News

ರೈತರ ದಿನಾಚರಣೆಯ ಅಂಗವಾಗಿ ರೈತರನ್ನು ಗೌರವಿಸಿ ಅವರಿಗೆ ಟ್ರ್ಯಾಕ್ಟರ್ ವಿತರಿಸಿದ ಸಿಎಂ ಯೋಗಿ ಆದಿತ್ಯನಾಥ್

27 December, 2020 8:59 AM IST By:

ರೈತರ ದಿನಾಚರಣೆ ಅಂಗವಾಗಿ, ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಅಂತಹ ಚೌಧರಿ ಚರಣ್ ಸಿಂಗ್ ಅವರ 118ನೇ ಯ ಜನ್ಮದಿನಾಚರಣೆಯ ಅಂಗವಾಗಿ ನಡೆದಂತಹ ರೈತ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಅಂತಹ ಸಿಎಂ ಯೋಗಿ ಆದಿತ್ಯನಾಥ ನವರು 24 ಜನರನ್ನು ಸನ್ಮಾನಿಸಿ ಗೌರವಿಸಿದರು, ಇದರೊಡನೆ ಹನ್ನೊಂದು ರೈತರಿಗೆ ಉಚಿತ ಟ್ರ್ಯಾಕ್ಟರ್ ಗಳನ್ನು ಕೂಡ ವಿತರಿಸಿದರು. ಹಾಗೂ ಮೂರು ಜನ ಪ್ರಗತಿಪರ ಮಹಿಳಾ ರೈತರಿಗೆ ತಮ್ಮ ಅತ್ಯುತ್ತಮ ಕೆಲಸಗಳಿಗಾಗಿ ತಲಾ 75 ಸಾವಿರ ರೂಪಾಯಿಗಳನ್ನು ಕೂಡ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಂತಹ ಸಿಎಂ ಯೋಗಿ ಆದಿತ್ಯನಾಥ ನವರು" ಪ್ರಧಾನಮಂತ್ರಿ ಅವರು ಕೃಷಿಯ ಮಸೂದೆಗಳ ಮೂಲಕ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಿದ್ದಾರೆ, ಹಾಗೂ ರೈತರ ಜೀವನದಲ್ಲಿ ಸಮೃದ್ಧಿಯನ್ನು ತರಲು ಯೋಜನೆಗಳನ್ನು ಪರಿಚಯಿಸಿದ್ದಾರೆ" ಎಂದು ಹೇಳಿದರು.

 ಹಾಗೂ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬದ ದಿನದಂದು ರಾಮಲಾ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಮೂಲಕ ರೈತರಿಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದಾರೆ.