News

Good News ಶ್ರೀಗಂಧ ಬೆಳೆವ ರೈತರಿಗೆ ಕರ್ನಾಟಕ ಸರ್ಕಾರದಿಂದ ಗುಡ್‌ನ್ಯೂಸ್‌!

16 December, 2023 2:24 PM IST By: Hitesh
ಶ್ರೀಗಂಧದ ಘತವೈಭವಕ್ಕೆ ಮುಂದಾದ ಸರ್ಕಾರ

ಕರ್ನಾಟಕದ ಶ್ರೀಗಂಧದ ಮರವು ದೇಶದಲ್ಲೇ ಅತ್ಯುತ್ತಮ ಖ್ಯಾತಿಯನ್ನು ಗಳಿಸಿದೆ. ಇದೀಗ ಶ್ರೀಗಂಧದ (sandalwood farmers) ಮರವನ್ನು ಬೆಳೆಯುವ

ರೈತರಿಗೆ ಕರ್ನಾಟಕ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. 

ಭಾರತದಲ್ಲಿ ಶ್ರೀಗಂಧದ (sandalwood farmers) ಮರಕ್ಕೆ ತನ್ನದೇ ಖ್ಯಾತಿ ಇದೆ. ಅಲ್ಲದೇ ದೇಶ ವಿದೇಶಗಳಲ್ಲಿಯೂ ಕರ್ನಾಟಕದ ಶ್ರೀಗಂಧಕ್ಕೆ ಹೆಚ್ಚು ಬೇಡಿಕೆ ಇದೆ.

ಇದೀಗ ಶ್ರೀಗಂಧವನ್ನು ಬೆಳೆಯುವ ರೈತರಿಗೆ ರಾಜ್ಯ (Karnataka government) ಸರ್ಕಾರ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ.   

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಎಂ.ಬಿ ಪಾಟೀಲ (MB Patil) ಅವರು, ಶ್ರೀಗಂಧದ ನಾಡು ಕನ್ನಡ ನಾಡಿನ ಘತವೈಭವ

ಮರುಕಳಿಸಲು ಸರ್ಕಾರ ಕಾರ್ಯ ಯೋಜನೆ ರೂಪಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಅಲ್ಲದೇ ಕರ್ನಾಟಕದಲ್ಲಿ ಶ್ರೀಗಂಧದ (sandalwood) ಘತವೈಭವವನ್ನು ಮರುಕಳಿಸುವಂತೆ ಮಾಡುವ ಉದ್ದೇಶದಿಂದಾಗಿ ಮುಂದಿನ 5 ವರ್ಷಗಳ

ಅವಧಿಯಲ್ಲಿ 10,000 ದಿಂದ 15,000 ಎಕರೆಗಳಲ್ಲಿ ಶ್ರೀಗಂಧದ (sandalwood) ಮರಗಳನ್ನು ಬೆಳೆಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಈ ರೀತಿ ಮಾಡುವುದರಿಂದ ರೈತರಿಗೆ ಆಕರ್ಷಕ ಆದಾಯ ಸಿಗಲಿದೆ ಎಂದಿದ್ದಾರೆ. 

ಅಲ್ಲದೇ ಕೆಎಸ್‌ಡಿಎಲ್ (KSDL) ವತಿಯಿಂದ ರೈತರ ಪಾಲುದಾರಿಕೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ

ಪ್ರತಿ ವರ್ಷ 1000ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ ಗಂಧದ ಮರಗಳನ್ನು ಬೆಳೆಸುವ ಯೋಜನೆಯನ್ನು ರೂಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ. 

ಶ್ರೀಗಂಧದಿಂದ ರೈತರೂ ಕೋಟ್ಯಾಂತರ ರೂ. ಗಳಿಸಬಹುದು

ಶ್ರೀಗಂಧದವನ್ನು (sandalwood) ಬೆಳೆಯುವುದರಿಂದ ರೈತರು ಸಹ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸಬಹುದು ಎನ್ನುತ್ತಾರೆ

ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು. 

ಶ್ರೀಗಂಧ (sandalwood) ಕರ್ನಾಟಕದ ಹೊನ್ನಕಳಸ, ನಮ್ಮ ಕರ್ನಾಟಕದ (Sandalwood of Karnataka) ಶ್ರೀಗಂಧಕ್ಕೆ ದೇಶ

ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ.  ಶ್ರೀಗಂಧದ (sandalwood) ಸಸಿಗಳನ್ನು ನೆಟ್ಟು ಅದರಿಂದ ದೀರ್ಘಕಾಲದಲ್ಲಿ

ಭಾರೀ ಆದಾಯವನ್ನು ಗಳಿಸಬಹುದು ಎನ್ನುತ್ತಾರೆ ಅವರು.  

ಕವಿತಾ ಮಿಶ್ರಾ (Kavita Mishra) ಅವರು ಈಗಾಗಲೇ ಶ್ರೀಗಂಧವನ್ನು ಬೆಳೆದು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಇನ್ನು ಸರ್ಕಾರವು ಈಗ ತೆಗೆದುಕೊಂಡಿರುವ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರು

ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಮಾರ್ಗ ಕಲ್ಪಿಸಿದಂತಾಗಿದೆ.