News

ಹವಾಮಾನ ವರದಿ: ಕರಾವಳಿಯಲ್ಲಿ ದಾಖಲೆಯ ಮಳೆ..ರಾಜ್ಯದಲ್ಲಿ ಮತ್ತೇ ಭಾರೀ ಮಳೆ ಮುನ್ಸೂಚನೆ

03 August, 2022 11:16 AM IST By: Maltesh
Karntaka Heavy rain Alert next 5 Days

ರಾಜ್ಯದಲ್ಲಿ ವರುಣನ ಆರ್ಭಟ ದಿನ ಕಳೆದಂತೆ ಮುಂದುವರೆಯುತ್ತಲೆ ಸಾಗಿದೆ. ಹೌದು ಕಳೆದ 48 ಗಂಟೆಯಲ್ಲಿ ಮಳೆರಾಯನ ಅಬ್ಬರಕ್ಕೆ ರಾಜ್ಯಾದ್ಯಂತ ಜನಜೀವನ ಸಾಕಷ್ಟು ಅಸ್ತವ್ಯಸ್ತಗೊಂಡಿದೆ. ಅಷ್ಟೇ ಅಲ್ಲದೆ ಈ ಮಳೆ ಇನ್ನು 5 ದಿನಗಳ ಕಾಲ ಮುಂದುವರೆಯಲಿದೆ ಎಂದ ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

ಸದ್ಯ ಇಂದಿನ  ಹವಾಮಾನವನ್ನು ಗಮನಿಸುವುದಾದರೆ ಕರವಾಳಿಯ ಬಹುತೇಕ ಭಾಗಗಳಲ್ಲಿ ಮಳೆ ಅಬ್ಬರ ಇನ್ನು ನಿಂತಿಲ್ಲ. ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, IMD ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಜೊತೆಗೆ ಇಂದು ಕೂಡ ಮಳೆಯಾಗುವ ಸಾಧ್ಯತೆಗಳಿದ್ದು ಚಿಕ್ಕಮಗಳೂರು, ಕೊಡುಗು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಸೂಚಿಸಲಾಗಿದೆ.

ಇದನ್ನೂ ಮಿಸ್‌ ಮಾಡ್ದೆ ಓದಿ:

ಪಿಎಂ ಕಿಸಾನ್‌ 12ನೇ ಕಂತಿನ ಡೇಟ್‌ ಫಿಕ್ಸ್‌..ಈ ದಿನ ನಿಮ್ಮ ಅಕೌಂಟ್‌ಗೆ ಬೀಳಲಿದೆ ಹಣ

ಇಂದು ಕೂಡ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೂಡ ಮಧ್ಯಾಹ್ನದ ಹೊತ್ತಿಗೆ ಭಾರೀ ಮಳೆಯಾಗುವ ಸೂಚನೆ ಇದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಶಿವಮೊಗ್ಗದಲ್ಲಿ ಆಗಸ್ಟ್ 6ರಂದು ಮಾತ್ರ ಅತೀ ಮಳೆ ಬರುವ ನಿರೀಕ್ಷೆ ಇದೆ. ಈ ಕಾರಣಗಳಿಂದ ಇಷ್ಟು ಜಿಲ್ಲೆಗಳಿಗೆ ಆಯಾ ದಿನ 'ರೆಡ್‌ ಅರ್ಲರ್ಟ್' ಘೋಷಿಸಿರುವುದಾಗಿ ರಾಜ್ಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಏತನ್ಮಧ್ಯೆ, ದೇಶದ ಮಧ್ಯ ಭಾಗಗಳಲ್ಲಿ ಕಡಿಮೆ ಮಳೆಯ ಚಟುವಟಿಕೆಯು ಆಗಸ್ಟ್ 4 ರವರೆಗೆ ಮುಂದುವರಿಯುತ್ತದೆ ಮತ್ತು ನಂತರ ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದೆ. ಸರಾಸರಿ ಸಮುದ್ರ ಮಟ್ಟದಲ್ಲಿ, ಮಾನ್ಸೂನ್ ತೊಟ್ಟಿಯ ಪಶ್ಚಿಮ ತುದಿಯು ಅದರ ಸಾಮಾನ್ಯ ಸ್ಥಾನದ ಉತ್ತರದಲ್ಲಿದೆ, ಆದರೆ ಪೂರ್ವದ ತುದಿಯು ಅದರ ಸಾಮಾನ್ಯ ಸ್ಥಾನದ ಸಮೀಪದಲ್ಲಿದೆ. ಆಗಸ್ಟ್ 5 ರಿಂದ, ಮಾನ್ಸೂನ್ ಟ್ರಫ್ ಅದರ ಸಾಮಾನ್ಯ ಸ್ಥಾನದ ಸಮೀಪ ಅಥವಾ ದಕ್ಷಿಣಕ್ಕೆ ಇರುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯು  ರಾಯಲಸೀಮಾ ಮತ್ತು ಲಕ್ಷದ್ವೀಪದಲ್ಲಿ ಆಗಸ್ಟ್ 4 ರವರೆಗೆ ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂನಲ್ಲಿ ಆಗಸ್ಟ್ 6 ರವರೆಗೆ ಪ್ರತ್ಯೇಕವಾದ ಭಾರೀ ಫಾಲ್ಸ್ ಮತ್ತು ಗುಡುಗು ಅಥವಾ ಮಿಂಚುಗಳೊಂದಿಗೆ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಶನಿವಾರದವರೆಗೆ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಇದೇ ರೀತಿಯ ಹವಾಮಾನ ಇರುತ್ತದೆ.