News

ಅಟಲ್ ಬಿಹಾರಿ ವಾಜಪೇಯಿ ಅವರ ಅದ್ಭುತ ಮಾತುಗಳು

25 December, 2020 3:57 PM IST By:

ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಅಜಾತಶತ್ರು ಎಂದೇ ಖ್ಯಾತಿಯಾಗಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ನಾವು ಅವರ ಅನೇಕ ಮಾತುಗಳನ್ನು ನೆನಪಿಸಿಕೊಳ್ಳೋಣ, ಹಾಗು ಅದರಿಂದ ಸ್ಪೂರ್ತಿಗೊಂಡು ನಮ್ಮ ಹೊಸವರ್ಷವನ್ನು ಪ್ರಾರಂಭಿಸೋಣ.

-" ನಾನು ಯಾವತ್ತು ಆಶ್ವಾಸನೆ ಇಟ್ಟುಕೊಂಡು ಬಂದಿಲ್ಲ, ಗುರಿ ಇಟ್ಟುಕೊಂಡು ಬಂದಿದ್ದೇನೆ"
-" ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಬರುವುದಿಲ್ಲ, ನಾನು ಚಿಟಿಕೆ ಹೊಡೆಯುತ್ತೇನೆ ಬಿಡಿ"

-" ಸಾವಿನ ಆಯಸ್ಸು ಆದರೂ ಎಷ್ಟು? ಎರಡು ಕ್ಷಣಗಳಿಲ್ಲ, ಜೀವನ ಪಯಣ ಇಂದು-ನಿನ್ನೆಯದಲ್ಲ"
" ಎಲ್ಲವನ್ನು ಪಣಕ್ಕಿಟ್ಟ ಆಗಿದೆ, ಇನ್ನು ನಿಲ್ಲುವುದಕ್ಕೆ ಆಗಲ್ಲ, ಮುರಿದು ಹೋಗಬಲ್ಲೆ, ಆದರೆ ಮಣಿಯುವುದಕ್ಕಾಗುವುದಿಲ್ಲ".

ಹೀಗೆ ವಾಜಪೇಯಿ ಅವರ ಮಾತುಗಳು ಪ್ರತಿಯೊಬ್ಬರ ಮನಮುಟ್ಟುವಂತೆ ಇವೆ, ಇಂದಿನ ಯುವಪೀಳಿಗೆಗೆ ಇವು ಮುಂದಿನ ಭವಿಷ್ಯವನ್ನು ತೋರಬಲ್ಲವು ಹಾಗಾಗಿ ಇವರ ಮಾತುಗಳನ್ನು ಮನದಲ್ಲಿಟ್ಟುಕೊಂಡು ನಮ್ಮ ಮುಂದಿನ ವರ್ಷ ಒಂದು ಶುಭಕರವಾಗಿರಲಿ ಎಂದು ಆಶಿಸುತ್ತಾ ಹೊಸವರ್ಷಕ್ಕೆ ದಾಪುಗಾಲಿಡೋನ.