News

Price Hike ದೇಶದಲ್ಲಿ ಹೆಚ್ಚಾಗ್ತಿದೆ ಹಣದುಬ್ಬರ: ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿ!

26 July, 2023 6:05 PM IST By: Hitesh
Inflation is increasing in the country: the price of essential items is more expensive!

ದೇಶದಲ್ಲಿ ಇದೀಗ ಅಕ್ಕಿ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 

ಭಾರತವು ಬಾಸುಮತಿ ಅಕ್ಕಿಯನ್ನು ಹೊರತುಪಡಿಸಿ, ಉಳಿದ ಅಕ್ಕಿಯನ್ನು  ರಫ್ತು ಮಾಡುವುದನ್ನು ನಿರ್ಬಂಧಗೊಳಿಸಿದೆ.

ಭಾರೀ ಮಳೆಯಿಂದಾಗಿ ದೇಶದಲ್ಲಿ ಬೆಳೆ ಹಾನಿಯಾಗಿದೆ.

ಅಲ್ಲದೇ ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ಕಿ ಬೆಲೆ 11 ಪ್ರತಿಶತಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ.

ಪ್ರಸ್ತುತ ಭಾರತದ ಅಕ್ಕಿ ರಫ್ತಿನಲ್ಲಿ ಸುಮಾರು ಕಾಲು ಭಾಗದಷ್ಟು ಬಾಸ್ಮತಿ ಹೊರತುಪಡಿಸಿದ ಅಕ್ಕಿ ಇದೆ

ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.  

ಭಾರತವು ಅಕ್ಕಿ ರಫ್ತಿನಲ್ಲಿ ಈಗ ತಂದಿರುವ ಕೆಲವು ನಿರ್ದಿಷ್ಟ ಬದಲಾವಣೆಗಳಿಂದಾಗಿ ಮುಂದಿನ ದಿನಗಳಲ್ಲಿ

ಜಾಗತಿಕ ಆಹಾರ ಬೆಲೆಗಳನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಲ್ಲದೇ ಜಾಗತಿಕ ಆಹಾರ ಬೆಲೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.     

ಗೋಧಿ ಸೇರಿದಂತೆ ಉಕ್ರೇನಿಯನ್ ಧಾನ್ಯದ ಸುರಕ್ಷಿತ ಮಾರ್ಗವನ್ನು ಖಾತರಿಪಡಿಸುವ ಒಪ್ಪಂದವನ್ನು

ಈ ವಾರ ರಷ್ಯಾ ಹಿಂತೆಗೆದುಕೊಂಡ ನಂತರ ಆಹಾರ ಸರಬರಾಜು ಮಾಡುವುದು ಸಂಕಷ್ಟವಾಗಿದ್ದು,

ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಲ್ಲೇ ಇದೆ.  

ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರನಾಗಿದ್ದು, ಜಾಗತಿಕ ಸಾಗಣೆಯಲ್ಲಿ 40% ಕ್ಕಿಂತ ಹೆಚ್ಚಿನದನ್ನು ಹೊಂದಿದೆ.

ಬಾಸ್ಮತಿ ಅಲ್ಲದ ಅಕ್ಕಿಯನ್ನು ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಕಳೆದ ವರ್ಷ, ವಿದೇಶಿ ಮಾರಾಟವನ್ನು ಹತೋಟಿಗೆ ತರುವ ಉದ್ದೇಶದಿಂದ ಭಾರತ ಸರ್ಕಾರವು 20% ರಫ್ತು ತೆರಿಗೆಯನ್ನು ವಿಧಿಸಿತು.

ಇದು ಸೀಮಿತ ಗೋಧಿ ಮತ್ತು ಸಕ್ಕರೆ ಸಾಗಣೆಯನ್ನು ಹೊಂದಿದೆ.

ಆದರೆ, ದೇಶೀಯವಾಗಿ ಮಾರಾಟ ಮಾಡುವುದಕ್ಕಿಂತ ರಫ್ತು ಮಾಡುವುದು ಭಾರತೀಯ ರೈತರಿಗೆ ಹೆಚ್ಚು ಲಾಭದಾಯಕವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆಗಳ ಲಾಭವನ್ನು ಪಡೆಯುವುದನ್ನು ಖಾತ್ರಿಪಡಿಸುವ ಮೂಲಕ,

ದೀರ್ಘ-ಧಾನ್ಯದ ಬಾಸ್ಮತಿ ಸೇರಿದಂತೆ ಇತರ ರೀತಿಯ ಅಕ್ಕಿಯನ್ನು ರಫ್ತು ಮಾಡಲು ರೈತರಿಗೆ ಇನ್ಮುಂದೆ ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಕಳೆದ ವರ್ಷ ಉಕ್ರೇನ್ನ ಮೇಲೆ ರಷ್ಯಾವು ಯುದ್ಧವನ್ನು ಘೋಷಿಸಿದ ನಂತರದಲ್ಲಿ ಜಾಗತಿಕವಾಗಿ ವಿ

ವಿಧ ಆಹಾರ ಧಾನ್ಯಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಆದರೆ, ಪರಿಸ್ಥಿತಿ ತುಸು ಸುಧಾರಿಸುವ ಸಂದರ್ಭದಲ್ಲಿಯೇ 

 ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಮಸ್ಯೆ ಹಾಗೂ ಭಾರತದಲ್ಲಿ ಕೆಟ್ಟ ಹವಾಮಾನ ಸೃಷ್ಟಿಯಾಗಿತ್ತು.

ಈ ಎಲ್ಲ ಕಾರಣಗಳಿಂದ ಟೊಮ್ಯಾಟೊ ಮತ್ತು ಈರುಳ್ಳಿ ಸೇರಿದಂತೆ –

ಅನೇಕ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆ ಕಂಡಿರುವುದು ವರದಿ ಆಗಿದೆ.  

ತರಕಾರಿ ಬೆಲೆಗಳು ಮೇ ನಿಂದ ಜೂನ್ ವರೆಗೆ 12% ರಷ್ಟು ಜಿಗಿದಿವೆ,

ಇದು ಜನರ ಜೀವನ ನಿರ್ವಹಣೆಗೆ ತೊಡಕಾಗಿದ್ದು, ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಹಣದುಬ್ಬರವು 4.8% ಕ್ಕೆ ಏರಿಕೆ ಆಗಿತ್ತು. 

ಹೆಚ್ಚುತ್ತಿರುವ ಜೀವನ ವೆಚ್ಚವು ಮುಂದಿನ ವರ್ಷ ರಾಷ್ಟ್ರೀಯ ಚುನಾವಣೆಗಳ ಮುನ್ನ ಭಾರತದಲ್ಲಿ

ಸರ್ಕಾರದ ಮೇಲೆ ರಾಜಕೀಯ ಒತ್ತಡವನ್ನು ತಂದಿದೆ. ಮುಂದಿನ ತಿಂಗಳುಗಳಲ್ಲಿ

ದೇಶದ ಪ್ರಮುಖ ರಾಜ್ಯಗಳಲ್ಲಿ ಚುನಾವಣೆಯೂ ನಡೆಯಲಿದೆ.