News

ದ್ರಾಕ್ಷಿ ಬೆಳೆಗೆ ಉತ್ತಮ ಪೋಷಕಾಂಶ ನೀಡುತ್ತದೆ ಐಸಿಎಲ್ ಕಂಪನಿಯ ರಸಗೊಬ್ಬರ-ವೀರಶೆಟ್ಟಿ ಗೌರ್

03 August, 2021 8:39 PM IST By:

ಜಗತ್ತಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಗಳಲ್ಲಿ ಐಸಿಎಲ್ ರಸಗೊಬ್ಬರ ಉತ್ಪಾದನಾ ಕಂಪನಿಯ ಒಂದಾಗಿದೆ. ಐಸಿಎಲ್ ಕಂಪನಿಯ  ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ವೀರಶೆಟ್ಟಿಯವರೊಂದಿಗೆ ಕೃಷಿ ಜಾಗರಣವು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಲೈವ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದ್ರಾಕ್ಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ವೀರಶೆಟ್ಟಿಯವರು ದ್ರಾಕ್ಷಿ ಬೆಳೆಯ ಆರಂಭದಿಂದ ಕಟಾವಿನವರೆಗೆ ಐಸಿಎಲ್ ಕಂಪನಿಯ ರಸಗೊಬ್ಬರದ ಮಹತ್ವದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.

ಹಾಲೆಂಡ್. ಯುಎಸ್ಎ, ಸ್ಪೇನ್, ಇಸ್ರೇಲ್, ಬೆಲ್ಡಿಯಂ, ಇಂಗ್ಲೆಂಡ್ ದೇಶಗಳಲ್ಲಿ ಈಗಾಗಲೇ ಐಸಿಎಲ್ ಕಂಪನಿಯು ರಸಗೊಬ್ಬರವನ್ನು ಉತ್ಪಾದನೆ ಮಾಡುತ್ತಿದೆ. ಅತೀ ಶೀಘ್ರದಲ್ಲಿ ಭಾರತದಲ ಮಹಾರಾಷ್ಟ್ರದಲ್ಲಿ ಸಹ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು, ಐಸಿಎಲ್ ಕಂಪನಿಯ ರಸಗೊಬ್ಬರ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಮಾರುಕಟ್ಟೆಗೆ ಪ್ರವೇಶಿಸಿದೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಐಸಿಎಲ್ ಕಂಪನಿಯ ರಸಗೊಬ್ಬರ ಸಿಗಲಿದೆ ಎಂದರು.

ಯಾವುದೇ ಸಸ್ಯ, ಗಿಡಗಳು ಬೆಳೆಯಬೇಕಾಗದೆರ 17 ಅಗತ್ಯ ಪೋಷಕಾಂಶಗಳು ಬೇಕು.  ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್  ಇವು ಮೂಲ ಪೋಷಕಾಂಶಗಳಾಗಿವೆ. 17 ಪೋಷಕಾಂಶಗಳಲ್ಲಿ ಒಂದು ಪೋಷಕಾಂಶಗಳು ಕಡಿಮೆಯಿದ್ದರೂ ಸಹ ಸಸ್ಯಗಳು ಸರಿಯಾಗಿ ಬೆಳೆಯುವುದಿಲ್ಲ. ಪೋಷಕಾಂಶಗಳ ಕೊರತೆಯಿಂದಾಗಿ ಗುಣಮಟ್ಟ ಅಷ್ಟೇ ಅಲ್ಲ, ಇಳುವರಿಯೂ ಕಡಿಮೆಯಾಗುತ್ತದೆ ಎಂದರು.

ಐಸಿಎಲ್ ಉತ್ಪನ್ನಗಳು ಕಡಿಮೆ ಪಿಹೆಚ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಉತ್ಪನ್ನಗಳಲ್ಲಿನ ವಿಶೇಷ ತಂತ್ರಜ್ಞಾನದಿಂದಾಗಿ ಅವು ಕ್ಷಾರೀಯ ಮಣ್ಣಿರುವ  ಮತ್ತು ಗಡಸು ನೀರಿನೊಂದಿಗೆ ಬೆಳೆಸುವ ಮಣ್ಣಿನಲ್ಲಿರುವ ಸಸ್ಯಗಳಿಂದ ಸುಲಭವಾಗಿ ಹೀರಲ್ಪಡುತ್ತವೆ. ಈ ಉತ್ಪನ್ನಗಳು ಲವಣಗಳು ಮತ್ತು ಭಾರ ಲೋಹಗಳಿಂದ ಮುಕ್ತವಾಗಿವೆ. ಇದು ಹನಿ ನೀರಾವರಿ ವ್ಯವಸ್ಥೆಯಲ್ಲಿ ಕಾರ್ಬೋನೇಟ್ಗಳನ್ನೂ ತಟಸ್ಥಗೊಳಿಸುತ್ತದೆ ಮತ್ತು ಆಗುವ ಅಡಚಣೆಯನ್ನು ತಡೆಯುತ್ತದೆ ಎಂದರು.

ಐಸಿಎಲ್ ನ ರಸಗೊಬ್ಬರವು ಗಡಸು ನೀರಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹನಿ ನೀರಾವರಿ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಡೆಯುತ್ತದೆ. ಪೋಷಕಾಂಶಗಳ ಲಭ್ಯತೆ ಹೆಚ್ಚಳ ಮಾಡುತ್ತದೆ. ನೀರಿನಲ್ಲಿ ಕರಗುವ ಸಾಮಥ್ಯ ಹೆಚ್ಚಿದೆ. ಹಾಗೂ ಪರಿಸರ ಸ್ನೇಹಿಯಾಗಿದೆ ಎಂದರು.

ಈ ರಸಗೊಬ್ಬರವು ಬೇರಿನ ಅಭಿವೃದ್ಧಿ ಹಾಗು ಬೆಳವಣಿಗೆಯನ್ನು ಪ್ರೋಚೋದಿಸುತ್ತದೆ. ಹೂವುಗಳು , ಬೀಜ /ಕಾಯಿಗಳ ರಚನೆಯನ್ನು ಪ್ರೋಚೋದಿಸುತ್ತದೆ . ಸಸ್ಯ ಉಸಿರಾಟ ರೂಪಾಂತರ ಗೊಳ್ಳುವದಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಕೋಶ ವಿಭಜನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಸಿಗಳ ಹುರುಪು ಹೆಚ್ಚಳ ಮಾಡುವುದಲ್ಲದೆ ರೋಗ ಪ್ರತಿರೋಧ ಶಕ್ತಿಯನ್ನು ಹೊಂದಿದೆ. ಹಣ್ಣಿನ ಗಾತ್ರ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಬೇರಿನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ. ಸಸ್ಯಗಳಲ್ಲಿ ಬೆಳೆಯುತ್ತಿರುವ ಬೇರಿನ ತುದಿಗಳನ್ನು ಸಕ್ರಿಯಗೊಳಿಸಲು ಅಗತ್ಯವಾಗಿದೆ ಎಂದರು.

ಪಾಲಿಸಲ್ಫೇಟ್ ಬಹುಪೋಷಕಾಂಶವುಳ್ಳ ಗೊಬ್ಬರವಾಗಿದೆ.  ಈ ಗೊಬ್ಬರವನ್ನು ನಾಟಿ ಮಾಡುವ ಸಂದರ್ಭದಲ್ಲಿ ಹಾಕಬಹುದು. ಆರಂಭದಲ್ಲಿಯೇ ಹಾಕುವುದರಿಂದ ಬಹುಕಾಲದವರೆಗೆ ಪೋಷಕಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಬೆಳೆಯ ಬೆಳವಣಿಗೆಯನ್ನು ಉತ್ತಮವಾಗಿರುತ್ತದೆ ಹಾಗೂ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

ಈ ಪಾಲಿಸಲ್ಫೇಟ್ ನ್ನು ಈಗಾಗಲೇ ಮುಂದುವರೆದ ದೇಶಗಳಾದ ಅಮೇರಿಕಾ, ಕೆನಾಡಾ, ಬ್ರಿಟನ್, ಇಸ್ರೇಲ್, ಮತ್ತು ಯುರೋಪ ದೇಶಗಳಲ್ಲಿ ಸಾವಯವ ಬೇಸಾಯದಲ್ಲಿ ಬಳಸಲು ಅನುಮೋದಿಸಲಾಗಿದೆ.. ಇದು ಎಲ್ಲಾ ಬೆಳೆಗಳಿಗೂ ಸೂಕ್ತವಾಗಿದೆ.  ಕೇವಲ ದ್ರಾಕ್ಷಿ ಬೆಳೆಯಷ್ಟೇ ಅಲ್ಲ, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳಿಗೂ ಈ ಪಾಲಿಸಲ್ಫೇಟ್ ನ್ನು ಕೊಡಬಹುದು.

ಫರ್ಟಿವೆಂಟ್ ಉತ್ಪನ್ನವು ಬೆಳೆಯ ಮೇಲೆ ಸಿಂಪರಣೆ ಮಾಡಿದ ನಂತರ ಸಮಾನಂತರವಾಗಿ ಎಲ್ಲಾ ಕಡೆ ಹರಡುತ್ತದೆ. ಹನಿಯಾಗಿ ಉಳಿಯದೆ ಗಿಡದ ಎಲ್ಲಾ ಎಳೆಗಳಲ್ಲಿಯೂ ಹರಡುತ್ತದೆ. ಇದರಿಂದಾಗಿ ಗಿಡಗಳಿಗೆ ಸರಿಯಾಗಿ ಪೋಷಕಾಂಶ ಸಿಗುತ್ತದೆ. ಫರ್ಟಿವೆಂಟ್ ಉತ್ಪನ್ನವನ್ನು ಸಿಂಪರಣೆ ಮಾಡಿದ ನಂತರ ಗಿಡಗಳಿಗೆ ಸರಿಯಾಗಿ ಪೋಷಕಾಂಶಗಳನ್ನು ಒದಗಿಸಿ ಇಳುವರಿ ಹೆಚ್ಚಿಸಲು ಸಹಾಯ ಮಾಡುತ್ತದೆ,  ದ್ರಾಕ್ಷಿಯಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಹಾಗೂ ದ್ರಾಕ್ಷಿಯ ಗಾತ್ರ ಹೆಚ್ಚಿಸಿ ಗೊಂಚಲಿನಲ್ಲಿರುವ ಎಲ್ಲಾ ದ್ರಾಕ್ಷಿಗಳು ಸಮಾನವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು.

ಸಿಂಪರಣೆ ವಿಧಾನ

ಟೊಮ್ಯಾಟೋ ತರಕಾರಿಗೆ ಸಿಂಪರಣೆ ಮಾಡುವಾಗ ಗೊಬ್ಬರವನ್ನು ಕಡ್ಡಾಯವಾಗಿ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರಸಬೇಕು.  ಕ್ಯಾಪ್ಸಿಕಂ ತರಕಾರಿಗೆ ಸಹ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರೆಸಿ ಸಿಂಪರಣೆ ಮಾಡಬೇಕು. ಹಣ್ಣುಗಳ ವಿಷಯಕ್ಕೆ ಬಂದಾಗ ಕಲ್ಲಂಗಡಿ ಮತ್ತು ಖರಬೂಜ ಬೆಳೆಯಲ್ಲಿ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರೆಸೆ ಬೆಳೆಯ ಮೇಲೆ ಸಿಂಪರಣೆ ಮಾಡಬೇಕು.

ಐಸಿಎಲ್ ಹತ್ತಿರ ನೀರಿನಲ್ಲಿ ಕರಗುವ ರಸಗೊಬ್ಬರವವಲ್ಲದೆ ಮಣ್ನಿನಲ್ಲಿ ಬೆರೆಸುವ ಗೊಬ್ಬರ ಸಹ ಇದೆ. ಅದರ ಹೆಸರು ಪಾಲಿಸಲ್ಫೇಟ್.

ಬೆಳೆಗಳಲ್ಲಿ ಈ ರಸಗೊಬ್ಬರದ ಶಿಫಾರಸ್ಸು ಪ್ರಮಾಣ

ಮೆಣಸಿನ ಕಾಯಿ, ಬೀನ್ಸ್ ಗೆ ಪ್ರತಿ ಎಕರೆಗೆ 50-75 ಕೆಜಿ ಗೊಬ್ಬರ ಸಾಕಾಗುತ್ತದೆ. ಟೊಮ್ಯಾಟೋ, ಈರುಳ್ಳಿ, ಶೇಂಗಾ (ನೆಲಗಡಲೆ)  ಬಳ್ಳೊಳ್ಳಿ, ಆಲೂಗಡ್ಡೆ, ಕಲ್ಲಂಗಡಿ, ಹತ್ತಿ ಹಾಗೂ ಹೂವಿನ ಬೆಳೆಗಳಿಗೆ 75 ರಿಂದ 100 ಕೆಜಿ ಪ್ರತಿ ಎಕರೆಗೆ ಬೇಕಾಗುತ್ತದೆ.

ಬಾಳೆ ಹಣ್ಣು ಪ್ರತಿ ಗಿಡಕ್ಕೆ 0-20-0.25 ಕೆಜಿ, ದಾಳೆಂಬೆಗೆ 0.5-1 ಕೆಜಿ ಪ್ರತಿ ಗಿಡಕ್ಕೆ, ಮಾವಿನ ಹಣ್ಣಿನ ಗಿಡಕ್ಕೆ 1 ರಿಂದ 1.50 ಕೆಜಿ, ಬೇಕಾಗುತ್ತದೆ. ರೈತರಿಗೆ ಭಾರವಾಗದಂತೆ 25 ಕೆಜಿಯ ಚೀಲಗಳನ್ನು ಮಾಡಲಾಗಿದೆ. ಸುಲಭವಾಗಿ ಸಾಗಾಟ ಮಾಡಬಹುದು ಎಂದರು.

ಈ ಸಂವಾದ ಕಾರ್ಯಕ್ರಮದಲ್ಲಿ ಐಸಿಎಲ್ ನ ಕ್ರಾಪ್ ಮ್ಯಾನೇಜರ್ ಡಾ. ಯೋಗೇಶ ಕದಮ್ ಉಪಸ್ಥಿತರಿದ್ದರು