News

Kambala ನಮ್ಮ ಕಂಬಳಕ್ಕೆ ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್‌!

26 November, 2023 4:18 PM IST By: Hitesh
ಬೆಂಗಳೂರು ಕಂಬಳ; ನಮ್ಮ ಕಂಬಳಕ್ಕೆ ಭರ್ಜರಿ ರೆಸ್ಪಾನ್ಸ್‌! (ಚಿತ್ರಕೃಪೆ: Karnataka Tourism)

ಬೆಂಗಳೂರು ಇದೇ ಮೊದಲ ಬಾರಿ ಕಂಬಳ (Kambala )ಕ್ರೀಡೆ ಆಯೋಜನೆಯಿಂದ ಮತ್ತಷ್ಟು ಆಕರ್ಷಣೆ ಪಡೆದುಕೊಂಡಿದೆ.

ಕಂಬಳವು ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾಗಿದ್ದು, ಇದರಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆ ನಡೆಯುತ್ತದೆ. 

ಬೆಂಗಳೂರಿನಲ್ಲಿ ನಡೆಯುತ್ತಿರುವ “ನಮ್ಮ ಕಂಬಳ” ಕಾರ್ಯಕ್ರಮವು ರಾಷ್ಟ್ರಮಟ್ಟದಲ್ಲಿ ಕಂಬಳದ ಸಾಂಸ್ಕೃತಿಕ

ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು.  

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಕಂಬವಳಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಸಣ್ಣಪುಟ್ಟ ದೋಷಗಳನ್ನು ಹೊರತುಪಡಿಸಿದರೆ, ಕಂಬಳಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ ಎಂದೇ ಹೇಳಬಹುದು.

ಕರ್ನಾಟಕದ ರೋಮಾಂಚಕ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು  ಕರಾವಳಿ ಸಾಂಸ್ಕೃತಿಕ ಕ್ರೀಡೆಯಾದ

'ಕಂಬಳ'ವನ್ನು ಆಯೋಜಿಸಲಾಗಿತ್ತು. ಇದಕ್ಕೆ ಬೆಂಗಳೂರಿಗರು ಸೇರಿದಂತೆ ವಿದೇಶಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಈ ಕ್ರೀಡೆಯನ್ನು ಆಯೋಜನೆ ಮಾಡಿ, ಜನರನ್ನು ಈ ಜಾನಪದ ಕ್ರೀಡೆಯತ್ತ ಆಕರ್ಷಿಸುವ ಯಾವುದೇ ಅವಕಾಶವನ್ನು

ಸಂಘಟನಾಕಾರರು ಬಿಡುತ್ತಿಲ್ಲ.  ದೇಶದಾದ್ಯಂತ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದ್ದು, ಇಡೀ ದೇಶದ ಗಮನ

ಸೆಳೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.  

ಕರಾವಳಿ ಪ್ರದೇಶಗಳಿಂದ ಸುಮಾರು 200 ಜೋಡಿ ಕೋಣಗಳು, ಅವುಗಳ ಮಾಲೀಕರೊಂದಿಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿರುವುದರಿಂದ

ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭಕ್ಕಾಗಿ ನಿಖರವಾಗಿ ವ್ಯವಸ್ಥೆಗೊಳಿಸಲಾದ ಅರಮನೆ ಮೈದಾನವು ಗುರುವಾರ ಪ್ರಾಯೋಗಿಕ ರನ್‌ಗೆ ಸಾಕ್ಷಿಯಾಗಿತ್ತು.

ಈವೆಂಟ್‌ನ ಸುತ್ತಲಿನ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

 ಗಣ್ಯರಿಗೆ ನೀಡಲಾಗಿತ್ತು ಆಹ್ವಾನ!

ಐಶ್ವರ್ಯಾ ರೈ ಬಚ್ಚನ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕೆಎಲ್ ರಾಹುಲ್, ಸುನಿಲ್ ಶೆಟ್ಟಿ, ದರ್ಶನ್ ಮತ್ತು ಸ್ಯಾಂಡಲ್‌ವುಡ್‌ನ ವಿವಿಧ ನಟರಿಗೆ ಆಹ್ವಾನ

ನೀಡುವುದರೊಂದಿಗೆ ಈ ಕಾರ್ಯಕ್ರಮವು ಗಮನಾರ್ಹ ವ್ಯಕ್ತಿಗಳಿಂದ ಗಮನ ಸೆಳೆದಿತ್ತು. ಇನ್ನು ಈ ಕಾರ್ಯಕ್ರಮವನ್ನು

ದಿ. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗಿದೆ. ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು

ಬೆಂಗಳೂರು ಪೊಲೀಸರು ಸಮಗ್ರ ಭದ್ರತಾ ಕ್ರಮಗಳನ್ನು  ಕೈಗೊಂಡಿದ್ದರು.

ಕಂಬಳದ ಪುನರುತ್ಥಾನ

ಕಂಬಳ, ಕೆಸರು ತುಂಬಿದ ಗದ್ದೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕೋಣಗಳ ಓಟವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ವಿಶೇಷವಾಗಿ

ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ನವೆಂಬರ್ ಮತ್ತು ಮಾರ್ಚ್ ನಡುವೆ ಸಾಂಸ್ಕೃತಿಕ ವಿದ್ಯಮಾನವಾಗಿದೆ. ಪ್ರಾಣಿ ಹಿಂಸೆಯ ಬಗ್ಗೆ

ಕಳವಳದಿಂದಾಗಿ 2014ರಲ್ಲಿ ಕ್ರೀಡೆಯು ನಿಷೇಧವನ್ನು ಎದುರಿಸಿತ್ತು. ಆದರೆ, ಸಾರ್ವಜನಿಕ ಮತ್ತು ರಾಜಕೀಯ ಒತ್ತಡದ ನಂತರ

ಇದನ್ನು 2017ರಲ್ಲಿ ಕಾನೂನುಬದ್ಧಗೊಳಿಸಲಾಯಿತು.

ಕಂಬಳ ಎಂದರೇನು?

ಕಂಬಳವು ಕರ್ನಾಟಕದ ಕರಾವಳಿ ಭಾಗದ ವಿಶೇಷ ಕ್ರೀಡೆಯಾಗಿದೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ

ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ

ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ.

ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.

ಕರ್ನಾಟಕದಾಚೆಗಿನ ಸಾಂಸ್ಕೃತಿಕ ಪ್ರಭಾವ

ಕಂಬಳವನ್ನು ಕರ್ನಾಟಕದ ಹೊರಗೆ ಜನಪ್ರಿಯಗೊಳಿಸುವಲ್ಲಿ, ಅದನ್ನು ಬ್ಲಾಕ್‌ಬಸ್ಟರ್ ಆಗಿ ಪರಿವರ್ತಿಸುವಲ್ಲಿ ಮತ್ತು ವಿಶಿಷ್ಟ ಕ್ರೀಡೆಯನ್ನು

ದೇಶದಾದ್ಯಂತ ಪ್ರೇಕ್ಷಕರ ಗಮನಕ್ಕೆ ತರುವಲ್ಲಿ  ಈಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ 'ಕಾಂತಾರ' ಪ್ರಮುಖ ಪಾತ್ರ ವಹಿಸಿದೆ ಎನ್ನಬಹುದು.