1. ಸುದ್ದಿಗಳು

ರೈತರ “ಕಾಲುದಾರಿ” ಸಮಸ್ಯೆ ತಪ್ಪಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ!

Hitesh
Hitesh
An important decision by the government to avoid the problem of "footpath" of farmers!

ರೈತರು ವ್ಯವಸಾಯದ ಉದ್ದೇಶಗಳಿಗೆ ತಿರುಗಾಡಲು ಬಳಸುವ ಕಾಲುದಾರಿಯ ಬಗ್ಗೆ ರಾಜ್ಯ ಸರ್ಕಾರ ಈಚೆಗೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಹೌದು ರಾಜ್ಯ ಸರ್ಕಾರವು ರೈತರು ಹಳ್ಳಿಗಳಲ್ಲಿ ಅನುಭವಿಸುತ್ತಿರುವ ಸಮಸ್ಯೆಯನ್ನು ತಪ್ಪಿಸಲು ಮುಂದಾಗಿದೆ. 

ಮುಖ್ಯವಾಗಿ ಹಳ್ಳಿಗಳಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ

ಬಂಡಿದಾರಿ ಅಥವಾ ಸೌಲಭ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಸಾಮಾನ್ಯವಾಗಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ

ಜಮೀನುಗಳಲ್ಲಿ ತಿರುಗಾಡಲು ಅವರ ದಾರಿಯನ್ನು ಬಳಸುತ್ತಾರೆ. ಆದರೆ, ರೈತರಿಗೆ ದಾರಿ ಸಮಸ್ಯೆಯಿದ್ದು

ಬಳಕೆದಾರ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸರ್ಕಾರ ತಿಳಿಸಿದೆ.  

ಹಳ್ಳಿಗಳಲ್ಲಿ ಈ ದಾರಿ ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು

ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದ ನಷ್ಟ ಅನುಭವಿಸುತ್ತಿರುವುದು ವರದಿಯಾಗಿದೆ.

ಅಲ್ಲದೇ ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಕೇಳಿ ಬರುತ್ತಿವೆ.  

ಗ್ರಾಮ ನಕಾಶೆ ಕಂಡದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದಾಗೂ, ಕೆಲವು ಭೂಮಾಲೀಕರು ಬಳೆಕದಾರರು

ರೈತರಿಗೆ ತಿರುಗಾಡಲು ಅಡ್ಡಿ ಪಡಿಸುತ್ತಿರುವುದು ಅಥವಾ ಅಂತಹ ಮಾರ್ಗಗಳನ್ನು ಮುಚ್ಚಿರುವುದು ಹಾಗೂ ರೈತರು ಬಹುಕಾಲದಿಂದಲೂ

ಬಳಸುವ ದಾರಿಗಳಲ್ಲಿ ತಿರುಗಾಡಲು, ಕೆಲವು ರೈತರ ಮಧ್ಯದ ವ್ಯಯಕ್ತಿಕ ದ್ವೇಷ ಅಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆ

ಎದುರಾಗುತ್ತಿರುವುದು ಕಂಡುಬರುತ್ತಿದೆ.   

The indian Easement act 1882 ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು

ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (Easement)  ಹಕ್ಕುನ್ನು ಹೊಂದಿದ್ದು, ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ

ಅಥವಾ ಈ ಬಗ್ಗೆ ಹಕ್ಕನ್ನು ಕ್ಷೀಣಿಸುವುದಕ್ಕೆ ಅಂದರೆ ರೈತರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ ಕ್ರಮವಹಿಸಲು ಅವಕಾಶವಿದೆ ಎಂದು ಹೇಳಲಾಗಿದೆ.

ಇನ್ನು Code of Criminal Procedure, 1973ರ ಕಲಂ 147 ರನ್ವಯ ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗದ ಕುರಿತು ಸ್ಥಳೀಯ

ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ಮಾದರಿಯಲ್ಲಿ ತಹಶೀಲ್ದಾರ್ ಅವರು ತಾಲ್ಲೂಕು

ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮವಹಿಸುವ ಅಧಿಕಾರ ಹೊಂದಿದ್ದಾರೆ ಎಂದು ಸರ್ಕಾರ ಹೇಳಿದೆ.    

ಅಲ್ಲದೇ ತಾಲ್ಲೂಕಿನ ತಹಶೀಲ್ದಾರ್‌ಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು

ತಿರುಗಾಡಲು ಅವಕಾಶ ನೀಡದೆ ತೊಂದರೆ ನೀಡಿದರೆ ಇಲ್ಲವೇ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು

ತೆರವುಗೊಳಿಸಿ ಅಂತಹ ತಿರುಗಾಡಲು ದಾರಿಗಳನ್ನು ಸುಗಮಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಸರ್ಕಾರದ ಈ ಸುತ್ತೋಲೆಯಿಂದಾಗಿ ರೈತರ ಕಾಲು ದಾರಿ ರಹದಾರಿಯಂತೆ ಸೃಷ್ಟಿಯಾಗಿದ್ದು, ಸಮಸ್ಯೆಗಳು ತಪ್ಪಲಿವೆ.  

Published On: 26 October 2023, 05:07 PM English Summary: An important decision by the government to avoid the problem of "footpath" of farmers!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.