Agripedia

ಒಂದೇ ಬೆಳೆಯಲ್ಲಿ ನಾಲ್ಕು ಬೆಳೆ! ಈ ಹೊಸ ತಂತ್ರದಿಂದ ರೈತರಿಗೆ ಭಾರೀ ಹಣ ಸಿಗಲಿದೆ

19 August, 2022 10:57 AM IST By: Maltesh
Four crops in one crop! Farmers will get huge money from this new technique

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕೃಷಿ ಮಾಡುತ್ತಾರೆ. ಅನೇಕ ಜನರ ಜೀವನ ಮಟ್ಟವು ಅದರ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದಾಗಿ ಕೃಷಿಯನ್ನು ಸುಧಾರಿಸುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಆಧುನಿಕ ಕೃಷಿಗೆ ಪ್ರಾಮುಖ್ಯತೆ ಬಂದಿದೆ.

ಪ್ರಸ್ತುತ, ರೈತರು ಸಾಂಪ್ರದಾಯಿಕ ಕೃಷಿ ಮಾಡುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದರಿಂದಾಗಿ ಅನೇಕ ರೈತರಿಗೆ ಸುಗ್ಗಿಯ ದಿನಗಳು ಬಂದಿವೆ . ಆದರೆ, ಈಗ ಹೊಸ ತಂತ್ರಜ್ಞಾನ ಬಂದ ಮೇಲೆ ರೈತರ ಕೃಷಿ ಮೊದಲಿಗಿಂತ ಸ್ವಲ್ಪ ಸುಲಭವಾಗಿದೆ, ಭಿನ್ನವಾಗಿದೆ ಅದರ ಜೊತೆ ಲಾಭವೂ ಹೆಚ್ಚಿದೆ.

ಹೌದು ಈಗ ರೈತರು ಕೂಡ ಒಂದೇ ಬೆಳೆಯಲ್ಲಿ ಹೆಚ್ಚು ಬೆಳೆಗಳನ್ನು ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಈಗ 4 ರಿಂದ 5 ಬೆಳೆಗಳನ್ನು ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಬೆಳೆಯುವ ಅಭ್ಯಾಸವನ್ನು ಬಹು ಹಂತದ ಕೃಷಿ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ರೈತರು ಮೊದಲು ಎಲ್ಲ ಕಾಲಕ್ಕೂ ಬೆಳೆಯು ಬಹುದಾದ ಬೆಳೆಯನ್ನು ಬೆಳೆಯನ್ನು ನೆಡಬೇಕು. ನಂತರ ಅದೇ ಗದ್ದೆಯಲ್ಲಿ ತರಕಾರಿ ಮತ್ತಿತರ ಗಿಡಗಳನ್ನು ನೆಡಬಹುದು. ಇದಲ್ಲದೆ ರೈತರು ಅದೇ ಜಮೀನಿನಲ್ಲಿ ಉತ್ತಮ ಬೆಳೆ ಮತ್ತು ಹಣ್ಣಿನ ಮರಗಳನ್ನು ನೆಡಬಹುದು. ಈ ಕಾರಣದಿಂದಾಗಿ, ಈ ರೀತಿಯ ಕೃಷಿ ಪ್ರಸ್ತುತವಾಗಿ ಲಾಭದಾಯಕವಾಗಿದೆ.

ಪಿಯುಸಿ ಹಾಗೂ ಪದವಿ ಪಾಸ್‌ ಆದವರಿಗೆ ಇಲ್ಲಿದೆ ಟಾಪ್‌ 5 ನೇಮಕಾತಿ ವಿವರಗಳು

ಅಲ್ಲದೆ, ರಸಗೊಬ್ಬರ ಮತ್ತು ನೀರಿನ ಸರಿಯಾದ ನಿರ್ವಹಣೆ ಮಾಡಿದರೆ, ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಇದರಲ್ಲಿ ಒಂದು ಬೆಳೆಗೆ ನೀರು ಕೊಡುವುದರಿಂದ ರೈತರು ನಾಲ್ಕು ಬಗೆಯ ಬೆಳೆ ಬೆಳೆಯಬಹುದು. ಇದು ಅವರ ಸಾಗುವಳಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಅವರು ಹೆಚ್ಚು ಭೂಮಿಯನ್ನು ಹಿಡಿದಿಟ್ಟುಕೊಳ್ಳುವ ಅಗತ್ಯವಿಲ್ಲ. ಅದೇ ಸಮಯದಲ್ಲಿ, ಈ ಕೃಷಿಯಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲ.

ಇದಕ್ಕೆ ಕಾರಣ ಒಮ್ಮೆ ನೀರು ಕೊಟ್ಟರೆ 4 ಬೆಳೆಗೆ ಒಂದೇ ಬಾರಿ ನೀರು ಸಿಗುತ್ತದೆ. ಹಾಗಾಗಿ ರೈತರು ದುಪ್ಪಟ್ಟು ನೀರು ಕೊಡಬೇಕಾಗಿಲ್ಲ. ಇದರಲ್ಲಿ ರೈತರು ಮೊದಲು ತಮ್ಮ ಹೊಲಗಳಲ್ಲಿ ಬೆಳೆಯನ್ನು ನೆಡಬೇಕು. ನಂತರ ಅದೇ ಗದ್ದೆಯಲ್ಲಿ ತರಕಾರಿ ಮತ್ತಿತರ ಗಿಡಗಳನ್ನು ನೆಡಬಹುದು. ಇದಲ್ಲದೇ ಹಲವು ರೈತರು ಅದೇ ಜಮೀನಿನಲ್ಲಿ ಕೆಳಗೆ ಒಂದರಂತೆ ಉತ್ತಮ ಬೆಳೆ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ರೈತ ಉತ್ತಮ ಬೆಳೆ ಬೆಳೆಯುವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ.

ರೈತನಿಗೆ ರೂ.1 ಲಕ್ಷದವರೆಗೆ ವೆಚ್ಚವಾದರೆ, ರೈತರು ಸುಲಭವಾಗಿ ರೂ.5 ಲಕ್ಷದವರೆಗೆ ಲಾಭ ಗಳಿಸಬಹುದು. ಆದ್ದರಿಂದ ಈ ರೀತಿಯ ಕೃಷಿ ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ರೈತರು ಪ್ರಯೋಗಶೀಲತೆ ನಡೆಸುವುದು ಅನಿವಾರ್ಯವಾಗಿದೆ. ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರು ಈ ಕೃಷಿಯನ್ನು ಮಾಡಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ.

ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ 10 ಸಾವಿರ ರೂಪಾಯಿ ಸಹಾಯಧನ