News

Big Breaking ಪ್ರಮಾಣವಚನ ಸ್ವೀಕಾರ ಬೆನ್ನಲ್ಲೇ CM ಸಿದ್ದರಾಮಯ್ಯ ಮಹತ್ವದ ಘೋಷಣೆ

20 May, 2023 2:45 PM IST By: Maltesh
Important announcement by CM Siddaramaiah after taking oath

ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೇಹಲೋತ್‌ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಿದ್ದರಾಮಯ್ಯ ಅವರು ದೇವರ ಹೆಸರಲ್ಲಿ ಪ್ರಮಾಣ ವಚವನ್ನು ಸ್ವೀಕಾರ ಮಾಡಿದ್ದಾರೆ. ಇನ್ನು ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ರಾಜ್ಯದ ಜನೆತೆಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳ ಕುರಿತು ಮಾತನಾಡಿದ ಅವರು ಇಂದೇ ಅವೆಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.ನಾವು ನುಡಿದಂತೆ ನಡೆಯುತ್ತೇವೆ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ ಅವರು ಇಂದು ಕ್ಯಾಮಬಿನೆಟ್‌ ಮೀಟಿಂಗ್‌ ಕೂಗೊಂಡು ಎಲ್ಲ ಗ್ಯಾರಂಟಿಗನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.

ಗ್ಯಾರಂಟಿಗಳು ಯಾವುವು..?

ಗ್ಯಾರಂಟಿ ನಂಬರ್ 1 ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ​

ಗ್ಯಾರಂಟಿ ನಂಬರ್ 2 ಗೃಹ ಲಕ್ಷ್ಮಿ ಯೋಜನೆ : ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ

​​ಗ್ಯಾರಂಟಿ ನಂಬರ್ 3: ಪ್ರತಿಯೊಬ್ಬರಿಗೆ ಉಚಿತ ಅಕ್ಕಿ​

ಗ್ಯಾರಂಟಿ -5 - ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ.

ಯುವನಿಧಿ: ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂಪಾಯಿ