News

ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಒಂದೇ ದಿನ35,024 ಮಂದಿಗೆ ಸೋಂಕು, 270 ಜನರು ಸಾವು

29 April, 2021 8:59 PM IST By:
covid

ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗಿದ್ದು, ಗುರುವಾರ ಸಹ ಒಂದಿ ದಿನ 30ಸಾವಿರ ಗಡಿ ದಾಟಿದೆ. ಗುರುವಾರ ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 35,024 ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ ರಾಜ್ಯದಲ್ಲಿ 270 ಜನರು‌ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಕಳೆದ 24 ಗಂಟೆಯಲ್ಲಿ 19,637 ಜನ ಸೋಂಕಿಗೆ ತುತ್ತಾಗಿದ್ದಾರೆ.ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 143 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇವತ್ತು 14,142 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಐಸಿಯುನಲ್ಲಿ 2,431 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 14,74,846ಕ್ಕೇರಿಕೆಯಾಗಿದೆ. ಇದುವರೆಗೂ 15,306 ಜನರು ಇದುವರೆಗೆ ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.19.92 ಮತ್ತು ಮರಣ ಪ್ರಮಾಣ ಶೇ.0.77ರಷ್ಟಿದೆ. ಇವತ್ತು 1,75,816 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಾಲ್ಕಂಕಿ ದಾಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 302, ಬಳ್ಳಾರಿ 896, ಬೆಳಗಾವಿ 545, ಬೆಂಗಳೂರು ಗ್ರಾಮಾಂತರ 1,129, ಬೆಂಗಳೂರು ನಗರ 19,637, ಬೀದರ್ 180, ಚಾಮರಾಜನಗರ 359, ಚಿಕ್ಕಬಳ್ಳಾಪುರ 545, ಚಿಕ್ಕಮಗಳೂರು 242, ಚಿತ್ರದುರ್ಗ 126, ದಕ್ಷಿಣ ಕನ್ನಡ 1,175, ದಾವಣಗೆರೆ 196, ಧಾರವಾಡ 427, ಗದಗ 132, ಹಾಸನ 624, ಹಾವೇರಿ 111, ಕಲಬುರಗಿ 957, ಕೊಡಗು 537, ಕೋಲಾರ 536, ಕೊಪ್ಪಳ 220, ಮಂಡ್ಯ 939, ಮೈಸೂರು 1,219, ರಾಯಚೂರು 628, ರಾಮನಗರ 183, ಶಿವಮೊಗ್ಗ 372, ತುಮಕೂರು 1,195, ಉಡುಪಿ 568, ಉತ್ತರ ಕನ್ನಡ 377, ವಿಜಯಪುರ 408 ಮತ್ತು ಯಾದಗಿರಿಯಲ್ಲಿ 259 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.