1. ಸುದ್ದಿಗಳು

ಹವಾಮಾನ ವರದಿ: ನಾಳೆ ಈ ಪ್ರದೇಶಗಳಲ್ಲಿ ಮತ್ತೇ ಮಳೆ ಆರ್ಭಟ ಹೆಚ್ಚುವ ಸಾಧ್ಯತೆ

Maltesh
Maltesh
Weather Report Today Heavy Rainfall predicted by imd in karnataka

ಜುಲೈ ತಿಂಗಳು ಮುಗಿಯುತ್ತಾ ಬಂದರು ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆಯಾಘುತ್ತಿಲ್ಲ. ಹೌದು ಮತ್ತೇ ಜುಲೈ 26ರವರೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಲಿದೆ ಎನ್ನಲಾಗುತ್ತಿದೆ.

ಬೀದರ್, ಧಾರವಾಡ, ಬಾಗಲಕೋಟೆ, ಬೆಳಗಾವಿ,  ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಹಾಗೂ ಕರಾವಳಿ ಜಿಲ್ಲಾಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಇನ್ನು ರಾಜ್ಯದ ಇನ್ನುಳಿದ ಭಾಗದಲ್ಲಿ ಒಣ ಹವೆ ಸಹಿತ ಹವಾಮಾನ ಇರಲಿದ್ದು ಅಲ್ಪ ಪ್ರಮಾಣದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಇದನ್ನೂ ಮಿಸ್‌ ಮಾಡ್ದೇ ಓದಿಗ್ರಾಹಕರಿಗೆ ಸಂತಸದ ಸುದ್ದಿ: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಮುಂದಿನ 48 ಗಂಟೆಗಳು ಹವಾಮಾನದಲ್ಲಿ ಅಲ್ಲಲ್ಲಿ ಗಮನಾರ್ಹವಾದ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಆದ್ದರಿಂದ ಯಾವುದೇ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಅಲರ್ಟ್ ಘೋಷಿಸಿಲ್ಲ.

ಇನ್ನು ದೇಶದಲ್ಲಿನ ಮಳೆಯ ಪರಿಸ್ಥಿತಿಯನ್ನು ಗಮನಿಸುವುದಾದದರೆ ಮಧ್ಯಪ್ರದೇಶ , ವಿದರ್ಭ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಗಂಗಾನದಿ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡಿನಾದ್ಯಂತ ಗುಡುಗು ಮತ್ತು ಮಿಂಚು ಸಹ ಮಳೆಯಾಘುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾಣ ಇಲಾಖೆ ತಿಳಿಸಿದೆ.

50-60 kmph ನಿಂದ 70 kmph ವೇಗದಲ್ಲಿ ಬಲವಾದ ಗಾಳಿಯು ಪಶ್ಚಿಮ ಮಧ್ಯ ಮತ್ತುಕರಾವಳಿಯ ನೈಋತ್ಯ ಅರೇಬಿಯನ್ ಸಮುದ್ರದ ಮೇಲೆ ಮತ್ತು ಪಶ್ಚಿಮ ಮಧ್ಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ 40-50 kmph ನಿಂದ 60 kmph ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

ಇದನ್ನೂ ಮಿಸ್‌ ಮಾಡ್ದೆ ಓದಿ: 7 ನೇ ವೇತನ ಆಯೋಗ: ತುಟ್ಟಿಭತ್ಯೆ 4% ರಷ್ಟು ಹೆಚ್ಚಳ ಸಾಧ್ಯತೆ..ಸಂಬಳ ಎಷ್ಟಾಗಲಿದೆ..?

ದಕ್ಷಿಣ ಬಂಗಾಳ ಕೊಲ್ಲಿ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮಧ್ಯ ಭಾಗಗಳಲ್ಲಿ 40-50 ಕಿಮೀ / ಗಂ ವೇಗದಲ್ಲಿ 60 ಕಿಮೀ / ಗಂ ವರೆಗೆ ಗಾಳಿಯ ವೇಗವನ್ನು ಸಹ ನಿರೀಕ್ಷಿಸಲಾಗಿದೆ . ಹೀಗಾಗಿ ಮೀನುಗಾರರು ಈ ಪ್ರದೇಶಗಳಿಗೆ ಹೆಚ್ಚು ದೂರದವರಗರ ಸಾಗಿ ಮೀನುಗಾರಿಗೆ ಮಾಡದಂತೆ ಸೂಚಿಸಲಾಗಿದೆ.

ನೈಋತ್ಯ ಮಾನ್ಸೂನ್ ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳಿಂದ ಹಿಮ್ಮೆಟ್ಟಿದೆ, ಇದು ಅವನ ಸಾಮಾನ್ಯ ನಂತರ ಸರಿಸುಮಾರು 11 ದಿನಗಳ ನಂತರ

ಪಂಜಾಬ್ ಮತ್ತು ಹರಿಯಾಣದಲ್ಲಿ ಜುಲೈ 27 ರಿಂದ 29 ರವರೆಗೆ ಮತ್ತು ಉತ್ತರ ಪ್ರದೇಶದ ಮೇಲೆ ಜುಲೈ 28 ಮತ್ತು 29 ರಂದು ಪ್ರತ್ಯೇಕವಾದ ಭಾರೀ ಮಳೆ ಮತ್ತು ಗುಡುಗು/ಮಿಂಚು ಸಹಿತ ಸಾಕಷ್ಟು ವ್ಯಾಪಕವಾದ ಮಳೆಯಾಗುವ ನಿರೀಕ್ಷೆಯಿದೆ.

ಜುಲೈ 26 ರಿಂದ 28 ರವರೆಗೆ ಗುಜರಾತ್, ಕೊಂಕಣ, ವಿದರ್ಭ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ಕರಾವಳಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಗುಡುಗು ಮತ್ತು ಮಿಂಚುಗಳೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

Published On: 26 July 2022, 10:47 AM English Summary: Weather Report Today Heavy Rainfall predicted by imd in karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.