News

ಮಾರ್ಚ್ ೨೧ರಿಂದ ಮತ್ತೆ ಶುರುವಾಗಲಿದೆ ರೈತರ ಪ್ರತಿಭಟನೆ.. ಕಾರಣವೇನು ..?

15 March, 2022 4:37 PM IST By: KJ Staff
Nationwide farmers’ protest on March 21

ಕೇಂದ್ರ ಸರ್ಕಾರದ ೩ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಮಾ.21ರಿಂದ ಮತ್ತೆ ಸರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಇದನ್ನು ಓದಿರಿ:

Gold Price BIG UPDATE! ಚಿನ್ನದ ಬೆಲೆ 2786 ರೂ. ಕಡಿಮೆಯಾಗಿದೆ! ಈಗಲೇ ಹೋಗಿ ಖರೀದಿ ಮಾಡಿ!

ಇದನ್ನು ಓದಿರಿ:

Agriculture loan: ಯಾವುದೇ ಭದ್ರತೆ ಇಲ್ಲದೆ ಲಕ್ಷ ಲಕ್ಷ ಕೃಷಿ ಸಾಲ..! ಇದು ಇವರಿಗೆ ಮಾತ್ರ ಅನ್ವಯ..

ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಕೈ ಬಿಟ್ಟಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದುರೈತ ನಾಯಕ ರಾಕೇಶ್‌ ಟಿಕಾಯತ್‌ ತಿಳಿಸಿದ್ದಾರೆ. ಈ ಸಲ ನಿರಂತರ ಮುತ್ತಿಗೆ ಹಾಕುವ ಬದಲಾಗಿ ಈ ಬಾರಿ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ರೈತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿಲ್ಲ. ಲಖಿಮ್‌ಪುರ ಖೇರಿಯಲ್ಲಿ ನಡೆದ ಕೊಲೆ ಅಪರಾಧಕ್ಕೆ ಸಂಬಂಧಿಸಿದಂತೆ ರೈತರಿಗೆ ನಿಜವಾದ ನ್ಯಾಯ ಸಿಕ್ಕಿಲ್ಲ ಎಂದು ಕೃಷಿ ಮುಖಂಡ ಯೋಗೇಂದ್ರ ಯಾದವ್‌ ಹೇಳಿದ್ದಾರೆ.ಮಾರ್ಚ್‌ 21ರಂದು ಒಂದು ದಿನದ ಬೃಹತ್‌ ಪ್ರತಿಭಟನೆ . ಕೃಷಿ ಉತ್ಪನ್ನಗಳಿಗೆ ಕನಿಷ್ಠ ಮಾನದಂಡದ ಬೆಲೆ ನೀಡುವಂತೆ ಒತ್ತಾಯಿಸಿ ಮುಂದಿನ ಹಂತದಲ್ಲಿ ಏಪ್ರಿಲ್‌ 9ರಿಂದ 17ರವರೆಗೆ ದೇಶಾದ್ಯಂತ ಮುಷ್ಕರ ಹೂಡಲಾಗುವುದು ಎಂದು ಹೇಳಿದೆ..

ಇದನ್ನು ಓದಿರಿ:

SBI Annuity deposit scheme! ನೀವು Deposit ಮಾಡಿದಂತ ಹಣಕ್ಕೆ ದೊಡ್ಡ ಲಾಭ ಸಿಗಲಿದೆ! ಅದು ಕೂಡ ಪ್ರತಿ ತಿಂಗಳು!

ಇನ್ನಷ್ಟು ಓದಿರಿ:

Ukraine-russia war effect: ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?

ಭೂ ಒತ್ತುವರಿ..ಭೂ ಕಬಳಿಕೆ; ಗೊಂದಲ ಬೇಡ..ಯಾಮಾರಿದ್ರೆ ಬೀಳುತ್ತೆ ದಂಡ..!


ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇನ್ನೂ ಸಮಿತಿಯನ್ನು ರಚಿಸಿಲ್ಲ.ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್‌ ಅಗರ್ವಾಲ್‌ ಅವರು ಬರೆದ ಪತ್ರದಲ್ಲಿ ಕೇಂದ್ರದ ಪ್ರಸ್ತಾವನೆಗಳನ್ನು ಎಸ್‌ಕೆಎಂ ಅಂಗೀಕರಿಸಿದ ನಂತರ ರೈತರು 2021ರ ಡಿಸೆಂಬರ್‌ 19 ರಂದು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು.