1. ಸುದ್ದಿಗಳು

ರೈತರು ತಮ್ಮ ಹೊಲದಲ್ಲಿ ನೀರು ನಿಂತಲ್ಲಿ ಸಣ್ಣ ಕಾಲುವೆ ಮಾಡಿ ನೀರನ್ನು ಹೊರಹಾಕಬೇಕು

ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಬೆಳೆ ಕ್ಷೇತ್ರಗಳಲ್ಲಿ ನೀರು ನಿಂತು, ಬೆಳೆಗಳು ಹಳದಿ ವರ್ಣಕ್ಕೆ ತಿರುಗಿ, ಹಾಳಾಗುತ್ತಿರುವುದು ಕಂಡು ಬರುತ್ತಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಎಲ್ಲಾ ರೈತರು ಕೂಡಲೇ ತಮ್ಮ ತಮ್ಮ ಮುಂಗಾರು ಬೆಳೆಕ್ಷೇತ್ರದ ಹೊಲಗಳಲ್ಲಿ ನಿಂತ ನೀರನ್ನು ಸಣ್ಣಪುಟ್ಟ ಕಾಲುವೆಗಳನ್ನು ಮಾಡಿ ಬೆಳೆಕ್ಷೇತ್ರದಿಂದ ನೀರನ್ನು ಹೊರಹಾಕಬೇಕು. ಬೆಳೆಕ್ಷೇತ್ರದ ಮಣ್ಣಲ್ಲಿ ಗಾಳಿಯಾಡುವಂತೆ ಮಾಡಿ ತಮ್ಮ ಬೆಳೆಯನ್ನು ರಕ್ಷಿಸಬೇಕು. ಜೊತೆಗೆ ಶೇ.2ರ ಯೂರಿಯಾ ಮಿಶ್ರಣವನ್ನು ಸಿಂಪರಣೆ (ಅಂದರೆ 2 ಗ್ರಾಂ. ಯುರಿಯಾ  100 ಮಿ.ಲಿ. ನೀರಿನಲ್ಲಿ ಕರಗಿಸುವುದು) ಮಾಡಬೇಕು.

ಇದಲ್ಲದೇ ಈಗಾಗಲೇ ರೈತರು ತಮ್ಮ ಮುಂಗಾರು ಬೆಳೆಯನ್ನು ಕೃಷಿ ವಿಮೆ ಕಂತು ಪಾವತಿಸಿ ಯೋಜನೆಯಡಿ ನೊಂದಾಯಿಸಿಕೊಂಡಿದ್ದಲ್ಲಿ ಕೂಡಲೇ ತಮ್ಮ ಜಮೀನಿನ ಬೆಳೆಯಲ್ಲಿ ನೀರು ನಿಂತು ಬೆಳೆ ಹಾಳಾದ ವಿಷಯವನ್ನು ವಿಮಾ ಕಂಪನಿಯ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು ಅಥವಾ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ. 

ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ: ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ದಿಂದ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿವುಳ್ಳ ಕಲಬುರಗಿ ಜಿಲ್ಲೆಯ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಅಗಸ್ಟ್ ಮಾಹೆಯ ಎರಡನೇ ವಾರದಲ್ಲಿ 10 ದಿನಗಳ ಕಾಲ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

  ಅಭ್ಯರ್ಥಿಗಳು ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು. ಕನಿಷ್ಠ 10ನೇ ತರಗತಿ ಪಾಸಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಹಾಗೂ ಬಿಳಿ ಹಾಳೆಯಲ್ಲಿ ಸ್ವ ವಿವರದೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ವಿದ್ಯಾಭ್ಯಾಸದ ಅಂಕಪಟ್ಟಿ ಪ್ರತಿ ಹಾಗೂ ಇತರೆ ಸಂಬಂಧಪಟ್ಟ ದಾಖಲಾತಿಗಳನ್ನು ಲಗತ್ತಿಸಿ ಜಂಟಿ ನಿರ್ದೇಶಕರು, ಸಿಡಾಕ್. ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸರ್ಕಾರಿ ಬಾಲಕರ ಐಟಿಐ ಆವರಣ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ-585102  ವಿಳಾಸಕ್ಕೆ 2021ರ ಜುಲೈ 31 ರೊಳಗಾಗಿ ಸಲ್ಲಿಸಬೇಕು ಅಥವಾ ಮೊಬೈಲ್ ಸಂಖ್ಯೆ 9916006910, 8618797704 ಗಳಿಗೆ ಕರೆ ಮಾಡಿ ತಮ್ಮ ಹೆಸರುವನ್ನು ನೊಂದಾಯಿಸಿಕೊAಡು ಕಾರ್ಯಕ್ರಮಕ್ಕೆ ಹಾಜರಾಗಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ 9916006910, 8618797704 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಡೇ-ನಲ್ಮ್ ಯೋಜನೆಯಡಿ ಅರ್ಜಿ ಆಹ್ವಾನ

ಅಫಜಲಪುರ  ಪುರಸಭೆಯಿಂದ  2021-22ನೇ ಸಾಲಿನಲ್ಲಿ ಡೇ-ನೆಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ಹಾಗೂ ವಿವಿಧ ತರಬೇತಿ ಪಡೆಯಲು ಅಫಜಲಪುರ ಪುರಸಭೆ ವ್ಯಾಪ್ತಿಯ ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು  ಅಫಜಲಪುರ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಸ್ವಯಂ ಉದ್ಯೋಗ-ವೈಯಕ್ತಿಕ, ಸ್ವಯಂ ಉದ್ಯೋಗ-ಗುಂಪು, ಬೀದಿ ವ್ಯಾಪಾರಸ್ಥರು ಹಾಗೂ ಎಸ್.ಎಚ್.ಜಿ. ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವೋಟರ ಐ.ಡಿ., ಬ್ಯಾಂಕ್ ಪಾಸ್‌ಬುಕ್, ರೇಷನ್ ಕಾರ್ಡ್ ಹಾಗೂ ಎರಡು ಭಾವಚಿತ್ರಗಳೊಂದಿಗೆ 2021ರ ಆಗಸ್ಟ್ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Published On: 27 July 2021, 02:47 PM English Summary: Collected rain water in the fields, make a small canal

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.