈಸರ್ಗಿಕ ವಿಕೋಪಗಳು, ಕೀಟಗಳು ಅಥವಾ ರೋಗ ಬಾಧೆಯಿಂದ ಹಾನಿಯಾದರೆ,

ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತದೆ. ಅಲ್ಲದೇ ಕೃಷಿಯಲ್ಲಿ ರೈತರು ನಿರಂತರವಾಗಿ

ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ರೈತರ ಆದಾಯವನ್ನು ಸ್ಥಿರಗೊಳಿಸುವುದು ಇದರ ಉದ್ದೇಶವಾಗಿದೆ.

ಅಲ್ಲದೇ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದು.

 ಕೃಷಿ ಕ್ಷೇತ್ರಕ್ಕೆ ಸಾಲದ ಹರಿವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.  
--------------------

ಗ್ರಾಮೀಣ ಭಂಡಾರನ್ ಯೋಜನೆ

ಈ ಯೋಜನೆಯ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಶೇಖರಣಾ ಸಾಮರ್ಥ್ಯವನ್ನು ರಚಿಸುವುದು.

ಕೃಷಿ ಉತ್ಪನ್ನಗಳ ಶ್ರೇಣೀಕರಣ, ಪ್ರಮಾಣೀಕರಣ ಮತ್ತು ಗುಣಮಟ್ಟ ನಿಯಂತ್ರಣವನ್ನು ಉತ್ತೇಜಿಸುವುದಾಗಿದೆ.
--------------------
ಜಾನುವಾರು ವಿಮಾ ಯೋಜನೆ

ಈ ಯೋಜನೆಯು ಜಾನುವಾರು ಸಾಕುವ ರೈತರಿಗಾಗಿ ಇದೆ. ತಮ್ಮ ಪ್ರಾಣಿಗಳ ಸಾವಿನಿಂದ ಉಂಟಾಗುವ ನಷ್ಟವನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. 

ಜಾನುವಾರುಗಳ ವಿಮಾ ಯೋಜನೆಯ ಮೂಲಕ ರೈತರು ಮುಂಜಾಗ್ರತಾ ಕ್ರಮವನ್ನು ಅನುಸರಿಸಬಹುದಾಗಿದೆ. 
-------------------- 

ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆಯ ಯೋಜನೆ

ಮೀನುಗಾರಿಕೆ ವಿಸ್ತರಣಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಾಯ ಮಾಡಲು ಮೀನುಗಾರಿಕೆ ವಲಯಕ್ಕೆ

ತರಬೇತಿ ನೀಡಲು ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆಯ ಯೋಜನೆಯನ್ನು ಪರಿಚಯಿಸಲಾಗಿದೆ. 
--------------------
ಮೀನುಗಾರರ ಕಲ್ಯಾಣ ರಾಷ್ಟ್ರೀಯ ಯೋಜನೆ

ಮೀನುಗಾರರಿಗೆ ಮನೆ, ಮನರಂಜನೆಗಾಗಿ ಸಮುದಾಯ ಭವನ ಮತ್ತು ಸಾಮಾನ್ಯ ಕೆಲಸದ ಸ್ಥಳ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.  
--------------------
ಸೂಕ್ಷ್ಮ ನೀರಾವರಿ ನಿಧಿ (MIF)

ಕೃಷಿ ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿ ನಿಧಿಯನ್ನು ಪರಿಚಯಿಸಲಾಗಿದೆ.

ಈ ನಿಧಿಯನ್ನು ನಬಾರ್ಡ್ ಅಡಿಯಲ್ಲಿ ಸ್ಥಾಪಿಸಲಾಗಿದೆ.

ಇದು ಸೂಕ್ಷ್ಮ ನೀರಾವರಿಯನ್ನು ಉತ್ತೇಜಿಸಲು ರಾಜ್ಯಗಳಿಗೆ ರಿಯಾಯಿತಿ ದರದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ.  

Photo Source: pexels.com  

Published On: 14 July 2023, 05:29 PM English Summary: Here are the details of important schemes for farmers in the country!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.