News

ಪಡಿತರದಾರರಿಗೆ ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್‌! ಏನದು ಗೊತ್ತೆ?

02 February, 2023 11:20 AM IST By: Kalmesh T
Minister Nirmala Sitharaman gave good news to the ration holders in the budget

ಕೇಂದ್ರ ಬಜೆಟ್‌ ಮಂಡನೆಯಲ್ಲಿ ಸಾಕಷ್ಟು ಯೋಜನೆ ಭರವಸೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಇದರೊಟ್ಟಿಗೆ ಪಡಿತರದಾರರಿಗೂ ಸಿಹಿ ಸುದ್ದಿಯೊಂದು ಇದೆ.

14 ಲಕ್ಷ ರೈತರಿಗೆ 1900 ಕೋಟಿ ಬೆಳೆಹಾನಿ ಪರಿಹಾರ: ಸಿಎಂ ಬೊಮ್ಮಾಯಿ

Union budget 2023-24: ದೇಶದ ಜನರಿಗೆ 2024 ರ ವರೆಗೆ ಉಚಿತ ಪಡಿತರ ಸಿಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ದೇಶದ ಬಡವರು ಮತ್ತು ಸಾರ್ವಜನಿಕರಿಗಾಗಿ 2023-2024ರ ಸಾಲಿನ ಬಜೆಟ್‌ನಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇದರಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಈಗ ಸರ್ಕಾರದ “ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ”ಯಲ್ಲಿ (PMGKAY) ಉಚಿತ ಪಡಿತರ ಸೌಲಭ್ಯವನ್ನು ತಿಳಿಸಿದ್ದಾರೆ.

ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ಕೃಷಿ ಸಾಲವನ್ನು ₹ 20 ಲಕ್ಷ ಕೋಟಿ ಹೆಚ್ಚಿಸುವ ಗುರಿ

PRADHAN MANTRI GARIB KALYAN ANNA YOJANA : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2023-24 ರ ಬಜೆಟ್ ಅನ್ನು ಮಂಡಿಸಿದ್ದಾರೆ.

ಇದರಲ್ಲಿ ರೈತರಿಗಾಗಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ದೇಶದ ಜನಸಾಮಾನ್ಯರಿಗೆ ದೊಡ್ಡ ಸಮಾಧಾನದ ಸುದ್ದಿ ನೀಡಿದ್ದಾರೆ.

ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಲಭ್ಯವಿರುವ ಸೌಲಭ್ಯವನ್ನು ಮುಂದಿನ ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆ.

ಸಿಹಿ ಸುದಿ: ಪಿಎಂ ಆವಾಸ್ ಯೋಜನೆ ವೆಚ್ಚ 79,000 ಕೋಟಿಗೆ ಹೆಚ್ಚಳ

ಪಿಎಂ ಗರೀಬ್ ಕಲ್ಯಾಣ್ ಯೋಜನೆ ಎಂದರೇನು? 

ಕರೋನಾ ಅವಧಿಯಲ್ಲಿ ಭಾರತ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ದೇಶದ ಜನರೆಲ್ಲ ತಮ್ಮ ಮನೆಯಲ್ಲಿ ಕುಳಿತು ಏನನ್ನೂ ಸಂಪಾದಿಸದೇ ಇದ್ದಾಗ. ಈ ಅನುಕ್ರಮದಲ್ಲಿ, ಬಿಪಿಎಲ್ ವರ್ಗದ ಅಡಿಯಲ್ಲಿ ಬರುವ ಕುಟುಂಬಗಳಿಗೆ ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಒದಗಿಸಿತು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ (PMGKAY) ಪಡಿತರ ಚೀಟಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಮತ್ತು 1 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಸರ್ಕಾರದ ಈ ಯೋಜನೆಯಡಿಯಲ್ಲಿ ಸುಮಾರು 80 ಕೋಟಿ ಬಡವರಿಗೆ ಉಚಿತ ಪಡಿತರ ಸೌಲಭ್ಯವನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ಮಧ್ಯದಲ್ಲಿ ನಿಲ್ಲಿಸಲು ಹಲವು ಬಾರಿ ಯೋಚಿಸಿಯೂ ಆಗಿತ್ತು.

ಆದರೆ ಜನರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಇದನ್ನು ತಡೆಯದೆ ಕಾಲಕಾಲಕ್ಕೆ ಬದಲಾಯಿಸಿ ಮುಂದಕ್ಕೆ ಕೊಂಡೊಯ್ದು ಮತ್ತೊಮ್ಮೆ ಒಂದು ವರ್ಷ ವಿಸ್ತರಿಸಿದೆ.