1. ಸುದ್ದಿಗಳು

ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಬೆಂಗಳೂರಿನ ಶರ್ಟಾನ್ ಹೋಟೇಲ್ ನಲ್ಲಿ ನಡಿಯಿತು.

ರವಿಚಂದ್ರನ್ ಅವರ ಕ್ರಿಯೇಟಿವ್ ಆಲೋಚನೆಗಳಿಗೆ ತಕ್ಕಂತೆ ಮಗಳ ನಿಶ್ಚಿತಾರ್ಥದ ವೇದಿಕೆ ನಿರ್ಮಿಸಲಾಗಿತ್ತು. ಏಳು ಬಿಳಿ ಅಶ್ವದ ಕಾಸ್ಸೆಫ್ಟ್ ನಲ್ಲಿ ವೇದಿಕೆಯನ್ನು ಅಲಂಕರಿಸಲಾಗಿತ್ತು. ತಿಳಿ ಹಸಿರು ಮಿಶ್ರಿತ ಬಣ್ಣದ ಸೀರೆಯಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ಮಿಂಚಿದ್ರೆ, ಕಡು ನೀಲಿ ಬಣ್ಣದ ಸೂಟ್ ನಲ್ಲಿ ರವಿ ಭಾವಿ ಅಳಿಯ, ಉದ್ಯಮಿ ಅಜಯ್ ಕಂಗೊಳಿಸುತ್ತಿದ್ದರು.

ಖ್ಯಾತ ನಟನ ಮಗಳ ನಿಶ್ಚಿತಾರ್ಥಕ್ಕೆ ನಟಿ ಖುಷ್ಬು, ಹಂಸಲೇಖ, ಪುನೀತ್ ರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ , ಶ್ರೀಮುರುಳಿ, ಅಕುಲ್ ಬಾಲಾಜಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.
Published On: 22 February 2019, 10:32 PM English Summary: ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.