News

ಪಿಎಂ ಕಿಸಾನ್: ಇ ಕೆವೈಸಿ ಮಾಡದಿದ್ದರೆ ನೀವು ೧೩ ನೇ. ಕಂತು ಕಳೆದುಕೊಳ್ಳುತ್ತೀರಿ.

18 January, 2023 12:14 PM IST By: Maltesh

ನೀವು ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಹೌದು ನೀವು ಈ ಕೆಲಸವನ್ನು ಮಾಡದಿದ್ದರೆ13 ನೇ ಕಂತಿನಲ್ಲಿ ನಿಮಗೆ ಆರ್ಥಿಕ ಸಹಾಯದ ಮೊತ್ತವು ಸಿಗುವುದಿಲ್ಲ. ನಿಮ್ಮ ಈ ಈ ಕೆ ವೈ ಸಿ ಅನ್ನು ನೀವು ಆದಷ್ಟು ಬೇಗ ಪೂರ್ಣಗೊಳಿಸಬೇಕು. ದೇಶದ ಲಕ್ಷಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿಗಾಗಿ ಕಾಯುತ್ತಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಕೇಂದ್ರ ಸರ್ಕಾರ ಜನವರಿ 23 ರಂದು ಹಣವನ್ನು ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು, ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತನ್ನು ರೈತರಿಗೆ ಬಿಡುಗಡೆ ಮಾಡಬಹುದು. 

Swiggy: ಸ್ವಿಗ್ಗಿಯಲ್ಲಿ ₹ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ..!

ಈಗ ಈ ಕೆ ವೈ ಸಿ ಮಾಡದ ರೈತರು ಕಂಗಾಲಾಗಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಶೀಘ್ರದಲ್ಲೇ 2,000ರೂ. ಗಳನ್ನು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಶೀಘ್ರದಲ್ಲೇ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ . ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿಯ ಕುರಿತು ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಬಂದಿದೆ. 

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪಡೆಯುತ್ತಿದ್ದರೆ, ಈಗ ನೀವು 13 ನೇ ಕಂತಿಗೆ ಹೊಸ ಮಾಹಿತಿಯನ್ನು ನೀಡಬೇಕು. ಮಾಹಿತಿಯ ಪ್ರಕಾರ, ಈಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದ ರೈತರ ಭೂಮಿಯನ್ನು ಪರಿಶೀಲಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23 ರ ವದಿನದಂದು ದೇಶದ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು. ಪ್ರಧಾನ ಮಂತ್ರಿಗಳು 2,000ರೂ.ಗಳ ಸಹಾಯದ ಮೊತ್ತವನ್ನು ಖಾತೆಗೆ ವರ್ಗಾಯಿಸಬಹುದು.

ನೀವೂ ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದರೆ, ನಿಮಗೆ 2000 ರೂ.ಗಳ ಸಹಾಯದ ಮೊತ್ತ ದೊರೆಯುತ್ತದೆ. ಯೋಜನೆಯಡಿ ನೋಂದಣಿಯಾದ ರೈತರು ಪ್ರಧಾನ ಮಂತ್ರಿ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಿ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಡಬಹುದು. ಈ ಮೂಲಕ ಯೋಜನೆಯಲ್ಲಿ ಪಡೆದ ಹಣಕಾಸಿನ ನೆರವು ಮೊತ್ತದ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.

ಯೋಜನೆ ಅಡಿಯಲ್ಲಿ ಲಭ್ಯವಿರುವ 13 ಕಂತುಗಳ ಸ್ಥಿತಿಯನ್ನು ಪರಿಶೀಲಿಸಲು www.pmkisan.gov.in ಗೆ ಭೇಟಿ ನೀಡಿ. ಅಲ್ಲಿನ ಫಾರ್ಮರ್ಸ್ ಕಾರ್ನರ್ ಗೆ ಭೇಟಿ ನೀಡಿ. ಫಲಾನುಭವಿ ಸ್ಥಿತಿ ಆಯ್ಕೆಯನ್ನು ನೀವು ಕ್ಲಿಕ್ ಮಾಡಿ. ಮುಂದಿನ ಪುಟದಲ್ಲಿ, ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಒದಗಿಸುತ್ತೀರಿ. ನಿಮ್ಮ ಸ್ಥಿತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಇಲ್ಲಿ ನೀವು ಕಾಣಬಹುದು.

ವಿಶ್ವದ ಅತಿದೊಡ್ಡ ಸಿಲಿಂಡರಾಕಾರದ ಅಕ್ವೇರಿಯಂ ಸ್ಫೋಟ: 1,500ಕ್ಕೂ ಹೆಚ್ಚು ಮೀನುಗಳ ಸಾವು

ಈ ರೀತಿಯ ಸಂಪೂರ್ಣ ಇ-ಕೆವೈಸಿ ಮಾಡಿ, ತಿಳಿಯಿರಿ...

ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.

ಬಲಭಾಗದಲ್ಲಿ ನೀವು ಈ ಕೆಳಗಿನ ಟ್ಯಾಬ್‌ಗಳನ್ನು ಕಾಣಬಹುದು. ಮೇಲ್ಭಾಗದಲ್ಲಿ ನೀವು ಇ-ಕೆವೈಸಿ ಬರೆದಿರುವುದನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಬಟನ್ ಕ್ಲಿಕ್ ಮಾಡಿ.

ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಅನ್ನು ನಮೂದಿಸಿ.

ಎಲ್ಲವೂ ಸರಿಯಾಗಿದ್ದರೆ ಇ-ಕೆವೈಸಿ ಪೂರ್ಣಗೊಳ್ಳುತ್ತದೆ ಇಲ್ಲದಿದ್ದರೆ ಅದು ಅಮಾನ್ಯವಾಗುತ್ತದೆ.

ಇದು ಸಂಭವಿಸಿದಲ್ಲಿ ನಿಮ್ಮ ಕಂತು ಸಿಲುಕಿಕೊಳ್ಳಬಹುದು. ನೀವು ಅದನ್ನು ಆಧಾರ್ ಸೇವಾ ಕೇಂದ್ರದಲ್ಲಿ ತಿದ್ದುಪಡಿ ಮಾಡಬಹುದು.