1. ಸುದ್ದಿಗಳು

ಲಂಪಿ ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಸಿಎಂ ಬೊಮ್ಮಾಯಿ ರೂ.30,000 ಪರಿಹಾರ ಘೋಷಣೆ:!

Kalmesh T
Kalmesh T
CM Announcement of compensation for cattle victims of lumpy disease

ಲಂಪಿ ಚರ್ಮರೋಗಕ್ಕೆ ತುತ್ತಾಗುವ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಮತ್ತು ರೋಗಕ್ಕೆ ಬಲಿಯಾಗುವ ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿರಿ: ಮಳೆ ವರದಿ; ಅಕ್ಟೋಬರ್‌ 2ರ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ! 

Lumpy skin disease: ಚರ್ಮ ಗಂಟು ರೋಗದಿಂದ ಸಂಭವಿಸುತ್ತಿರುವ ಜಾನುವಾರುಗಳ ಸಾಲು ಸಾಲು ಸಾವಿನಿಂದ ಕಂಗೆಟ್ಟಿರುವ ರಾಜ್ಯದ ರೈತರ ನೆರವಿಗೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿದೆ.

ಚರ್ಮಗಂಟು ಕಾಯಿಲೆಯಿಂದ ಸಾವಿಗೀಡಾಗುವ ಹಸುವಿಗೆ 20 ಸಾವಿರ, ಎತ್ತಿಗೆ 30 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಮೆಗಾ ಡೈರಿ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಚರ್ಮ ಗಂಟು ಬಾಧೆಗೆ ತುತ್ತಾದ ಜಾನುವಾರುಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ. ಗಂಟು ರೋಗದಿಂದ ರಾಸುಗಳ ಜೀವಹಾನಿಯಾದಾಗ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದರು.

11 ಕೋಟಿಗೂ ಹೆಚ್ಚು ರೈತರ ಖಾತೆಗೆ ಈ ದಿನ ಬರಲಿದೆ ಪಿಎಂ ಕಿಸಾನ್‌ 12ನೇ ಕಂತಿನ ಹಣ!

ರೈತರಿಗೆ ನೇರ ಪಾವತಿ:

ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಹಾಯಧನ, ಸಬ್ಸಿಡಿ ಹಾಗೂ ವಿವಿಧ ಯೋಜನೆಯ ಅನುದಾನವನ್ನು ನೇರವಾಗಿ ರೈತರ ಖಾತೆಗೆ ಜಮಾಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದರು.

ಪ್ರಾಣಿಗಳಲ್ಲಿ ಕಂಡುಬರುವ ಲಕ್ಷಣಗಳು

ಈ ರೋಗದಿಂದ ಸೋಂಕಿತ ಪ್ರಾಣಿಯು ಮೊದಲು ಮಧ್ಯಮ ಮತ್ತು ಕೆಲವೊಮ್ಮೆ ತೀವ್ರವಾದ ಜ್ವರವನ್ನು ಹೊಂದಿರುತ್ತದೆ. ಪ್ರಾಣಿಗಳ ಮೂಗು ಮತ್ತು ಕಣ್ಣುಗಳಿಂದ ನೀರು ಬರಲು ಪ್ರಾರಂಭಿಸುತ್ತದೆ ಮತ್ತು ಅವುಗಳ ತಿನ್ನುವುದು ಮತ್ತು ಕುಡಿಯುವುದು ಕಡಿಮೆಯಾಗುತ್ತದೆ. ಹಾಲುಣಿಸುವ ಪ್ರಾಣಿಗಳ ಹಾಲಿನ ಇಳುವರಿ ಕಡಿಮೆಯಾಗುತ್ತದೆ.

ದೇಹದ ಮೇಲೆ ಸುಮಾರು ಎರಡರಿಂದ ಐದು ಸೆಂಟಿಮೀಟರ್ ವ್ಯಾಸದಲ್ಲಿ ಗಟ್ಟಿಯಾದ ಮತ್ತು ದುಂಡಗಿನ ಗಂಟುಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ಈ ಗೆಡ್ಡೆಗಳು ಮುಖ್ಯವಾಗಿ ತಲೆ, ಕುತ್ತಿಗೆ ಮತ್ತು ಕಾಲುಗಳು ಮತ್ತು ಕೆಚ್ಚಲಿನ ಸುತ್ತಲೂ ಸಂಭವಿಸುತ್ತವೆ.

7ನೇ ವೇತನ ಆಯೋಗ: 48 ಲಕ್ಷ ನೌಕರರಿಗೆ ದೀಪಾವಳಿ ನಿಮಿತ್ತ ಇಲ್ಲಿದೆ ಸಿಹಿಸುದ್ದಿ!

ಹಾಗೆಯೇ ಪ್ರಾಣಿಗಳ ಗಂಟಲು ಮತ್ತು ಬಾಯಿಯಲ್ಲಿ, ಶ್ವಾಸಕೋಶ ಮತ್ತು ಉಸಿರಾಟದ ಪ್ರದೇಶದಲ್ಲಿ ಹುಣ್ಣುಗಳು ಉಂಟಾಗುತ್ತವೆ. ಬಾಯಿಯಲ್ಲಿ ಸಂಭವಿಸುವ ಯಾವುದೇ ದದ್ದು ಪ್ರಾಣಿಯು ಹೇರಳವಾಗಿ ಜೊಲ್ಲು ಸುರಿಸುವಂತೆ ಮಾಡುತ್ತದೆ. ಬಾಯಿಯಲ್ಲಿ ಉಂಟಾಗುವ ಯಾವುದೇ ಹುಣ್ಣುಗಳು ಪ್ರಾಣಿಗಳಿಗೆ ಮೇವು ತಿನ್ನಲು ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಇದರಿಂದ ಪ್ರಾಣಿಗಳ ದೃಷ್ಟಿಗೆ ಧಕ್ಕೆಯಾಗುವ ಸಂಭವವಿದೆ. ಪ್ರಾಣಿಗಳು ತುಂಬಾ ದುರ್ಬಲವಾಗುತ್ತವೆ ಮತ್ತು ತೂಕವನ್ನು ಕಳೆದುಕೊಳ್ಳುತ್ತವೆ. ಗರ್ಭಿಣಿ ಪ್ರಾಣಿಯು ಈ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದರೆ, ಗರ್ಭಪಾತವಾಗಬಹುದು.

Published On: 30 September 2022, 01:38 PM English Summary: CM Announcement of compensation for cattle victims of lumpy disease

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.