News

ಬೆಂಗಳೂರು ಜಿಕೆವಿಕೆಯಲ್ಲಿ ನವೆಂಬರ್‌ 3ರಿಂದ ಬೃಹತ್‌ ಕೃಷಿ ಮೇಳ! ಏನೇನಿರಲಿದೆ ಗೊತ್ತೆ?

15 October, 2022 2:18 PM IST By: KJ Staff
Big Agricultural Fair from November 3 at Bangalore GKVK

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್‌ 3ರಿಂದ ನವೆಂಬರ್‌ 6ರ ವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ)ಯ ಆವರಣದಲ್ಲಿ ಕೃಷಿ ಮೇಳ ನಡೆಯಲಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಒಟ್ಟು 800 ಮಳಿಗೆಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷಿ ವಿವಿಯ ಕುಲಪತಿ ಡಾ.ಕೆ.ಸಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಇದನ್ನು ಓದಿರಿ: ಲಂಪಿ ಚರ್ಮರೋಗ ನಿರ್ವಹಣೆಗಾಗಿ 13 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶ

ಇದು ಬೃಹತ್‌ ಕೃಷಿ ಮೇಳವಾಗಿದ್ದು, ರೈತ ಸಮುದಾಯದ ಅನುಕೂಲಕ್ಕಾಗಿ ಕೃಷಿ ಮತ್ತು ಸಂಬಂಧಿತ ಪ್ರದೇಶಗಳ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಕೃಷಿ ವಸ್ತುಪ್ರದರ್ಶನವನ್ನು ನಡೆಸಲಾಗುತ್ತದೆ.

ಮೇಳದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಏಜೆನ್ಸಿಗಳು, ಪ್ರೀಮಿಯರ್ ಸೀಡ್ ಕಂಪನಿಗಳು, ಕೃಷಿ ಯಂತ್ರೋಪಕರಣ ತಯಾರಕರು, ಪಶುಸಂಗೋಪನಾ ವಲಯ, ಕೃಷಿ-ಉದ್ಯಮಿಗಳು, ಕೃಷಿಗೆ ಸಂಬಂಧಿಸಿದ ಪ್ರಕಾಶಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ.

ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಬೃಹತ್‌ ಮತ್ತು ಸಣ್ಣ ಗಾತ್ರದ ಕೃಷಿ ಯಂತ್ರೋಪಕರಣದ ತಯಾರಕರು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಅಲ್ಲದೇ ಮೇಳಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ರಾಜ್ಯಗಳಿಂದಲೂ ರೈತರು ಭೇಟಿ ನೀಡಲಿದ್ದಾರೆ.

ಇನ್ನಷ್ಟು ಓದಿರಿ: ಗಮನಿಸಿ: 8.83 ಲಕ್ಷ ರೈತರ ಮುಂಗಾರು ಹಂಗಾಮಿನ ಬೆಳೆಹಾನಿಗೆ ₹947.8 ಕೋಟಿ ಪರಿಹಾರ-ಬಿ.ಸಿ.ಪಾಟೀಲ್‌

ಅಂದಾಜಿನ ಪ್ರಕಾರ, 2019ರಲ್ಲಿ 12 ಲಕ್ಷಕ್ಕೂ ಹೆಚ್ಚು ರೈತರು ಕೃಷಿಮೇಳಕ್ಕೆ ಭೇಟಿ ನೀಡಿದ್ದಾರೆ ಮತ್ತು ಪ್ರದರ್ಶನಕ್ಕಾಗಿ 700 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಪ್ರಸಕ್ತ ಸಾಲಿನ ಕೃಷಿ ಮೇಳವು ಕಳೆದ ಮೇಳದ ದಾಖಲೆಗಳನ್ನು ದಾಟಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಬಾರಿಯ ಕೃಷಿ ಮೇಳದ ವೀಕ್ಷಣೆಗೆ ಆನ್‌ಲೈನ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಸಸಾರ್ವಜನಿಕರ ಪ್ರವೇಶಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ.

38 ಕೃಷಿ ತಂತ್ರಜ್ಞಾನ

ಈ ಬಾರಿಯ ಕೃಷಿ ಮೇಳದಲ್ಲಿ 38 ನಕೃಷಿ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಲ್ಲದೇ ಹಲವು ತಂತ್ರಜ್ಞಾನಗಳನ್ನು ಈ ಬಾರಿ ಪರಿಚಯಿಸಲು ಉದ್ದೇಶಿಸಲಾಗಿದೆ.

ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ಓದಿರಿ: ಭತ್ತದ ಹುಲ್ಲು ಆಧಾರಿತ ಪ್ಲಾಂಟ್‌ಗಳ ಸ್ಥಾಪನೆಗೆ ಉತ್ತೇಜನ; 1.4 ಕೋಟಿ ರೂ ಹಣಕಾಸಿನ ನೆರವು!

ಕೃಷಿ ಮೇಳದ ವಿಶೇಷತೆಗಳು

  • ಕೃಷಿಯಲ್ಲಿ ನೂತನ ಮಾಹಿತಿ ತತಂತಂತ್ರಜ್ಞಾನ 
  • ಜೈವಿಕ ಹಾಗೂ ನವೀಶರಿಸಲ್ಪಡುವ ಇಂಧನ
  • ಜಲಾಯನ ನಿರ್ವಹಣೆ
  • ಸಾವಯವ ಕೃಷಿ ಪದ್ಧತಿಗಳು
  • ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆಗಳು
  • ಮಾರುಕಟ್ಟೆ ನೈಪುಣ್ಯತೆ ಮಾಮಮಾಹಿತಿ
  • ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಂ ಹಾಗೂ ಮೀನು ಸಾಕಣೆ
  • ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನ
  • ಸಿರಿಧಾನ್ಯಗಳು ಹಾಗೂ ಮಹತ್ವ
  • ಬಿತ್ತನೆ ಬೀಜಗಳ ಮೊಳಕ ಪರೀಕ್ಷೆ ಹಾಗೂ ಶೇಖರಣೆ
  • ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು
  • ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿತೆಗಳು
  • ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಂಗಳ ಪ್ರಾತ್ಯಕ್ಷಿಕೆಗಳು
  • ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
  • ಮಳೆ ಹಾಗೂ ಮೇಲ್ಛಾವಣಿ ನೀರಿನ ಕೂಯ್ಲು 
  • ಹವಾಮಾನ ಚತುರ ಕೃಷಿ
  • ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಪೀಡೆ ನಿರ್ವಹಣೆ
  • ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆಗಳು
  • ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು
  • ಮಣ್ಣು ಪರೀಕ್ಷೆಗೆ ಅನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ
  • ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು    

ಜಿಕೆವಿಕೆ ಪ್ರದೇಶ ದ್ವಾರಕ್ಕೆ ಬಸ್‌ ವ್ಯವಸ್ಥೆ   

ಬೆಂಗಳೂರು ಕೆಂಪೇಗೌಡ ಬಸ್‌ (ಮೆಜೆಸ್ಟಿಕ್‌)ನಿಲ್ದಾಣದಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಪ್ರವೇಶ ದ್ವಾರಕ್ಕೆ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಸ್‌ಗಳ ಸಂಖ್ಯಾ ವಿವರ 277, 280, 281, 283, 284,284ಎ, 284ಬಿ, 284ಸಿ, 284ಡಿ, 285, 286ಎ, 289, 289ಎ, 402, 298ಎಂ, 299.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರವೇಶ ದ್ವಾರದಿಂದ ಕೃಷಿಮೇಳದ ಸ್ಥಳಕ್ಕೆ ಹೋಗಲು ಕೃಷಿ ವಿಶ್ವವಿದ್ಯಾನಿಲಯದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ನಿಗದಿತ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ : https://uasbangalore.edu.in/index.php/krishimela-2022-en