News

ಸೆ. 2 ರಿಂದ 5 ರವರೆಗೆ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ- ಯೆಲ್ಲೋ, ಆರೇಂಜ್ ಅಲರ್ಟ್

02 September, 2020 9:01 AM IST By:

ಮುಂಗಾರು ಚುರುಕು ಗೊಂಡಿರುವುದರಿಂದ ದಕ್ಷಿಣ ಒಳ ನಾಡು ಹಾಗೂ ಕರಾವಳಿಯ ವಿವಿಧ  ಜಿಲ್ಲೆಗಳಲ್ಲಿ ಸೆ.2ರಿಂದ 5ರವರೆಗೆ ಭಾರಿ ಮಳೆ ಯಾಗುವ ಸಾಧ್ಯತೆ ಇದೆಯಿರುವುದರಿಂದ ಯೆಲ್ಲೋ ಹಾಗೂ ಆರೇಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ಬುಧವಾರ ದಂದು ಧಾರಾಕಾರ ಮಳೆಯಾಗುವ ನಿರೀಕ್ಷೆ ಇರುವುದರಿಂದ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ  ಸೆಪ್ಟೆಂಬರ್ 5 ರವರೆಗೆ ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆ ಸುರಿಯಬಹುದು.

ಚಿಕ್ಕಮಗಳೂರು, ಹಾಸನ,ಕೊಡಗು  ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೆ. 2 ರಂದು ಯೆಲ್ಲೋ ಅಲರ್ಟ್, ಸೆ 3 ರಂದು ಮತ್ತು 4 ಕ್ಕೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಸೆ. 5 ರಂದು ಯೆಲ್ಲೋ ಅಲರ್ಟ್  ಘೋಷಿಸಲಾಗಿದೆ.

ಮಳೆ-ಎಲ್ಲಿ, ಎಷ್ಟು?: ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ 9 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಆನೇಕಲ್, ಮಳವಳ್ಳಿ 7, ಚಾಮರಾಜನಗರ 6, ಮಂಡ್ಯ, ತಿಪಟೂರು 5, ಮಾಲೂರು, ಮದ್ದೂರು 4, ರಾಮನಗರ 3, ಶಿರಾ, ಕೊಳ್ಳೇಗಾಲ, ಬೆಂಗಳೂರು, ವಿರಾಜ ಪೇಟೆ 2, ತುಮಕೂರು, ಹೊಸಕೋಟೆ, ಬಂಗಾರಪೇಟೆ, ಗುಬ್ಬಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.