1. ಸುದ್ದಿಗಳು

ರಾಜ್ಯದಲ್ಲಿ ಮಳೆಯ ಮುನ್ಸೂಚನೆ

ಭರ್ಜರಿ ಸುಗ್ಗಿ ನಡೆಯುತ್ತಿರುವ ಸಮಯದಲ್ಲಿ ಮಳೆ ಬಂದು ಕಾಡುವುದು ಸರ್ವೇಸಾಮಾನ್ಯ, ಆದ್ದರಿಂದ ರೈತರು ಹವಮಾನ ವರದಿಯನ್ನು ಗಮನಿಸಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸುವುದು ಅತ್ಯುತ್ತಮ.

 ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂತಹ ಸುಳಿಗಾಳಿಯಿಂದ ಫೆಬ್ರುವರಿ 18 ರಿಂದ ಮೂರು ದಿನಗಳ ಕಾಲ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಮುಖ್ಯವಾಗಿ ಉತ್ತರ ಕರ್ನಾಟಕದ ರೈತರು ಗಮನಿಸಬೇಕಾದ ಮಳೆಯ ಮುನ್ಸೂಚನೆ.

 ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಬೆಳಗಾವಿ, ಧಾರವಾಡ, ಹಾವೇರಿ,ಕಲಬುರ್ಗಿ, ಕೊಪ್ಪಳ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಹಾಸನ,ಕೊಡಗು, ಚಿಕ್ಕಮಗಳೂರು, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಕೃಷಿ ಇಲಾಖೆ ಮುನ್ಸೂಚನೆ ನೀಡಿದೆ.

 

 ಕೃಷಿ ಇಲಾಖೆಯ ಸಲಹೆಗಳು:

- ಕೊಯ್ಲು ಮಾಡಿದಂತಹ ಬೆಳೆಗಳನ್ನು ನೀರು ತಾಗದಂತೆ ಸುರಕ್ಷಿತವಾಗಿ ಇಡಬೇಕು.

-ನೀರಾವರಿ ಪ್ರದೇಶಗಳಲ್ಲಿ ಬೆಳೆಗಳಿಗೆ ನೀರು ಕೊಡುವುದನ್ನು ಮುಂದೂಡಬಹುದು.

-ಸಾಕುಪ್ರಾಣಿಗಳನ್ನು ಗುಡುಗು ಸಹಿತ ಮಳೆಯಾಗಲಿ ಇರುವ ಕಾರಣ ಸುರಕ್ಷಿತವಾಗಿರುವಂತಹ ಜಾಗಗಳಿಗೆ ಸಾಗಿಸಬೇಕು.

Published On: 17 February 2021, 08:53 AM English Summary: three days rain alert in karnataka from feb 18th

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.