News

Breaking: ಕೇಂದ್ರ ಸರ್ಕಾರದಿಂದ LPG ಗೆ ನೀಡುತ್ತಿದ್ದ ಸಬ್ಸಿಡಿ ರದ್ದು! ಇನ್ಮುಂದೆ ನಿಮ್ಮ ಖಾತೆಗೆ ಬರಲ್ಲ ಹಣ!

03 June, 2022 12:32 PM IST By: Kalmesh T
Cancel the subsidy paid to the LPG by the central government

ಗ್ರಾಹಕರಿಗೆ ಶಾಕಿಂಗ್ ಸುದ್ದಿ ಇನ್ಮುಂದೆ ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಸಿಲಿಂಡರ್ಗಳಿಗೆ (LPG) ನೀಡುತ್ತಿದ್ದ ಸಹಾಯಧನವನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿರಿ: ರೈತರಿಗೆ ಸಿಹಿಸುದ್ದಿ: ಮಾಸಾಂತ್ಯದೊಳಗೆ “ರೈತ ಶಕ್ತಿ ಯೋಜನೆ”ಗೆ ಚಾಲನೆ! ಏನಿದರ ಲಾಭ ಗೊತ್ತೆ?

ರಾಜ್ಯದ 47.86 ಲಕ್ಷ ರೈತರಿಗೆ ಒಟ್ಟು ₹956.71 ಕೋಟಿ ಜಮಾ! ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ?

ಆರ್ಥಿಕವಾಗಿ ಹಿಂದುಳಿದವರಿಗೆ, ಕಡುಬಡವರಿಗೆಂದು ಕೇಂದ್ರ ಸರ್ಕಾರವು ರೂಪಿಸಿದ್ದ “ಉಜ್ವಲಾ” (ULWALA) ಯೋಜನೆಯ ಫಲಾನುಭವಿಗಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಸರ್ಕಾರದ ಸಹಾಯಧನ ಲಭ್ಯವಾಗಲಿದೆ.

ಮುಂದಿನ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ, ಎಲ್ಪಿಜಿ ಬೆಲೆ ಏರಿಕೆ ಮತ್ತೆ ಸಮಸ್ಯೆಗಳನ್ನು ತಂದೊಡ್ಡಲಿದೆ.

ಬಹುದೀರ್ಘ ಅವಧಿಗೆ ಸಬ್ಸಿಡಿಗಳನ್ನು ಮುಂದುವರಿಸಲು ಆಗುವುದಿಲ್ಲ. ಶಾಶ್ವತವಾಗಿ ಅವುಗಳನ್ನು ಉಳಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ಪುರಿ ಹೇಳಿದ್ದಾರೆ.

PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್‌ ಮಾಡಿ...

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ಜೂನ್ 2020ರಿಂದಲೂ ಅಡುಗೆ ಅನಿಲಕ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ 21ರಂದು ಘೋಷಿಸಿದ ವಿಶೇಷ ರಿಯಾಯ್ತಿಗಳು ಮಾತ್ರ ಅನ್ವಯವಾಗುತ್ತಿವೆ ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಪಂಕಜ್ ಜೈನ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೂ.200ರ ತೆರಿಗೆ ಕಡಿತ ಘೋಷಿಸಿದರು. ಸಾಮಾನ್ಯ ವರ್ಗದ ಎಲ್ಪಿಜಿ ಬಳಕದಾರರಿಗೂ ರಿಯಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳನ್ನು ಇದು ಹುಟ್ಟುಹಾಕಿತ್ತು.

215 ಕೋಟಿ ಸಾಮಾನ್ಯ ವರ್ಗದ ಗ್ರಾಹಕರು ಸಿಲಿಂಡರ್ ಖರೀದಿಸಲು ತಿಂಗಳಿಗೆ 1,000ಕ್ಕೂ ಹೆಚ್ಚು ಹಣ ತೆರಬೇಕಾಗಿದೆ. ಉಜ್ವಲಾ ಯೋಜನೆಯಡಿ ದೇಶದ ಸುಮಾರು 9 ಕೋಟಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಈ ಯೋಜನೆಯಡಿ ಸಿಗುವ ಸಬ್ಸಿಡಿಯನ್ನು ಗ್ಯಾಸ್ ಬುಕ್ ಮಾಡಿದಾಗ ಫಲಾನುಭವಿಯ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು. ಆದರೆ ಇನ್ಮುಂದೆ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯು ದೇಶಾದ್ಯಂತ 21,000 ದಾಟಿರುವುದರಿಂದ ಫಲಾನುಭವಿಗಳಿಗೆ ಸಿಗುತ್ತಿರುವ ಸಬ್ಸಿಡಿ ಮೊತ್ತವು ನೀಡುತ್ತಿಲ್ಲ.

ಕಳೆದ ಆರು ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯು ಶೇ 7ರಷ್ಟು ಹೆಚ್ಚಾಗಿದೆ. ಮಾರ್ಚ್ 22ರಿಂದ ಈವರೆಗೆ ಇಂಧನ ಬೆಲೆಗಳನ್ನು ಹೆಚ್ಚಿಸಿಲ್ಲ, ಆದರೆ ಅಬಕಾರಿ ಸುಂಕವನ್ನು ಪೆಟ್ರೋಲ್ ಮೇಲೆ 1 8 ಹಾಗೂ ಡೀಸೆಲ್ ಮೇಲೆ 16 ಕಡಿತಗೊಳಿಸಿದ್ದೇವೆ ಎಂದು ವಿವರಿಸಿದರು.