News

Farmers ಕೇಂದ್ರ ಸರ್ಕಾರದಿಂದ ಬಂಪರ್‌: ರೈತರಿಗೆ ವಿಶಿಷ್ಟ ಪ್ಯಾಕೇಜ್ ಘೋಷಣೆ!

29 June, 2023 11:51 AM IST By: Hitesh
Bumper from the central government: announcement of a unique package for farmers!

ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ರೈತರಿಗೆ ವಿಶಿಷ್ಟ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಇದರಿಂದ ರೈತರಿಗೆ ಭರ್ಜರಿ ಸಹಾಯವಾಗಲಿದೆ.

ರೈತರ ಯೋಗಕ್ಷೇಮವನ್ನು ಹೆಚ್ಚಿಸಲು, ಮಣ್ಣಿನ ಉತ್ಪಾದಕತೆಯನ್ನು ಪುನಶ್ಚೇತನಗೊಳಿಸಲು ಮತ್ತು ಆಹಾರ ಭದ್ರತೆ ಮತ್ತು ಪರಿಸರ ಸುಸ್ಥಿರತೆಯನ್ನು

ಖಚಿತಪಡಿಸಿಕೊಳ್ಳಲು ಸಿಸಿಇಎ ಹಲವು ಯೋಜನೆಗಳನ್ನು ಅನುಮೋದಿಸಿದೆ.

ಸಿಸಿಇಎ ಯುರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯನ್ನು ಅನುಮೋದಿಸಿದೆ; 3 ವರ್ಷಗಳವರೆಗೆ (2022-23 ರಿಂದ 2024-25) ಯೂರಿಯಾ

ಸಬ್ಸಿಡಿಗಾಗಿ 3,68,676.7 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದೆ.

ತ್ಯಾಜ್ಯದಿಂದ ಸಂಪತ್ತು ಮಾದರಿಯ ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎ) ಯೋಜನೆಗೆ 1451 ಕೋಟಿ ರೂ.ಅನುಮೋದನೆ;

ಗೋಬರ್ಧನ್ ಘಟಕಗಳ ತ್ಯಾಜ್ಯ ಮತ್ತು ಸಾವಯವ ಗೊಬ್ಬರವನ್ನು ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಪರಿಸರವನ್ನು ಸುರಕ್ಷಿತ ಮತ್ತು ಸ್ವಚ್ಛವಾಗಿಡಲು ಬಳಸಲಾಗುವುದು ಎಂದು ಹೇಳಲಾಗಿದೆ.  

ಮಣ್ಣಿನ ಸಲ್ಫರ್ ಕೊರತೆಯನ್ನು ನಿವಾರಿಸಲು ಮತ್ತು ರೈತರ ಕೃಷಿ ವೆಚ್ಚವನ್ನು ಉಳಿಸಲು ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನ) ಪರಿಚಯಿಸಲಾಗಿದೆ.  

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ)

ರೈತರಿಗಾಗಿ ಒಟ್ಟು 3,70,128.7 ಕೋಟಿ ರೂ.ಗಳ ವಿನೂತನ ಯೋಜನೆಗಳ ವಿಶಿಷ್ಟ ಪ್ಯಾಕೇಜ್‌ಗೆ ಗುರುವಾರ ಅನುಮೋದನೆ ನೀಡಲಾಗಿದೆ.

ಯೋಜನೆಗಳ ಪ್ಯಾಕೇಜ್‌ ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ ರೈತರ ಒಟ್ಟಾರೆ ಯೋಗಕ್ಷೇಮ ಮತ್ತು ಆರ್ಥಿಕ ಸುಧಾರಣೆಯನ್ನು ಕೇಂದ್ರೀಕರಿಸುತ್ತದೆ.

ಈ ಉಪಕ್ರಮಗಳು ರೈತರ ಆದಾಯವನ್ನು ಹೆಚ್ಚಿಸುತ್ತವೆ. ಸಹಜ/ಸಾವಯವ ಕೃಷಿಯನ್ನು ಬಲಪಡಿಸುತ್ತವೆ.

ಮಣ್ಣಿನ ಉತ್ಪಾದಕತೆಯನ್ನು ಪುನರುಜ್ಜೀವನಗೊಳಿಸುತ್ತವೆ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುತ್ತವೆ.

45 ಕೆ.ಜಿ ಚೀಲದ ಯೂರಿಯಾವು ತೆರಿಗೆಗಳು ಮತ್ತು ಬೇವಿನ ಲೇಪನ ಶುಲ್ಕಗಳನ್ನು ಹೊರತುಪಡಿಸಿ, 242 ರೂ.

ಬೆಲೆಯಲ್ಲಿಯೇ ರೈತರಿಗೆ ನಿರಂತರವಾಗಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯನ್ನು ಸಿಸಿಇಎ ಅನುಮೋದನೆ ನೀಡಿದೆ.

ಈ ಅನುಮೋದಿತ ಪ್ಯಾಕೇಜ್‌ನಲ್ಲಿ, ಮೂರು ವರ್ಷಗಳವರೆಗೆ (2022-23 ರಿಂದ 2024-25) ಯೂರಿಯಾ ಸಬ್ಸಿಡಿಗಾಗಿ 3,68,676.7 ಕೋಟಿ ರೂ. ಒದಗಿಸಲಾಗುವುದು.

ಇದು 2023-24ರ ಮುಂಗಾರು ಹಂಗಾಮಿಗೆ ಇತ್ತೀಚೆಗೆ ಅನುಮೋದಿಸಲಾದ 38,000 ಕೋಟಿ ರೂ.ಗಳ ಪೋಷಕಾಂಶ ಆಧಾರಿತ ಸಬ್ಸಿಡಿಯನ್ನು ಹೊರತುಪಡಿಸಿದೆ.

ರೈತರು ಯೂರಿಯಾ ಖರೀದಿಗೆ ಹೆಚ್ಚುವರಿ ಖರ್ಚು ಮಾಡಬೇಕಾಗಿಲ್ಲ ಮತ್ತು ಇದು ಅವರ ಕೃಷಿ ವೆಚ್ಚವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. 

ಪ್ರಸ್ತುತ, ಪ್ರತಿ 45 ಕೆಜಿ ಚೀಲದ ಯೂರಿಯಾದ ಬೆಲೆ ರೂ 242 ಆಗಿದೆ (ಬೇವಿನ ಲೇಪನದ ಶುಲ್ಕಗಳು ಮತ್ತು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ),

ಆದರೆ ಚೀಲದ ನೈಜ ಬೆಲೆ ಸುಮಾರು ರೂ 2200. ಈ ಯೋಜನೆಗೆ ಬಜೆಟ್ ಬೆಂಬಲದ ಮೂಲಕ ಭಾರತ ಸರ್ಕಾರವು ಸಂಪೂರ್ಣವಾಗಿ ಹಣಕಾಸು ಒದಗಿಸುತ್ತಿದೆ.

ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯು ಸ್ವಾವಲಂಬನೆಯ ಮಟ್ಟವನ್ನು ತಲುಪಲು ಯೂರಿಯಾದ ಸ್ಥಳೀಯ ಉತ್ಪಾದನೆಯನ್ನು ಗರಿಷ್ಠಗೊಳಿಸುತ್ತದೆ.

ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಹೆಚ್ಚಿದ ಕಚ್ಚಾ ವಸ್ತುಗಳ ಬೆಲೆಗಳಿಂದಾಗಿ,

ಗೊಬ್ಬರದ ಬೆಲೆಗಳು ವರ್ಷ ವರ್ಷವೂ ಜಾಗತಿಕವಾಗಿ ಬಹುಪಟ್ಟು ಹೆಚ್ಚಾಗುತ್ತಿವೆ.

ಆದರೆ ಭಾರತ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ತೀವ್ರವಾದ ರಸಗೊಬ್ಬರ ಬೆಲೆ ಏರಿಕೆಯಿಂದ ತನ್ನ ರೈತರನ್ನು ರಕ್ಷಿಸಿದೆ.

ನಮ್ಮ ರೈತರನ್ನು ರಕ್ಷಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು 2014-15 ರಲ್ಲಿ 73,067 ಕೋಟಿ ರೂ.ಗಳಿಂದ 2022-23 ರಲ್ಲಿ 2,54,799 ಕೋಟಿ ರೂ.ಗಳಿಗೆ ಹೆಚ್ಚಿಸಿದೆ.

ನ್ಯಾನೋ ಯೂರಿಯಾ ಪೂರಕ ವ್ಯವಸ್ಥೆಗೆ ಬಲ!

2025-26 ರ ವೇಳೆಗೆ, 195 ಎಲ್‌ ಎಂ ಟಿ ಸಾಂಪ್ರದಾಯಿಕ ಯೂರಿಯಾಕ್ಕೆ ಸಮನಾಗಿರುವ 44 ಕೋಟಿ ಬಾಟಲಿಗಳ ಉತ್ಪಾದನಾ

ಸಾಮರ್ಥ್ಯದ ಎಂಟು ನ್ಯಾನೋ ಯೂರಿಯಾ ಘಟಕಗಳನ್ನು ಆರಂಭಿಸಲಾಗುತ್ತದೆ.

ನ್ಯಾನೊ ರಸಗೊಬ್ಬರವು ನಿಯಂತ್ರಿತ ರೀತಿಯಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಹೆಚ್ಚಿನ ಪೋಷಕಾಂಶಗಳ ಬಳಕೆಯ

ದಕ್ಷತೆಗೆ ಕೊಡುಗೆ ನೀಡುತ್ತದೆ ಮತ್ತು ರೈತರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ನ್ಯಾನೋ ಯೂರಿಯಾದ ಬಳಕೆಯು ಬೆಳೆ ಇಳುವರಿಯಲ್ಲಿ ಹೆಚ್ಚಳವನ್ನು ತೋರಿಸಿದೆ.

2025-26 ರ ವೇಳೆಗೆ ದೇಶವು ಯೂರಿಯಾದಲ್ಲಿ ಆತ್ಮನಿರ್ಭರ!

ರಾಜಸ್ಥಾನದ ಕೋಟಾದಲ್ಲಿರುವ ಚಂಬಲ್ ಫರ್ಟಿ ಲಿಮಿಟೆಡ್‌ನಲ್ಲಿ 6 ಯೂರಿಯಾ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು ಪುನಶ್ಚೇತನ,ಪಶ್ಚಿಮ ಬಂಗಾಳದ ಪನಗರ್ ನಲ್ಲಿರುವ  ಮ್ಯಾಟಿಕ್ಸ್ ಲಿಮಿಟೆಡ್.

ತೆಲಂಗಾಣ ರಾಮಗುಂಡಂ, ಉತ್ತರ ಪ್ರದೇಶದ ಗೋರಖ್‌ಪುರ, ಜಾರ್ಖಂಡ್ ನ ಸಿಂಡ್ರಿ ಮತ್ತು ಬಿಹಾರದ ಬರೌನಿ ಘಟಕಗಳು

2018 ರಿಂದ ಯೂರಿಯಾ ಉತ್ಪಾದನೆ ಮತ್ತು ಲಭ್ಯತೆಯ ವಿಷಯದಲ್ಲಿ ದೇಶವನ್ನು ಆತ್ಮನಿರ್ಭರ್ ಮಾಡಲು ಸಹಾಯ ಮಾಡುತ್ತಿದೆ.

ಯೂರಿಯಾದ ಸ್ಥಳೀಯ ಉತ್ಪಾದನೆಯು 2014-15ರಲ್ಲಿದ್ದ 225 ಎಲ್‌ಎಂಟಿಯಿಂದ 2021-22ರಲ್ಲಿ 250 ಎಲ್‌ಎಂಟಿಗಳಿಗೆ ಏರಿಕೆಯಾಗಿದೆ.

2022-23ರಲ್ಲಿ ಉತ್ಪಾದನಾ ಸಾಮರ್ಥ್ಯ 284 ಎಲ್‌ಎಂಟಿಗೆ ಏರಿಕೆಯಾಗಿದೆ.

ನ್ಯಾನೋ ಯೂರಿಯಾ ಘಟಕಗಳ ಜೊತೆಗೆ ಇವುಗಳು ಯೂರಿಯಾದಲ್ಲಿನ ನಮ್ಮ

ಪ್ರಸ್ತುತ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ಅಂತಿಮವಾಗಿ 2025-26 ರ ವೇಳೆಗೆ ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡುತ್ತವೆ.

ಭೂತಾಯಿಯ ಪುನಃಸ್ಥಾಪನೆ, ಜಾಗೃತಿ ಮೂಡಿಸುವಿಕೆ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮ (ಪಿಎಂ ಪ್ರಣಾಮ್)

ರಾಸಾಯನಿಕ ಗೊಬ್ಬರಗಳ ಸಮತೋಲಿತ / ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಮತ್ತು ಕೃಷಿಯಲ್ಲಿ ಹೆಚ್ಚು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಸಹಜ / ಸಾವಯವ ಕೃಷಿ, ಪರ್ಯಾಯ ರಸಗೊಬ್ಬರಗಳು, ನ್ಯಾನೋ ರಸಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳಂತಹ ನಾವೀನ್ಯತೆಗಳನ್ನು ಉತ್ತೇಜಿಸುವುದು

ನಮ್ಮ ಭೂಮಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.

ಹೀಗಾಗಿ, ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು

“ಭೂ ತಾಯಿಯ ಮರುಸ್ಥಾಪನೆ, ಜಾಗೃತಿ ಮೂಡಿಸುವಿಕೆ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮ (ಪಿಎಂ ಪ್ರಣಾಮ್‌)” ಅನ್ನು ಪ್ರಾರಂಭಿಸಲಾಗುವುದು

ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು ಇದಕ್ಕೂ ಈಗ ಆದ್ಯತೆ ನೀಡಲಾಗುತ್ತಿದೆ.   

Image Courtesy: Pexels