News

Summer Effect: ಬಿಸಿಲನ ತಾಪ ನಿಯಂತ್ರಿಸಲು ಆಟೋ ಮೇಲೆಯೇ ಮಿನಿ ಗಾರ್ಡನ್‌ ನಿರ್ಮಿಸಿದ ಭೂಪ..!

06 May, 2022 11:18 AM IST By: Maltesh
Mini Garden

ಈ ವರ್ಷದ ಬೇಸಿಗೆಯ ಋತುವು  ಆರಂಭದಿಂದಲೇ ಜನರನ್ನು ಹೈರಾಣಾಗಿಸಿದೆ. ಪರಿಣಾಮ  ಏಪ್ರಿಲ್‌ ತಿಂಗಳಿನಲ್ಲಿ ದಾಖಲೆ ಮುರಿಯುವ ತಾಪಮಾನದೊಂದಿಗೆ ಬಿಸಿಲಿ ಝಳವು ಭುಮಿಗೆ ಅಪ್ಪಳಿಸಿದೆ. ಸಾಂಪ್ರದಾಯಿಕ ತಂಪು ನೀಡುವ ಉಪಕರಣಗಳ ವಿಧಾನಗಳ ಜೊತೆಗೆ ಜನರು ಇತ್ತೀಚಿನ ಹವಾಮಾನವನ್ನು ಎದುರಿಸಲು ಮತ್ತು ತಮ್ಮನ್ನು ತಂಪಾಗಿಸಲು ಹೊಸ ಮತ್ತು ಸೃಜನಶೀಲ ವಿಧಾನಗಳ ಮೊರೆ ಹೋಗುತ್ತಿದ್ದಾರೆ. ಈ ಬೇಸಿಗೆಯ ಬಿಸಿಯಲ್ಲಿ, ಆಹಾರ ಮತ್ತು ಪಾನೀಯವು ದೇಹವನ್ನು ತಂಪಾಗಿರಿಸಲು ಅತ್ಯುತ್ತಮ ಮಾರ್ಗವಾಗಿ ಬಿಟ್ಟಿದೆ.

ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತಿನ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಮಂತ್ರಿ ಸಭೆ!

ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓರ್ವ ಆಟೋ ಡ್ರೈವರ್ ತನ್ನನ್ನು ಮತ್ತು ತನ್ನ ಗ್ರಾಹಕರನ್ನು ಆಟೋದಲ್ಲಿ ತಂಪಾಗಿರಿಸಲು ಹೊಸ ಮತ್ತು ಸೃಜನಶೀಲ ತಂತ್ರವನ್ನು ರೂಪಿಸಿ ಟಾಕ್‌ ಆಫ್‌ ದಿ ಟೌನ್‌ ಆಗಿದ್ದಾನೆ. ಹೌದು ಆಟೋ ಚಾಲಕ ತನ್ನ ಆಟೋ-ರಿಕ್ಷಾದ ಛಾವಣಿಯ ಮೇಲೆ ಚಿಕ್ಕದಾದ ಮಿನಿ ಉದ್ಯಾನವನ್ನೇ ನಿರ್ಮಿಸಿ ಅಚ್ಚರಿಸಿ ಮೂಡಿಸಿದ್ದಾನೆ..!

ದೆಹಲಿ ಮೂಲದ 48 ವರ್ಷದ ಆಟೋ ಚಾಲಕ ಮಹೇಂದ್ರ ಕುಮಾರ್, ತನ್ನನ್ನು ಮತ್ತು ತನ್ನ ಪ್ರಯಾಣಿಕರನ್ನು ಬೇಸಿಗೆಯ ಬಿಸಿಲಿನಿಂದ ರಕ್ಷಿಸಲು ಈ ವಿನೂತನ ತಂತ್ರವನ್ನ ರೂಪಿಸಿದ್ದಾರೆ. ಮತ್ತು ಆ ಮೂಲಕ ಪ್ರಯಾಣಿಕರನ್ನು ತಂಪಾಗಿರಿಸಿದ್ದಾರೆ. ತನ್ನ ವಾಹನದ ಮೇಲ್ಛಾವಣಿಯಲ್ಲಿರುವ ಈ ಮೊಬೈಲ್ ಉದ್ಯಾನದಲ್ಲಿ, ಅವರು 20 ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಮೂಲಿಕೆಗಳು,  ಮತ್ತು ಅಲಂಕಾರಿಕ ಸಸ್ಯ ಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ರೀತಿಯ ಉದ್ಯಾನದಲ್ಲಿ ( ಮೇಲ್ಛಾವಣಿಯ ಉದ್ಯಾನ ), ಅವರು ಲೆಟಿಸ್, ಟೊಮೆಟೊ ಮತ್ತು ರಾಗಿ ಮುಂತಾದ ಸಸ್ಯಗಳನ್ನು ಸಹ ನೆಟ್ಟಿದ್ದಾರೆ.

ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!

ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!

ನಗರೀಕರಣದ ಈ ಯುಗದಲ್ಲಿ, ಜನಸಂಖ್ಯೆಯು ನಿರಂತರವಾಗಿ ಕೆಲಸ ಮತ್ತು ಉತ್ತಮ ಜೀವನಶೈಲಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಬದಲಾಗುತ್ತಿದೆ.

ಚಾವಣಿಯ ಮೇಲೆ ಚಾಪೆ ಹಾಸಿ, ನಂತರ ಗೋಣಿಚೀಲ, ಕೊನೆಗೆ ತೋಟಕ್ಕೆ ಮಣ್ಣು ಹಾಕುವ ಮೂಲಕ ಕುಮಾರ್  ಗಾರ್ಡನ್‌ ಆರಂಭಿಸಿದರು. ಸಸ್ಯಗಳು ಹಸಿರು ಮತ್ತು ಆರೋಗ್ಯಕರವಾಗಿರಲು, ಅವರು ದಿನಕ್ಕೆ ಎರಡು ಬಾರಿ ನೀರು ಹಾಕುತ್ತಾರೆ.

ಸುಡುವ ಬೇಸಿಗೆಯನ್ನು ನಿಭಾಯಿಸಲು ಮಹೇಂದ್ರನ ಹೊಸ ವಿಧಾನ

ಸುಮಾರು ಎರಡು ವರ್ಷಗಳ ಹಿಂದೆ ಬೇಸಿಗೆಯ ಉತ್ತುಂಗದಲ್ಲಿ , ಮಹೇಂದ್ರ ಈ ಆಲೋಚನೆಯನ್ನು ಹೊಂದಿದ್ದರು. ಮತ್ತು ತನ್ನ ರಿಕ್ಷಾವನ್ನು ತಂಪಾಗಿರಿಸಲು ಮತ್ತು ತನ್ನ ಪ್ರಯಾಣಿಕರಿಗೆ ಶಾಖದಿಂದ ಸ್ವಲ್ಪ ವಿರಾಮವನ್ನು ಒದಗಿಸುವ ಕೆಲವು ಸಸ್ಯಗಳನ್ನು ತನ್ನ ರಿಕ್ಷಾದ ಮೇಲ್ಭಾಗದಲ್ಲಿ ಬೆಳೆಸಲು ಯೋಚಿಸಿದ್ದರು. ಈಗ ನೈಸರ್ಗಿಕ ಹವಾನಿಯಂತ್ರಣವನ್ನು ಹೊಂದಿರುವಂತೆ ಆಗುತ್ತದೆ ಎಂದು ಅವರು ಹೇಳುತ್ತಾರೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ಪ್ರಯಾಣದ ನಂತರ, ಪ್ರಯಾಣಿಕರು ಎಷ್ಟು ತೃಪ್ತರಾಗಿದ್ದಾರೆಂದರೆ, ಅವರು ಅವನಿಗೆ ಹತ್ತರಿಂದ ಇಪ್ಪತ್ತು ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಮುಂದಾಗುತ್ತಿದ್ದಾರಂತೆ.

ದೆಹಲಿಯ ಆಟೋ ಚಾಲಕನ ವಿನೂತನ ಸಲಹೆಯನ್ನು ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘಿಸಿದ್ದಾರೆ. ಅನೇಕ ಜನರು ಕುಮಾರ್ ಅವರ ಆಟೋದ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಸಹ ರಿಕ್ಷಾ ಚಾಲಕರು ಅವರ ಸಲಹೆಯನ್ನು ಕೇಳಿ ತಾವು ಈದ್ಯಾನವನ್ನು ನಿರ್ಮಿಸಲು ಆಸಕ್ತಿ ತೋರುತ್ತಿದ್ದಾರಂತೆ.