News

GOODNEWS:ಇನ್ಮುಂದೆ ಹೀಗೆ ಮಾಡಿದ್ರೆ ಸಾಕು, ಜಮೀನಿಗೆ ಹರಿಯಲಿದೆ ಉಚಿತ ನೀರು..!

17 March, 2022 5:06 PM IST By: KJ Staff

ಕರ್ನಾಟಕದ ರೈತರಿಗೆ ಖುಷಿಯ ಸುದ್ದಿಯೊಂದು ಸಿಕ್ಕಿದಂತಾಗಿದೆ. ರಾಜ್ಯ ಸಚಿವ ಸಂಪುಟವು ಕೇಂದ್ರ ಸರ್ಕಾರ ಪ್ರಾಯೋಜಿಸುವ "ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್-ಬಿ" ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್‌ಗಳನ್ನು ಒದಗಿಸುವ ಯೋಜನೆಯ ಅನುಷ್ಠಾನಕ್ಕೆ ಅನುಮತಿ ನೀಡಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಈ ಯೋಜನೆಯ ಮೂಲಕ ರಾಜ್ಯದ ರೈತರು ತಮ್ಮ ಜಮೀನುಗಳಿಗೆ ಉಚಿತವಾಗಿ ನೀರು ಪಡೆಯಬಹುದಾಗಿದೆ. ಜೊತೆಗೆ ರೈತರನ್ನು ಸ್ವಾವಲಂಬಿಯಾಗಿಸಲು ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನು ಓದಿರಿ: Share Marketನಿಂದ, Goldನಿಂದ, ಮತ್ತು Propertyಯಿಂದ ಸಂಪಾದನೆ ಮಾಡುವಂತ ಜನರಿಗೆ ಒಳ್ಳೆಯ ಸುದ್ದಿ!

ಈ ಯೋಜನೆಯ ವಿಶೇಷತೆ ಏನು..?
ಈ ಯೋಜನೆಯಿಂದ ರಾಜ್ಯದ ರೈತರು ಉಚಿತವಾಗಿ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳಬಹುದು.ರೈತರು ಬಳಸುವ ಪಂಪ್‌ಗಳು ಸಾಮಾನ್ಯವಾಗಿ ಡೀಸೆಲ್ ಅಥವಾ ಪೆಟ್ರೋಲ್‌ನಿಂದ ಕೆಲಸ ಮಾಡುತ್ತವೆ. ಈ ಯೋಜನೆಯಡಿ ರೈತರ ಪಂಪ್​ಸೆಟ್​ಗಳನ್ನು ಸೌರಶಕ್ತಿ ಚಾಲಿತ ಪಂಪ್‌ಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸಲಾಗುವು. ಜೊತೆಗೆ ರೈತರನ್ನು ಸ್ವಾವಲಂಬಿಉಆಗಿ ಮಾಡಲಾಗುವುದು. ಜೊತೆ ಜೊತೆಗೆ ಸೋಲಾರ್ ಪವರ್ ಗ್ರಿಡ್ ಸ್ಥಾಪಿಸಿ ಅಲ್ಲಿ ಶೇಖರಣೆಯಾಗುವ ವಿದ್ಯುತ್ ಶಕ್ತಿಯನ್ನು ಸರ್ಕಾರವೇ ಖರೀದಿ ಮಾಡುತ್ತದೆ ಎಂದು ಭರವಸೆ ನೀಡಲಾಗಿದೆ. ಇ ಯೋಜನೆಯಿಂದ ರೈತರ ಹೊಲಕ್ಕೆ ನೀರು ಹಾಗೂ ಕೈಗೆ ಸ್ವಲ್ಪ ಹಣವು ದೊರಕಿಂದತಾಗುತ್ತದೆ. ಸದ್ಯ ಕರ್ನಾಟಕದ ಸುಮಾರು 10,000 ರೈತರು ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ.

ಇದನ್ನು ಓದಿರಿ: Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್‌ ಬೆಲೆ.. ಇದೇ ಕಾರಣ

ಶುಲ್ಕವೆಷ್ಟು?
ಈ ಯೋಜನೆಯಡಿ ರೈತರು ಸೌರ ವಿದ್ಯುತ್ ಕೇಂದ್ರವನ್ನು ತಮ್ಮ ಜಮೀನಿನಲ್ಲಿ ಸ್ಥಾಪಿಸಲು ಅಲ್ಪ ಶುಲ್ಕ ಭರಿಸಬೇಕು. 0.5 ಮೆಗಾ ವ್ಯಾಟ್‌ನಿಂದ 2 ಮೆಗಾವ್ಯಾಟ್‌ನ ವರೆಗಿನ ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪಿಸಲು ಶುಲ್ಕ ಕ್ರಮವಾಗಿ 3000 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಇದೆ. ಇನ್ನು ಅನುಕೂಲವಾಗುವಂತೆ ಈ ಯೋಜನೆಗೆ ತಗಲುವ ಒಟ್ಟು ವೆಚ್ಚದ ಶೇಕಡಾ 40 ರಷ್ಟು ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ಪಾವತಿಸುತ್ತದೆ.

ಇದನ್ನು ಓದಿರಿ:Amul Recruitment 2022: ವಿಶ್ವದ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಲ್ಲಿ ನೇಮಕಾತಿ ಶುರು..! ಇಲ್ಲಿದೆ ಫುಲ್‌ ಡಿಟೈಲ್ಸ್‌