News

KCC: ಕಷ್ಟಪಟ್ಟು ದುಡಿಯುವ ರೈತರಿಗೆ ವರದಾನ ಕಿಸಾನ್ ಕ್ರೆಡಿಟ್ ಕಾರ್ಡ್: ಪ್ರಧಾನಿ ಮೋದಿ

06 April, 2023 1:27 PM IST By: Kalmesh T
Kisan Credit Card is making life easier for farmers: PM

ಕಿಸಾನ್ ಕ್ರೆಡಿಟ್ ಕಾರ್ಡ್ ನಮ್ಮ ಕಷ್ಟಪಟ್ಟು ದುಡಿಯುವ ರೈತರಿಗೆ ಜೀವನವನ್ನು ಸುಲಭಗೊಳಿಸುತ್ತಿದೆ ಮತ್ತು ಅದರ ಮುಖ್ಯ ಉದ್ದೇಶವೇ ಇವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

National Dairy Mela: ಏಪ್ರಿಲ್ 8 ರಂದು ರಾಷ್ಟ್ರೀಯ ಡೈರಿ ಮೇಳ ಆಯೋಜನೆ

ಅವರು ಟ್ವೀಟರ್‌ನಲ್ಲಿ ಹತ್ರಾಸ್‌ನ ಸಂಸದ ರಾಜ್‌ವೀರ್ ದಿಲರ್ ಟ್ವೀಟ್ ಥ್ರೆಡ್‌ನಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಒದಗಿಸಲಾದ ಸೌಲಭ್ಯಗಳ ಕುರಿತು ಮಾತನಾಡಿದ್ದಾರೆ.

ಹತ್ರಾಸ್ ಸಂಸದರ ಟ್ವೀಟ್ ಥ್ರೆಡ್‌ಗೆ ಉತ್ತರಿಸಿದ ಪ್ರಧಾನಿ ಟ್ವೀಟ್ :

ಹತ್ರಾಸ್ ಸಂಸದರ ಟ್ವೀಟ್ ಥ್ರೆಡ್‌ಗೆ ಉತ್ತರಿಸಿದ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ, “ಕಿಸಾನ್ ಕ್ರೆಡಿಟ್ ಕಾರ್ಡ್ ನಮ್ಮ ಕಷ್ಟಪಟ್ಟು ದುಡಿಯುವ ಆಹಾರ ಪೂರೈಕೆದಾರರಾದ ರೈತರಿಗೆ ಜೀವನವನ್ನು ಸುಲಭಗೊಳಿಸಿದೆ.

ಏಪ್ರಿಲ್ 8 ಮತ್ತು 9 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಪಿಎಂ ಮೋದಿ

ಇದನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಕಿಸಾನ್‌ ಕ್ರೆಡಿಟ್‌ ಕಾರ್ಡಿನ ಮುಖ್ಯ ಉದ್ದೇಶವೇ ರೈತರ ಮುಖದಲ್ಲಿ ಮಂದಹಾಸ ನೋಡುವುದಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

(यह देखकर बहुत खुशी हो रही है कि किसान क्रेडिट कार्ड ने हमारे परिश्रमी अन्नदाताओं का जीवन आसान बनाया है। यही इसका मूल उद्देश्य भी तो है!) 

ಹತ್ರಾಸ್ ಸಂಸದರ ಟ್ವೀಟ್

“ಈ ದೃಶ್ಯ ಹಿಂದಿನ ಚಿತ್ರಗಳಲ್ಲಿ ಪ್ರಚಲಿತದಲ್ಲಿರುವಂತದ್ದು. ಬಡತನದಿಂದ ಬಳಲುತ್ತಿರುವ ರೈತ, ತನ್ನ ಕುಟುಂಬವನ್ನು ನಿರ್ವಹಿಸುವಾಗ ದೊಡ್ಡ ಜಾಗೀರದಾರನ ಸಾಲದ ಬಲೆಗೆ ಬೀಳುತ್ತಾನೆ. ಆಲಿಕಲ್ಲು ಮಳೆ, ಪ್ರಕೃತಿ ವಿಕೋಪದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ”

ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ವಿಮೆ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

(पहले की फिल्मों में यह दृश्य प्रचलित हुआ करता था जहां एक गरीबी से पीड़ित किसान, कई मुश्किलों का सामना करते हुए, अपने परिवार का पालन पोषण करते हुए, कैसे बड़े जागीरदार के कर्ज़ जाल में फसते जाता है। ओले गिरने, प्राकृतिक आपदा, आदि की वजह से किसानों का भारी नुकसान होता है।)

ಹತ್ರಾಸ್‌ನ ಸಂಸದ ರಾಜ್‌ವೀರ್ ದಿಲ ಅವರು ಟ್ವೀಟ್ನಲ್ಲಿ ರೈತರು ಮೊದಲು ಯಾವ ರೀತಿ ಜಮೀನುದಾರಿ ಪದ್ದತಿ ಸಮಯದಲ್ಲಿ ಕಷ್ಟಪಡುತ್ತಿದ್ದರು ಎನ್ನುವುದನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.