News

ಸಾಮಾನ್ಯರಂತೆ ಮೈಸೂರಿನ ಮಾರ್ಕೆಟ್ ನಲ್ಲಿ ಓಡಾಡಿ ವಸ್ತುಗಳನ್ನು ಖರೀದಿಸಿದ ಸುಧಾಮೂರ್ತಿ

15 October, 2018 3:04 PM IST By:
Sudhamurthi

ಮೈಸೂರು, ಅಕ್ಟೋಬರ್ 14 : ಈಗಾಗಲೇ ಮೈಸೂರಿಗೆ ನಾಡಹಬ್ಬ ದಸರೆಗೆ ಆಗಮಿಸಿ ವಾಸ್ತವ್ಯ ಹೂಡಿರುವ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನಿನ್ನೆ ಶನಿವಾರ (ಅ.13) ಏಕಾಏಕಿ ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ಇತ್ತ ಮಾರುಕಟ್ಟೆಗೆ ಭೇಟಿ ನೀಡಿದ ಅವರನ್ನು ನೋಡಿ ಜನ ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ, ಸುಧಾಮೂರ್ತಿಯವರು ನಡೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಕೈ ಮುಗಿದು ಗೌರವ ಸೂಚಿಸಿದ್ದಾರೆ.

ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿ, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ಅವರ ಸರಳತೆಗೆ ಜನ ಮಾರುಹೋಗಿದ್ದಾರೆ. 2018ರ ಮೈಸೂರು ದಸರಾಗೆ ಚಾಲನೆ ನೀಡಿದ್ದ ಅವರನ್ನು ಜನ ವಂದಿಸುತ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.

 

ಸುಧಾಮೂರ್ತಿಯವರು ಅಂಗಡಿಗೆ ಆಗಮಿಸಿದಾಗ ಖುದ್ದು ಅಂಗಡಿ ಮಾಲೀಕರು ಹೂವು ನೀಡಿ ಗೌರವಿಸಿದ್ದಾರೆ. ಹೀಗೆ ಡಾ.ಸುಧಾಮೂರ್ತಿ ಸಾಮಾನ್ಯರಂತೆ ಮಾರ್ಕೆಟ್ ನಲ್ಲಿ ಓಡಾಡಿ ವಸ್ತುಗಳನ್ನು ಖರೀದಿಸಿರುವುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ.