News

ಎರೆಹುಳು ಗೊಬ್ಬರ ಖರೀದಿಗೆ ಸರ್ಕಾರದಿಂದ ಶೇ. 50ರಷ್ಟು ಸಹಾಯಧನ

02 January, 2021 6:00 PM IST By:
vermicompost

ಎರೆಹುಳು ಗೊಬ್ಬರ ಖರೀದಿಗೆ ಸರ್ಕಾರದಿಂದ 50 ರಷ್ಟು ಸಹಾಯಧನ ಸಿಗಲಿದೆ.  ಹೌದು ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೆ   ಎರೆಹುಳು ಗೊಬ್ಬರದ ಪ್ರಾಮುಖ್ಯತೆ ಗೊತ್ತಿದೆ. ಎರೆಹುಳು ಗೊಬ್ಬರ ಹೆಚ್ಚು ಶಕ್ತಿ ಅಥವಾ ಪೋಷಕಾಂಶಗಳನ್ನು ಒಳಗೊಂಡಿದ್ದರಿಂದ ಸರ್ಕಾರ ಸಹಾಯಧನ ನೀಡುತ್ತಿದೆ.

ಎರೆಹುಳು ಗೊಬ್ಬರ ನ್ನು ಕೃಷಿ ತ್ಯಾಜ್ಯಗಳು, ಪ್ರಾಣಿ ತ್ಯಾಜ್ಯಗಳು,  ನಗರ ತ್ಯಾಜ್ಯಗಳಿಂದ, ತಯಾರಿಸಲಾಗುತ್ತದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ವೇಗ ಗೊಳಿಸುತ್ತದೆ.  ಇದರಿಂದ ಮಣ್ಣಿನ ಫಲವತ್ತತೆಯು ಹೆಚ್ಚಾಗುತ್ತದೆ. ಇಳುವರಿಯು ಸಹ ಹೆಚ್ಚಿಗೆ ಪಡೆಯಬಹುದು. ಇದರ ಬಳಕೆಯಿಂದ ಉತ್ತಮ ಆರೋಗ್ಯ ನಿರ್ಮಾಣವಾಗುವುದರ ಜೊತೆಗೆ ಉತ್ಪಾದನೆ ಹೆಚ್ಚಾಗುತ್ತದೆ.

  ಆದ್ದರಿಂದ ರಾಜ್ಯದಲ್ಲಿ ಎರೆಹುಳು ಗೊಬ್ಬರ ಜನಪ್ರಿಯಗೊಳಿಸಲು.ಶೇಕಡಾ 50 ರ ರಿಯಾಯಿತಿ ದರ ಅಥವಾ ಪ್ರತಿ ಹೆಕ್ಟೇರ್ ಗೆ 2200/- ಯಾವುದು ಕಡಿಮೆ ಇದೆಯೋ ಅದನ್ನು ನೀಡಲಾಗುತ್ತದೆ. ಪ್ರತಿ ರೈತನಿಗೆ 2 ಹೆಕ್ಟರೆ ವರೆಗೂ  ಸಹಾಯಧನ ನೀಡಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ https//raitamitra.gov.in ಅಥವಾ 1800 425 3553 ಗೆ ಸಂಪರ್ಕಿಸಬಹುದು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ