News

ಪ್ರಯಾಣಿಕರನ್ನು ಬಿಟ್ಟು ಹೊರಟ ರೈಲು; ರೈಲ್ವೆ ಸಿಬ್ಬಂದಿಯ ತಪ್ಪಿನಿಂದ ಪರದಾಡಿದ ಜನ!

26 June, 2023 5:07 PM IST By: Hitesh
A train leaving passengers behind; The people who were upset by the mistake of the railway staff!

ರೈಲಿಗಾಗಿ ತಾಸುಗಟ್ಟಲೆ ಕಾಯುತ್ತಿದ್ದ ಪ್ರಯಾಣಿಕರನ್ನು ಬಿಟ್ಟು ರೈಲು ಹೋಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ!

ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರು ರೈಲ್ವೆಯ ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿನಿಂದಾಗಿ ಸಮಸ್ಯೆ ಎದುರಿಸಿದರು.

ರೈಲ್ವೆ ಅಧಿಕಾರಿಗಳ ಅಚಾತುರ್ಯದಿಂದಾಗಿ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಪ್ರಯಾಣಿಕರು ರೈಲು ಸಿಗದೆ ಪರದಾಡಿದ್ದಾರೆ. 

ಭಾನುವಾರ ಬೆಳಿಗ್ಗೆ ಕಲಬುರಗಿ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ಗಾಗಿ ಕಾಯುತ್ತಿದ್ದ ರೈಲು ಪ್ರಯಾಣಿಕರು ರೈಲು

ಆಗಮನ ಮತ್ತು ನಿರ್ಗಮನ ಮತ್ತು ಅದರ ಪ್ಲಾಟ್‌ಫಾರ್ಮ್ ಮಾಹಿತಿಯ ಕುರಿತು ರೈಲ್ವೆ ನಿಲ್ದಾಣದ ಅಧಿಕಾರಿಗಳು ನಿರ್ದಿಷ್ಟವಾಗಿ

ಹಾಗೂ ಸಕಾಲದಲ್ಲಿ ಘೋಷಣೆ ಮಾಡದ ಇರುವುದರಿಂದಾಗಿ ರೈಲು ಸಿಗದೆ ಪರದಾಡಿದ್ದಾರೆ.

ರೈಲ್ವೆ ಅಧಿಕಾರಿಗಳು ಮತ್ತು ಕೆಲವು ಪ್ರಯಾಣಿಕರು ಹೇಳುವಂತೆ, ಶನಿವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟ

ರೈಲು 5.57 ಕ್ಕೆ ಕಲಬುರಗಿ ತಲುಪಿ 6.00ಕ್ಕೆ ನಿಲ್ದಾಣದಿಂದ ಹೊರಡಬೇಕಿತ್ತು.

ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಪ್ರಯಾಣಿಕರು ಕಾರಿಡಾರ್‌ನಲ್ಲಿ ಕಾಯುತ್ತಿದ್ದರು ಮತ್ತು ರೈಲು ಬೇರೆ ಯಾವುದೋ ಪ್ಲಾಟ್‌ಫಾರ್ಮ್‌ನಲ್ಲಿ

ಬಂದು ಕೆಲವು ನಿಮಿಷಗಳ ಕಾಲ ನಿಲ್ಲಿಸಿದ ನಂತರ ಸಿಖಂದರಾಬಾದ್‌ಗೆ ಹೊರಟಿತು.

ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ರೈಲು ಯಾವಾಗ ಬಂದಿತೋ ತಿಳಿಯದೇ ನಿಲ್ದಾಣದಿಂದ ನಿರ್ಗಮಿಸಿದರ ಬಗ್ಗೆಯೂ

ಯಾವುದೇ ಮಾಹಿತಿ ಸಿಗದೆ ಪರದಾಡಿದರು.  ಅದೇ ಮಾರ್ಗದಲ್ಲಿ ಮುಂದಿನ ರೈಲು - ಹುಸೇನ್ ಸಾಗರ್ ಎಕ್ಸ್‌ಪ್ರೆಸ್ - ಘೋಷಣೆ

ಮಾಡಿದ ನಂತರವೇ ಅವರು ಹೊರಡುವ ಬಗ್ಗೆ ತಿಳಿದಿದೆ.

ಕೆಲ ಪ್ರಯಾಣಿಕರು ರೈಲ್ವೆ ನಿಲ್ದಾಣದ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ನಿರ್ಲಕ್ಷ್ಯವನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡರು.

ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ತಪ್ಪಿಸಿಕೊಂಡ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ಗೆ ನಾವು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೇವೆ.

ನಿಲ್ದಾಣದ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದದ ನಂತರ, ಅವರು ಅದೇ ಟಿಕೆಟ್‌ಗಳೊಂದಿಗೆ ಮುಂದಿನ ರೈಲಿಗೆ ಪ್ರಯಾಣಿಕರನ್ನು ಕಳುಹಿಸಲು ವ್ಯವಸ್ಥೆ ಮಾಡಿದರು.   

ಒಡಿಶಾದ ದುರಂತ

ಈಚೆಗಷ್ಟೇ ಒಡಿಶಾದಲ್ಲಿ ನಡೆದಿದ್ದ ರೈಲ್ವೆ ದುರಂತದಲ್ಲಿ 280ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದಾದ ಒಂದು ತಿಂಗಳ ಅಂತರದಲ್ಲಿ ಈ ರೀತಿ ಅಚಾತುರ್ಯ ನಡೆಯುತ್ತಿರುವುದು ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.