News

ಡಿಸೆಂಬರ್ 14ರವರೆಗೆ ತೋಟಗಾರಿಕೆ ಫಸಲು ಇ-ಹರಾಜು

09 December, 2020 1:19 PM IST By:

2020-21 ನೇ ಸಾಲಿನಲ್ಲಿ ಜಿಲ್ಲೆಯ ಹತ್ತಿಕುಣಿ ಮತ್ತು ನಾರಾಯಣಪುರ ತೋಟಗಾರಿಕೆ ಕ್ಷೇತ್ರಗಳ ಫಸಲು ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದ್ದು, ಇ-ಹರಾಜು ಡಿ. 14ರವರೆಗೆ ಬೆಳಿಗ್ಗೆ 10.30 ರಿಂದ 11 ಗಂಟೆಗೆ ಮುಕ್ತಾಯಗೊಳ್ಳುತ್ತದೆ.

ಇ-ಹರಾಜಿನಲ್ಲಿ ಭಾಗವಹಿಸುವವರು ತೋಟಗಾರಿಕೆ ಕ್ಷೇತ್ರಕ್ಕೆ ಇ-ಪೋರ್ಟಲ್ ಖಾತೆಯಲ್ಲಿ ಠೇವಣಿ ಇಡಬೇಕು ಠೇವಣಿ ಮೊತ್ತವನ್ನು ಜಾಲತಾಣದ ಮೂಲಕ ಅಥವಾ ಚಲನ್ ತೆಗೆದುಕೊಂಡು ತುಂಬುವುದು.

ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಹತ್ತಿಕುಣಿ 99865 162251, ತೋಟಗಾರಿಕೆ ಸಹಾಯಕರು (ರಾಜ್ಯ ವಲಯ) ಹತ್ತಿಕುಣಿ 91104 84899 ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ನಾರಾಯಣಪುರ 96205 78551 ತೋಟಗಾರಿಕೆ ಸಹಾಯಕರು (ರಾಜ್ಯ ವಲಯ) ನಾರಾಯಣಪುರ 98801 39467 ಅವರನ್ನು ಸಂಪರ್ಕಿಸಬಹುದು.ಅಥವಾ www.eproc.karnataka.gov.in ವೆಬ್‍ಸೈಟ್ ಸಂಪರ್ಕಿಸಬಹುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.