News

2 ಸಾವಿರದ ಕೆಂಪು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುತ್ತಿದ್ದೀರಾ ಮೋದಿಯವ್ರೇ..?

27 February, 2019 6:53 PM IST By:
ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ರೈತರ ಬಗ್ಗೆ ಕಾಳಜಿ ಬಂದಿದೆ ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ರೈತರ ಪರ ಕಾಳಜಿ ಬಂದಿದ್ದು, ಈಗ ರೈತರ ಖಾತೆಗೆ ಎರಡು ಸಾವಿರ ರೂ. ಹಣ ಜಮಾ ಮಾಡ್ತಿದ್ದಾರೆ. ಸರ್ಕಾರದ ಹಣವನ್ನ ರೈತ್ರಿಗೆ ಹಂಚುತ್ತಿದ್ದೀರಿ, ಎರಡು ಸಾವಿರ ರೂಪಾಯಿ ಕೆಂಪು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುತ್ತಿದ್ದೀರಾ? ಮೋದಿಯವರೇ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.