News

MGNAREGA ನರೇಗಾ ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್: ಕೆಲಸದ ಜಾಗದಲ್ಲಿ ಮೃತಪಟ್ಟರೆ ರೂ 2 ಲಕ್ಷ ಪರಿಹಾರ!

13 May, 2022 2:39 PM IST By: Kalmesh T
Good news for Mgnrega Narega mercenary workers

ನರೇಗಾ ಕೂಲಿ  (MGNAREGA) ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಸರ್ಕಾರದಿಂದ 2 ಲಕ್ಷ ಪರಿಹಾರ ನೀಡುವುದಾಗಿ ಆದೇಶ. 

ಈ ಹಿಂದೆ ನರೇಗಾ ಕೂಲಿ ಕಾರ್ಮಿಕ ಕೆಲಸದ ಸಮಯದಲ್ಲಿ ಮೃತಪಟ್ಟರೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೀಡಿದ್ದ ಆದೇಶದಲ್ಲಿ ಅನೇಕ ಗೊಂದಲಗಳಿದ್ದವು. ಈಗ ಎಲ್ಲವೂ ಬಗೆಹರಿದಿವೆ.

ಇದನ್ನೂ ಓದಿರಿ:  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ “ಅರಣ್ಯ ಬೆಂಕಿ ನಿರ್ವಹಣೆಯ ಕುರಿತು ಸಲಹಾ ಕಾರ್ಯಾಗಾರ”

ಶಿವಭಕ್ತರಿಗೆ ಶುಭ ಸುದ್ದಿ: ಜೂನ್ 30ರಿಂದ ಶುರುವಾಗಲಿದೆ ಅಮರನಾಥ ದರ್ಶನ! ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ ಗೊತ್ತೆ?

ನರೇಗಾ (MGNAREGA) ಯೋಜನೆಯಡಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವೈಕಲ್ಯತೆಗೆ ಒಳಗಾದರೆ 2 ಲಕ್ಷ ರೂಪಾಯಿ ಪರಿಹಾರ ಒದಗಿಸುವ ಪೂರ್ಣ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಆಧಿಕಾರಿಗಳಿಗೆ ( Zilla Panchayat CEO) ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮೇ 10ರಂದು ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿರುವ ಸರ್ಕಾರ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತಾಲಯದ ಅಥವಾ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಇದರ ಹೊಣೆಯನ್ನು ಒಪ್ಪಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಒಂದು ವಾರದೊಳಗೆ ಪರಿಹಾರ ಸಿಗಲಿದೆ.

ರೈತರಿಗೆ ಗುಡ್ನ್ಯೂಸ್: 20ನೇ ಜಾನುವಾರ ಗಣತಿ: ಟ್ಯಾಬ್ಲಾಯಡ್‌ನಲ್ಲಿ ನಿಮ್ಮ ಜಾನುವಾರುಗಳ ಗಣತಿ ಆಗಿದೆಯೇ? ಇದರ ಲಾಭಗಳೇನು ಗೊತ್ತೆ?

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ಗಾಯಗೊಂಡರೆ ಚಿಕಿತ್ಸೆ

ಕೆಲಸದ ವೇಳೆಯಲ್ಲಿ ಕೂಲಿ ಕಾರ್ಮಿಕರು ಗಾಯಗೊಂಡರೆ ಅದಕ್ಕೂ ಮಾರ್ಗಸೂಚಿ ಹೊರಡಿಸಲಾಗಿದೆ. ಕೆಲಸದ ಸಮಯದಲ್ಲಿ ಗಾಯಗೊಂಡ ಕೂಲಿಕಾರರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ, ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅದರ ವೆಚ್ಚವನ್ನು ಯೋಜನೆಯ ಆಡಳಿತಾತ್ಮಕ  ಖರ್ಚಿನಲ್ಲಿ ಪಾವತಿಸಬೇಕು.

ಒಂದು ವೇಳೆ ಕೂಲಿ ಕಾರ್ಮಿಕರು ಆಸ್ಪತ್ರೆಯಲ್ಲಿ ದಾಖಲಾದರೆ, ಆ ಅವಧಿಗೂ ಕೂಲಿ ನೀಡಬೇಕು. ನಿಗದಿಪಡಿಸಿದ ಕೂಲಿ ದರದ ಅರ್ಧದಷ್ಟನ್ನು ಆಸ್ಪತ್ರೆಯಲ್ಲಿರುವ ಕೂಲಿ ಕಾರ್ಮಿಕರಿಗೆ ಪಾವತಿಸಬೇಕು. ಕೂಲಿಕಾರ ಮೃತಪಟ್ಟರೆ, ಭಾಗಶಃ ಅಥವ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾದರೆ 2 ಲಕ್ಷ ಪರಿಹಾರ ಪಾವತಿಸಲು ಅವಕಾಶವಿದೆ.

ಸಾಧನೆ: 2022 ರಲ್ಲಿ 661.54 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ! 

ರೈತರಿಗೆ ಗುಡ್ನ್ಯೂಸ್: 20ನೇ ಜಾನುವಾರ ಗಣತಿ: ಟ್ಯಾಬ್ಲಾಯಡ್‌ನಲ್ಲಿ ನಿಮ್ಮ ಜಾನುವಾರುಗಳ ಗಣತಿ ಆಗಿದೆಯೇ? ಇದರ ಲಾಭಗಳೇನು ಗೊತ್ತೆ?

ನರೇಗಾ ಕೂಲಿ ಕಾರ್ಮಿಕರು ಆಕಸ್ಮಿಕವಾಗಿ ಮರಣ ಹೊಂದಿದಾಗ, ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಆಧಿಕಾರಿಯು ಸ್ಥಳ ಮಹಜರ್‌ ನಡೆಸಬೇಕು.

ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಪ್ರಯಾಣಿಸುವಾಗ ಅಥವ ಕಾಮಗಾರಿ ಸ್ಥಳದಿಂದ ಮನೆಗೆ ವಾಪಸ್ಸಾಗುವ ಸಂದರ್ಭದಲ್ಲಿ ಅಪಘಾತದಿಂದಾಗಿ ಸಾವು ಸಂಭವಿಸಿದರೆ 24 ಗಂಟೆಯೊಳಗೆ ಕೂಲಿಕಾರನೊಂದಿಗೆ ಇದ್ದ ಇತರ ಜನರ ಹೇಳಿಕೆ ದಾಖಲಿಸಿಕೊಳ್ಳಬೇಕು. ಪೊಲೀಸ್‌ ವರದಿ ಮತ್ತು ವೈದ್ಯಕೀಯ ವರದಿ ಸಂಗ್ರಹಿಸಬೇಕು ಎಂಬ ಹಲವು ನಿಯಮಗಳನ್ನು ವಿಧಿಸಲಾಗಿದೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?