News

ಭಾರತೀಯ ಕ್ರಿಕೆಟರ್ ವೇದಾ ಕೃಷ್ಣಮೂರ್ತಿಯವರಿಗೆ ಆಘಾತದ ಮೇಲೆ ಆಘಾತ

06 May, 2021 1:35 PM IST By:

ಹೆಮ್ಮಾರಿ ಕರೊನಾ ರೋಗದಿಂದ ಅಮ್ಮನನ್ನು ಕಳೆದುಕೊಂಡಿದ್ದ ಚಿಕ್ಕಮಗಳೂರು ಮೂಲದ ಭಾರತೀಯ ಮಹಿಳಾ ಕ್ರಿಕೆಟರ್​ ವೇದಾಕೃಷ್ಣಮೂರ್ತಿಯವರಿಗೆ ಮತ್ತೊಂದು ಆಘಾತ ಎದುರಾಗಿದೆ.

ಮೊನ್ನೆಯಷ್ಟೇ ವೇದಾಕೃಷ್ಣಮೂರ್ತಿ ಅವರ ತಾಯಿಯು ಕೊರೊನ್ ರೋಗಕ್ಕೆ  ಬಲಿಯಾಗಿದ್ದರು ಆ ನೋವನ್ನು ಸುಧಾರಿಸಿಕೊಳ್ಳುವಷ್ಟರಲ್ಲಿಯೇ ವೇದಾ ಕೃಷ್ಣಮೂರ್ತಿ ಅವರ ಸಹೋದರಿಯಾದ ವತ್ಸಲಾ ಕೃಷ್ಣಮೂರ್ತಿ ಕೂಡ ಈಗ ಕೊರೊನ್ ರೋಗಕ್ಕೆ ಬಲಿಯಾಗಿದ್ದಾರೆ.

ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಚಿಕಿತ್ಸೆ ಫಲಿಸದೇ ಮರಣ ಹೊಂದಿದರು. ಅವರ ಕುಟುಂಬದಲ್ಲಿ ಕೊರೊನ್ ರೋಗಕ್ಕೆ ಇದು ಎರಡನೇ ಬಲಿಯಾಗಿದೆ.

ಹೋದ ವಾರವೇ ವೇದಾ ಅವರ ತಾಯಿ ಚೆಲುವಾಂಬ (63) ಕೊರೊನ್ ಗೆ ಮೃತಪಟ್ಟಿದ್ದರು. ಇದಾದ ಒಂದೇ ವಾರಕ್ಕೆ ತನ್ನ ಸಹೋದರಿಯನ್ನು ಈಗ ವೇದಾಕೃಷ್ಣಮೂರ್ತಿ ಕಳೆದುಕೊಂಡಿದ್ದಾರೆ.  ಇವರ ಒಂದೇ ಕುಟುಂಬದಲ್ಲಿ ಬರೋಬ್ಬರಿ ಐದು ಜನರಿಗೆ ಕರೊನ್ ಸೋಂಕು ತಗುಲಿತ್ತು.

ಕಳೆದ ವಾರ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ ಅವರು ಕೋವಿಡ್​ ಪಾಸಿಟಿವ್​ ಆಗಿದ್ದರಿಂದ  ಉಸಿರಾಟದ ತೊಂದರೆಯಿಂದ ಮೃತಪಟ್ಟರು. ಈ ಘಟನೆ ಸಂಭವಿಸಿ ಕೇವಲ ಒಂದೇ ಒಂದು ವಾರದಲ್ಲಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿಯಾದ ವತ್ಸಲಾ ಕೃಷ್ಣಮೂರ್ತಿ ಅವರು ಮರಣ ಹೊಂದಿದ್ದಾರೆ.