News

ಕೆಲ್ಸಕ್ಕೆ ಈ ದಿನ ರಜಾ.. ಈ ಊರಿನಲ್ಲಿ ಎಮ್ಮೆ, ಹಸುಗಳಿಗೂ ಇದೆ ವೀಕೆಂಡ್‌ ರಜೆ!

29 May, 2023 12:42 PM IST By: Maltesh
Buffalo and cows also have a weekend holiday in this town!

ಕಛೇರಿ ನೌಕರರಿಗೆ ವಾರಕ್ಕೊಮ್ಮೆ ರಜೆ ನೀಡಬೇಕೆಂಬ ನಿಯಮ ಬಹಳ ಹಳೆಯದು, ಆದರೆ ಇಲ್ಲಿ ಪ್ರಾಣಿಗಳಿಗೆ ವಾರಕ್ಕೊಮ್ಮೆ ರಜೆ ನೀಡಲಾಗುತ್ತದೆ ಅಂದ್ರೆ ನೀವು ನಂಬಲೇಬೇಕು..ಯೆಸ್‌ ನೀವು ಇದನ್ನ ನಂಬಲೇಬೇಕು ಜಾರ್ಖಂಡ್‌ನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಸಂಪ್ರದಾಯ 100 ವರ್ಷದಿಂದ ನಡೆದುಕೊಂಡು ಬಂದಿದೆ. ಇಲ್ಲಿ ವಾರದ ಪ್ರತಿ ಭಾನುವಾರದಂದು ಎತ್ತುಗಳು ಮತ್ತು ಇತರ ಪಶುಪಾಲಕರು ಕೆಲಸ ಮಾಡುವುದಿಲ್ಲ. ಈ ದಿನ ಅವರಿಗೆ ಪೂರ್ಣ ದಿನ ರಜೆ ಸಿಗುತ್ತದೆ.

ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಬಂಧ ಅನಾದಿ ಕಾಲದಿಂದಲೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ಮನುಷ್ಯರು ವರ್ಷಗಳಿಂದ ಪ್ರಾಣಿಗಳ ಸೌಕರ್ಯ ಮತ್ತು ಅನುಕೂಲಕ್ಕಾಗಿ ಕಾಳಜಿ ವಹಿಸುತ್ತಿದ್ದಾರೆ. ಪ್ರಾಣಿಗಳ ಶ್ರಮ ಮತ್ತು ಸಹಕಾರದಿಂದಾಗಿ ಲೋಕದ ಜನರ ಹಸಿವು ನೀಗುತ್ತದೆ. ಕಷ್ಟಪಟ್ಟು ದುಡಿಯುವ ಈ ಪ್ರಾಣಿಗಳಿಗೆ ವಿಶ್ರಾಂತಿ ನೀಡಲು ಜಾರ್ಖಂಡ್‌ನ ಲತೇಹರ್ ನ ಕೆಲವು ಹಳ್ಳಿಗಳಲ್ಲಿ ಜನರು ಈ ನಿಯಮ ಮಾಡಿದ್ದಾರೆ.

ಪ್ರಾಣಿಗಳಿಗೆ ಒಂದು ದಿನ ರಜೆ ನೀಡಬೇಕೆಂಬ ನಿಯಮವಿದೆ. ಒಂದು ವಾರದಲ್ಲಿ ಅಂದರೆ, ಭಾನುವಾರದಂದು ಜಾನುವಾರಗಳಿಂದ ಯಾವುದೇ ಕೆಲಸಗಳನ್ನು ಮಾಡಿಸಲಾಗುವುದಿಲ್ಲ.  ಲತೇಹರ್ ಜಿಲ್ಲೆಯ ಹರ್ಖಾ, ಮೊಂಗರ್, ಲಾಲ್ಗಾಡಿ, ಪಕರ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ಜಾನುವಾರುಗಳಿಗೆ ರಜೆ ನೀಡುವ ಸಂಪ್ರದಾಯ ಚಾಲ್ತಿಯಲ್ಲಿದೆ.

ತಮ್ಮ ಪೂರ್ವಜರು ಮಾಡಿದ ನಿಯಮಗಳು ಸಮಂಜಸವೆಂದು ಗ್ರಾಮಸ್ಥರು ಇಂದಿಗೂ ನಂಬುತ್ತಾರೆ.  ಏಕೆಂದರೆ ಮನುಷ್ಯರಿಗೆ ವಿಶ್ರಾಂತಿ ಎಷ್ಟು ಮುಖ್ಯವೋ ಹಾಗೆಯೇ ಪ್ರಾಣಿಗಳಿಗೆ ಕೂಡ ವಿಶ್ರಾಂತಿ ಅಷ್ಟೇ ಮುಖ್ಯವಾದದ್ದು.

ತಮ್ಮ ಗ್ರಾಮದಲ್ಲಿ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.  ಮನುಷ್ಯರಿಗೆ ವಿಶ್ರಾಂತಿ ಬೇಕು, ಜಾನುವಾರುಗಳಿಗೂ ವಿಶ್ರಾಂತಿ ಬೇಕು. ಈ ಕಾರಣಕ್ಕಾಗಿ ಜಾನುವಾರುಗಳಿಗೆ ವಾರಕ್ಕೊಮ್ಮೆ ರಜೆ ನೀಡುತ್ತೇವೆ. ಲತೇಹರ್ ಜಿಲ್ಲಾ ಕೌನ್ಸಿಲ್ ಸದಸ್ಯ, ಪ್ರಾಣಿ ಪ್ರೇಮಿ ವಿನೋದ್ ಓರಾನ್ ಮಾತನಾಡಿ, ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಪೂರಕವಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಆದ್ದರಿಂದಲೇ ಪೂರ್ವಜರು ಜಾನುವಾರುಗಳಿಗೆ ವಾರಕ್ಕೆ ಒಂದು ದಿನವಾದರೂ ರಜೆ ನೀಡಬೇಕು ಎಂಬ ನಿಯಮವನ್ನು ರೂಪಿಸಿದ್ದರು. ಈ ಸಂಪ್ರದಾಯವು ಬಹಳ ವಿಶಿಷ್ಟವಾಗಿದೆ.

ಮನುಷ್ಯರಂತೆ ಪ್ರಾಣಿಗಳಿಗೂ ವಿಶ್ರಾಂತಿ ಬೇಕು, ಏಕೆಂದರೆ ಒತ್ತಡದಿಂದ ಮನುಷ್ಯರು ಅನಾರೋಗ್ಯಕ್ಕೆ ಒಳಗಾಗುವಂತೆ ಪ್ರಾಣಿಗಳು ಸಹ ಒತ್ತಡದಿಂದ ಅನಾರೋಗ್ಯಕ್ಕೆ ಒಳಗಾಗುತ್ತವೆ. ಆದ್ದರಿಂದಲೇ ಈ ಸಂಪ್ರದಾಯ ಬಹಳ ಮೆಚ್ಚುವಂತದ್ದು. ಭಾನುವಾರದಂದು ಗ್ರಾಮೀಣ ಪ್ರದೇಶದಲ್ಲಿ ಪ್ರಾಣಿಗಳಿಗೆ ರಜೆ ಸಿಗುತ್ತದೆ.

ಗ್ರಾಮಸ್ಥರು ಹೇಳುವಂತೆ 10 ದಶಕಗಳ ಹಿಂದೆ ಉಳುಮೆ ಮಾಡುವಾಗ ಎತ್ತು ಸಾವನ್ನಪ್ಪಿತ್ತು. ಎತ್ತು ತುಂಬಾ ಸುಸ್ತಾಗಿದ್ದ ಕಾರಣ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಆದ್ದರಿಂದ ಒಂದು ದಿನ ಪ್ರಾಣಿಗಳು ಮತ್ತು ದನಗಳನ್ನು ಕೆಲಸಕ್ಕೆ ಬಳಸುವುದಿಲ್ಲ ಎಂದು ಪಂಚಾಯಿತಿಯಲ್ಲಿ ಸಾಮೂಹಿಕವಾಗಿ ನಿರ್ಧರಿಸಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರಿದಿದೆ.