News

ಉಚಿತ ರೇಷನ್‌.. ಇತ್ತೀಚಿನ ಹೊಸ ನಿಯಮಗಳನ್ನು ತಿಳಿಯಿರಿ

27 September, 2022 1:59 PM IST By: Maltesh
Free Ration.. Know Latest New Rules

ಪ್ರಸ್ತುತ ದೇಶಾದ್ಯಂತ ಉಚಿತ ಪಡಿತರ ನೀಡಲಾಗುತ್ತಿದ್ದು, ಈ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಉಚಿತ ಪಡಿತರ ಯೋಜನೆಯಲ್ಲಿ, ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಅನರ್ಹರನ್ನು ಗುರುತಿಸಲು ಶಿಸ್ತುಬದ್ಧ ಕ್ರಮಕ್ಕೆ ಸೂಚಿಸಿದೆ.

ಈ ರಾಜ್ಯಕ್ಕೆ ಮತ್ತೇ ಯೆಲ್ಲೋ ಅಲರ್ಟ್‌ ನೀಡಿದ ಹವಾಮಾನ ಇಲಾಖೆ..ಭಾರೀ ಮಳೆ ಸಾಧ್ಯತೆ

ಕೇಂದ್ರ ಸರ್ಕಾರ ಪಡಿತರ ಚೀಟಿ ರದ್ದುಗೊಳಿಸಲು ಕೆಲ ನಿಯಮಗಳನ್ನು ಮಾಡಿದೆ. ಈ ನಿಯಮಗಳ ಅಡಿಯಲ್ಲಿ ನೀವು ಹೊಂದಿಕೆಯಾಗದಿದ್ದರೆ, ನಿಮ್ಮ ಪಡಿತರ ಚೀಟಿಯನ್ನು ಸಹ ರದ್ದುಗೊಳಿಸಲಾಗುತ್ತದೆ. ಈ ಕಾರಣಕ್ಕಾಗಿ, ಈ ಸಮಯದಲ್ಲಿ ಸರ್ಕಾರವು ಅಂತಹವರಿಗೆ ಮನವಿ ಮಾಡುತ್ತಿದೆ, ಯಾರೇ ಅನರ್ಹರು, ಅವರು ತಮ್ಮ ಪಡಿತರ ಚೀಟಿಯನ್ನು ತಾವಾಗಿಯೇ ಬಂದು ರದ್ದುಗೊಳಿಸಬೇಕು.

ಹೊಸ ನಿಯಮಗಳೇನು ?

ನಿಮ್ಮ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್/ಫ್ಲಾಟ್ ಅಥವಾ ಮನೆ, ನಾಲ್ಕು ಚಕ್ರ ವಾಹನ/ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ, ಕುಟುಂಬದ ಆದಾಯ ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ವಾರ್ಷಿಕ ಮೂರು ಲಕ್ಷ ಇದ್ದರೆ ಅಂತಹವರು ಈ ಯೋಜನೆಗೆ ಅನರ್ಹರಲ್ಲ. ಅವರು ಖುದ್ದಾಗಿ  ಪಡಿತರ ಚೀಟಿಯನ್ನು ಒಪ್ಪಿಸಬೇಕು..

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ, ಇಂದಿನ ಬೆಲೆ ಎಷ್ಟೇಂದು ಮನೆಯಲ್ಲಿ ಕುಳಿತು ತಿಳಿಯಿರಿ

ಸರ್ಕಾರದ ನಿಯಮಗಳ ಪ್ರಕಾರ, ಪಡಿತರ ಚೀಟಿದಾರರು ಕಾರ್ಡ್ ಅನ್ನು ಒಪ್ಪಿಸದಿದ್ದರೆ, ತನಿಖೆಯ ನಂತರ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ. ಇದರೊಂದಿಗೆ ಆ ಕುಟುಂಬದ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬಹುದು. ಅಷ್ಟೇ ಅಲ್ಲ ಅಂತಹವರಿಂದ ರೇಷನ್ ತೆಗೆದುಕೊಳ್ಳುತ್ತಿರುವುದರಿಂದ ಪಡಿತರವನ್ನೂ ವಸೂಲಿ ಮಾಡಲಾಗುತ್ತದೆ.

ಹಣದಿಂದ ನನ್ನ ನೆಮ್ಮದಿ ಪೂರ್ಣ ಹಾಳಾಗಿದೆ: ಕೇರಳ 25 ಕೋಟಿ ಲಾಟರಿ ಗೆದ್ದ ಅನೂಪ್‌

ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಹೆಚ್ಚಿಸಬಹುದು

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಪ್ರಸ್ತುತ ಬಡವರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದೆ ಮತ್ತು ಸರ್ಕಾರವು ಮುಂದಿನ 3 ರಿಂದ 6 ತಿಂಗಳವರೆಗೆ ಅದನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ನಂಬಲಾಗಿದೆ