News

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

19 March, 2022 4:31 PM IST By: Kalmesh T
Big GIft, announced by CM Bommai on budget

ಸರ್ಕಾರದಿಂದ ಸಹಾಯ ಹಸ್ತ

ರೈತರು ತಾವು ಇರುವಂತಹ ಜಾಗಗಳಿಂದಲೇ ಹಾಲು ಉತ್ಪಾದಿಸಿ ರಾಷ್ಟ್ರದ ಎಲ್ಲೆಡೆ ಪೂರೈಸುತ್ತಾರೆ. ಹೀಗೆ ಇಡಿ ರಾಷ್ಟ್ರಕ್ಕೆ ಕ್ಷೀರೋದ್ಯಮದ ಮೂಲಕ ರೈತರು ಹಾಲನ್ನು ಒದಗಿಸುತ್ತಿದ್ದಾರೆ. ಆದರೆ, ಅವರಿಗೆ ಬೇಕಾದ ಪೂರಕ ಅನುಕೂಲ ಕಡಿಮೆ ಇದೆ. ಆದ್ದರಿಂದ ಈ ವರ್ಗದ ರೈತರಿಗೆ ಭಾರತ ಸರ್ಕಾರದ ವತಿಯಿಂದ ಸಹಾಯ ಹಸ್ತ ಚಾಚಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನು ಓದಿರಿ:

Income tax ತೆರಿಗೆಯಿಂದ ತುಂಬಿದ ಸರ್ಕಾರದ ಖಜಾನೆ, ಎಷ್ಟಂತಿರಾ ಇಲ್ಲಿದೆ Details.

ಅಬ್ಬರಿಸಲು ಸಜ್ಜಾದ ದೇಶದ ಮೊದಲ Cyclone..ಏಲ್ಲೆಲ್ಲಿ Effect..!

 

ರೈತರ ಆದಾಯ ಹೆಚ್ಚಿಸಲು 100 ಕೋಟಿ ಮೀಸಲು!

ಈ ಹಾಲು ಉತ್ಪಾದಕರಲ್ಲೂ ಸಾಕಷ್ಟು ಹಾಲು ಉತ್ಪಾದಕರ ಸಂಘಗಳಿದ್ದು, ಈ ಸಂಘಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಒಕ್ಕೂಟಗಳು ಕೂಡ ರೈತರಿಂದ ನಿರ್ಮಾಣವಾಗಿವೆ. ಇವೆಲ್ಲ ವ್ಯವಸ್ಥಿತವಾಗಿ ತಯಾರಾದ ಒಕ್ಕೂಟಗಳು. ಇಷ್ಟೊಂದು ದೊಡ್ಡ ಸಂಘಟನೆಗಳಿವೆ. ಇಷ್ಟೊಂದು ದೊಡ್ಡ ಒಕ್ಕೂಟಗಳಿವೆ. ಇಷ್ಟು ದೊಡ್ಡ ವ್ಯವಹಾರಗಳಿರುವ ರೈತರಿಗೆ ಅವರದ್ದೆಯಾದ ಬ್ಯಾಂಕ್‌ ಸ್ಥಾಪಿಸುವ ಸಲುವಾಗಿ ಯೋಜನೆ ರೂಪಿಸಿದೆ. ಇದಕ್ಕಾಗಿ ರೈತ ವರ್ಗದ ಜನರಿಗಾಗಿ 100 ಕೋಟಿ ರೂಪಾಯಿಯನ್ನು ನೀಡಲು ಸರ್ಕಾರ ಮುಂದಾಗಿದೆ ಎಂದರು.

ಇನ್ನಷ್ಟು ಓದಿರಿ: 

Petrol-Diesel Price Hike! Petrol-Diesel ಬೆಲೆ 110 ರೂ.ಗಿಂತ ಹೆಚ್ಚಿಗೆಯಾಗಿದೆ! ಗ್ರಾಹಕರಿಗೆ ಮತ್ತಷ್ಟು ಚಿಂತೆ!

ಕೋಟ್ಯಾಧಿಪತಿಯಾಗಲು Top 5 ಐಡಿಯಾಗಳು. ಹೆಚ್ಚು ಹಣ ಗಳಿಸಲು ಹೀಗೆ ಮಾಡಿ .

 

ರೈತರಿಗಾಗಿಯೇ ಪ್ರತ್ಯೇಕ‌ ಬ್ಯಾಂಕ್‌ ಸ್ಥಾಪನೆ

ಸದ್ಯ ನಮ್ಮ ರೈತರು ತಿಂಗಳಿಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಬೇರೆ ಬೇರೆ ಬ್ಯಾಂಕ್‌ಗಳಿಂದ ತಮ್ಮ ತಮ್ಮ ಚಟುವಟಿಕೆಗಳಿಗೆ ಪ್ರಯೋಜನವಾಗುತ್ತಿದೆ. ಆದರೆ, ಇವರೆಲ್ಲರ ಚಟುವಟಿಕೆಗೆ ಹಾಗೂ ಆರ್ಥೀಕ ಆದಾಯ ವೃದ್ಧಿಯಾಗಲು  ಹಾಲು ಉತ್ಪಾದಕರಿಗಾಗಿಯೇ ಒಂದು ಬ್ಯಾಂಕನ್ನು ಮಾಡಲು ಯೋಚಿಸುತ್ತಿದ್ದೇವೆ. ಅವರಿಗೆ ಈ ಮೂಲಕ ಶಕ್ತಿಯನ್ನು ತುಂಬಿ ರೈತರು ಅನಾವಶ್ಯಕವಾಗಿ ಕೆಲಸಗಳನ್ನು ಬಿಟ್ಟು ಬ್ಯಾಂಕಗಳಿಗೆ ಓಡಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಳ್ಳಬೇಕು

ಸಾವಿರ ರೂಪಾಯಿಯ ಶೇರ್‌ ಹೂಡಿಕೆ

ಈ ಮೂಲಕ ಅವರಿಗೆ ಅವಶ್ಯಕತೆ ಇದ್ದಾಗ ಅವರಿಗೆ ಅವರ ದುಡ್ಡು ದೊರೆಯುವಂತೆ ಮಾಡಬೇಕು. ಅವರ ದುಡ್ಡ ಬೇರೆ ಬೇರೆ ಕಡೆ ಹಂಚಿ ಹೋಗದೆ ಒಂದೆಡೆ ಹೂಡಿಕೆಯಾಗುವಂತೆ ಬಳಕೆಯಾಗಬೇಕು. ಮತ್ತು ರೈತರೊಂದಿಗೆ ಚರ್ಚಿಸಿ ಅವರೆಲ್ಲರನ್ನು ಒಳಗೊಂಡು ಅವರಿಂದ 1 ಸಾವಿರ ರೂಪಾಯಿಯ ಶೇರ್‌ ಹೂಡಿಸಿಕೊಳ್ಳುವ ಮೂಲಕ 260 ಕೋಟಿಯಾಗುತ್ತದೆ. ಇದರೊಂದಿಗೆ ಒಟ್ಟು ಬಂಡವಾಳ ಸಮೇತವಾಗಿ ಇತರೆ ಫೈನಾನ್ಸ್‌ಗಳ ಮೂಲಕ ದುಡ್ಡು ಪಡೆದು ಉತ್ತಮವಾದ ಒಂದು ಬ್ಯಾಂಕ್‌ ಮಾಡಲಾಗುವುದು ಎಂದರು.

ಸರಿಯಾದ ರೀತಿಯಲ್ಲಿ ಈ ಯೊಜನೆಯನ್ನು ಮುನ್ನಡೆಸಿದರೆ ಇದು Parallel to Apex bank ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಇದು ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಚಿಂತನೆಯನ್ನ ಮಾಡಿ ಬಜೆಟ್‌ನಲ್ಲಿ ಅದಕ್ಕಾಗಿಯೇ ಹಣವನ್ನು ಒದಗಿಸಿ ರೈತರಿಗೆ ಒಂದು ದೊಡ್ಡ ಮಟ್ಟದ ಸಹಾಯ ಮಾಡುವ ಯೋಜನೆಯನ್ನು ನಾವು ರೂಪಿಸಲಿದ್ದೇವೆ  ಎಂದು ಮೊಮ್ಮಾಯಿಯವರು ತಿಳಿಸಿದ್ದಾರೆ.

ಮತ್ತಷ್ಟು ಓದಿರಿ: 

GOODNEWS:ಇನ್ಮುಂದೆ ಹೀಗೆ ಮಾಡಿದ್ರೆ ಸಾಕು, ಜಮೀನಿಗೆ ಹರಿಯಲಿದೆ ಉಚಿತ ನೀರು..!

Drone Subsidy! ಸರ್ಕಾರದಿಂದ 5 ಲಕ್ಷ ರೂ. ವರೆಗೆ ದುಡ್ಡು ಸಿಗಲಿದೆ! Agriculture Minister Narendra Singh Tomar ಹೇಳಿದ್ದಾರೆ